Advertisement

ಡಾ|ಅಂಬೇಡ್ಕರ್‌ ಶ್ರೇಷ್ಠ ಮಾನವತಾವಾದಿ: ಪ್ರಸಾದ ಅಬ್ಬಯ್ಯ

07:36 PM Apr 15, 2021 | Team Udayavani |

ಹುಬ್ಬಳ್ಳಿ: ವಿಶ್ವಕಂಡ ಶ್ರೇಷ್ಠ ಮಾನವತಾವಾದಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಾಮಾಜಿಕ ಕ್ರಾಂತಿಯ ಸಂಕೇತವಾಗಿದ್ದಲ್ಲದೇ, ತಳ ಸಮುದಾಯ ಜನರ ಶೋಷಣೆ ನಿವಾರಣೆಗೆ ನಿರಂತರ ಹೋರಾಡಿ ಅವರ ಬದುಕಿಗೆ ನೈಜ ಅರ್ಥ ಕೊಟ್ಟ ಕ್ರಾಂತಿಕಾರಕ ಶಿಲ್ಪಿಯಾಗಿದ್ದರು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಡಾ|ಬಿ.ಆರ್‌.ಅಂಬೇಡ್ಕರ್‌ ಅವರ 130ನೇ ಜಯಂತ್ಯುತ್ಸವ ನಿಮಿತ್ತ ಬುಧವಾರ ಸ್ಟೇಶನ್‌ ರಸ್ತೆಯ ಡಾ|ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

Advertisement

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜಯಂತಿ ದೇಶದ ಜನತೆಗೆ ರಾಷ್ಟ್ರೀಯ ಹಬ್ಬದಂತಾಗಿದೆ. ಶೋಷಿತ, ತಳಸಮುದಾಯ ಜನರು ಇಂದಿಗೂ ಆರಾಧ್ಯ ದೈವ ಎಂದು ಪೂಜಿಸುವ ಶ್ರೇಷ್ಠ ವ್ಯಕ್ತಿ ಅವರಾಗಿದ್ದಾರೆ. ಇಂದು ಎಲ್ಲೆಡೆ ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದ ಅಂದಿನ ಕಾಲದಲ್ಲಿ ಎಸ್ಸಿ-ಎಸ್ಟಿ- ಒಬಿಸಿ ಸಮುದಾಯವನ್ನು ಅವರು ರಕ್ಷಿಸಿದಂತೆ ಇಂದು ಅವರು ಬರೆದುಕೊಟ್ಟ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುತ್ತಿದೆ ಎಂದರು. ಹಿಂದೂ ಕೋಡ್‌ ಬಿಲ್‌ ಮುಖಾಂತರ ಸ್ತ್ರೀಯರಿಗೆ ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಡಿದ ಅವರು, ಕ್ಯಾಬಿನೇಟ್‌ನಲ್ಲಿ ಆ ಮಸೂದೆ ಬಿದ್ದು ಹೋದಾಗ ವಿಷಯಾಧಾರಿತವಾಗಿ ರಾಜಿನಾಮೆ ನೀಡಿ ಹೊರ ಬಂದ ಏಕೈಕ ರಾಜತಾಂತ್ರಿಕ ಆಗಿದ್ದಾರೆ. ಮಹಿಳೆಯರಿಗೆ ಮತದಾನ, ರಾಜಕೀಯ ಹಕ್ಕುಗಳೊಂದಿಗೆ ಎಲ್ಲ ಕ್ಷೇತ್ರದಲ್ಲೂ ಸಮಾನತೆಯ ಹಕ್ಕು ನೀಡಿದ್ದಾರೆ.

ದೇಶದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಭೂಮಿ ರಾಷ್ಟ್ರೀಕರಣವಾಗಬೇಕೆಂದು ಅವರು ಕನಸು ಕಂಡಿದ್ದರು. ಆದರೆ, ಇಂದು ಅವೆಲ್ಲ ಖಾಸಗೀಕರಣಗೊಳ್ಳುತ್ತಿವೆ. ಇದರಲ್ಲಿ ಪರೋಕ್ಷವಾಗಿ ನಮ್ಮ ಮೀಸಲಾತಿ ಕಸಿಯುವ ಹುನ್ನಾರ ಅಡಗಿದೆ ಎಂದರು. ದೇಶದಲ್ಲಿ ಇಂತಿಷ್ಟೇ ಅವ ಧಿಗೆ ಮೀಸಲಾತಿ ಎಂಬನಿ ರ್ದಿಷ್ಟ ಕಾಲಮಿತಿಯಿಲ್ಲ. ದೇಶದಲ್ಲಿ ಎಲ್ಲಿಯವರೆಗೆ ಸಾಮಾಜಿಕ ಪಿಡುಗು, ಅಸಮಾನತೆ, ಶೋಷಣೆ, ಜಾತಿ ವ್ಯವಸ್ಥೆ ನಿವಾರಣೆಯಾಗುವುದಿಲ್ಲವೋ ಅಲ್ಲಿವರೆಗೂ ಮೀಸಲಾತಿ ಇದ್ದೆ ಇರುತ್ತದೆ ಎಂದು ಪ್ರತಿಪಾದಿಸಿದರು.

ಮುಖಂಡರಾದ ಸದಾನಂದ ಡಂಗನವರ, ವೆಂಕಟೇಶ ಮೇಸ್ತ್ರೀ, ಯಮನೂರು ಜಾಧವ, ಯಮನೂರು ಗುಡಿಹಾಳ, ದಶರಥ ವಾಲಿ, ವಿಜನಗೌಡ ಪಾಟೀಲ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ಪ್ರಭು ಪ್ರಭಾಕರ, ಚೇತನ ಹಿರೇಕೆರೂರ, ಗಣೇಶ ದೊಡ್ಡಮನಿ, ಮಾರುತಿ ದೊಡ್ಡಮನಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next