Advertisement

6 ಕೋಟಿ ಮೌಲ್ಯದ ಚಿನ್ನ ದರೋಡೆ: ಆರೋಪಿಗಳ ಪತ್ತೆಗೆ ನೆರವಾದ 100 ರೂ. ಪೇಟಿಎಂ ಪಾವತಿ

02:12 PM Sep 03, 2022 | Team Udayavani |

ನವದೆಹಲಿ : ಪಹರ್‌ಗಂಜ್ ಪ್ರದೇಶದಲ್ಲಿ ಇಬ್ಬರ ಕಣ್ಣಿಗೆ ಮೆಣಸಿನ ಪುಡಿ ಎರಚಿ 6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳನ್ನು ರಾಜಸ್ಥಾನದಿಂದ ಪೇಟಿಎಂ ವಹಿವಾಟಿನ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ಆರೋಪಿಗಳನ್ನು ನಜಾಫ್‌ಗಢ ನಿವಾಸಿಗಳಾದ ನಾಗೇಶ್ ಕುಮಾರ್ (28), ಶಿವಂ (23), ಮತ್ತು ಮನೀಶ್ ಕುಮಾರ್ (22) ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಇಬ್ಬರು ವ್ಯಕ್ತಿಗಳು, ಒಬ್ಬ ಪೊಲೀಸ್ ಸಮವಸ್ತ್ರದಲ್ಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಕೆಲ ಹೊತ್ತಿನ ನಂತರ, ಅವರು ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸುತ್ತಾರೆ. ಈ ಮಧ್ಯೆ, ಇನ್ನೂ ಇಬ್ಬರು ಅವರೊಂದಿಗೆ ಸೇರುತ್ತಾರೆ. ನಂತರ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಪಾರ್ಸೆಲ್ ನೊಂದಿಗೆ ಓಡಿ ಹೋಗಿದ್ದಾರೆ.

ಘಟನೆ ಕುರಿತು ಬುಧವಾರ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ದೂರುದಾರ ಸೋಮವೀರ್ ಅವರು ಚಂಡೀಗಢದ ಪಾರ್ಸೆಲ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮುಂಜಾನೆ 4.15 ರ ಸುಮಾರಿಗೆ, ಅವರು ತಮ್ಮ ಸಹೋದ್ಯೋಗಿ ಜಗದೀಪ್ ಸೈನಿ ಅವರೊಂದಿಗೆ ಪಹರ್‌ಗಂಜ್‌ನಲ್ಲಿರುವ ತಮ್ಮ ಕಚೇರಿಯಿಂದ ಪಾರ್ಸೆಲ್‌ಗಳನ್ನು ತೆಗೆದುಕೊಂಡು ಡಿಬಿಜಿ ರಸ್ತೆಯ ಕಡೆಗೆ ಹೋಗುತ್ತಿದ್ದರು.ಅವರು ಮಿಲೇನಿಯಮ್ ಹೋಟೆಲ್ ಬಳಿ ತಲುಪಿದಾಗ, ಅಲ್ಲಿ ಇಬ್ಬರನ್ನು ನೋಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರಲ್ಲಿ ಒಬ್ಬರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು, ಅವರು ತಪಾಸಣೆಗಾಗಿ ತಮ್ಮ ಬ್ಯಾಗ್‌ಗಳನ್ನು ಕೇಳಿದರು ಎಂದು ಅವರು ಹೇಳಿದರು.

Advertisement

ಅಷ್ಟರಲ್ಲಿ ಮತ್ತಿಬ್ಬರು ಬಂದು ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚೀಲವನ್ನು ಕೊಡಿ ಇಲ್ಲವಾದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳು ಚಿನ್ನಾಭರಣಗಳಿದ್ದ ಪಾರ್ಸೆಲ್‌ಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಪೊಲೀಸರು ಘಟನೆ ನಡೆದ ಏಳು ದಿನಗಳ 700 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಸ್ಥಳದ ಬಳಿ ಸ್ಥಳೀಯ ಗುಪ್ತಚರವನ್ನು ಸಂಗ್ರಹಿಸಿ, ಘಟನಾ ಸ್ಥಳದ ಸಮೀಪ ನಾಲ್ವರ ಚಟುವಟಿಕೆಗಳು ಅನುಮಾನಾಸ್ಪದವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಕ್ಯಾಬ್ ಡ್ರೈವರ್‌ನೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದ್ದು, ಅವರಲ್ಲಿ ಒಬ್ಬ ಚಹಾ ಖರೀದಿಸಲು ನಗದು ಬದಲಾಗಿ 100 ರೂಪಾಯಿಯನ್ನು ಪೇಟಿಎಂ ಮೂಲಕ ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ.

ವ್ಯವಹಾರವನ್ನು ವಿಶ್ಲೇಷಿಸಲಾಗಿ ಅಪರಾಧಿಗಳನ್ನು ನಜಾಫ್‌ಗಢ ನಿವಾಸಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ರಾಜಸ್ಥಾನಕ್ಕೆ ಹೋಗಿರುವುದನ್ನು ಪೊಲೀಸರು ಪತ್ತೆ ಮಾಡಿ, ಜೈಪುರಕ್ಕೆ ತಂಡವನ್ನು ಕಳುಹಿಸಿ ಮೂವರನ್ನು ಬಂಧಿಸಲಾಗಿದೆ.

ಐಐಎಫ್‌ಎಲ್‌ನಲ್ಲಿ ಒಟ್ಟು 6,270 ಗ್ರಾಂ ಚಿನ್ನ, ಮೂರು ಕೆಜಿ ಬೆಳ್ಳಿ, 500 ಗ್ರಾಂ ಚಿನ್ನ ಮತ್ತು 106 ಕಚ್ಚಾ ವಜ್ರಗಳು ಮತ್ತು ಇತರ ವಜ್ರದ ಆಭರಣಗಳು ಸೇರಿ 5.5 ರಿಂದ 6 ಕೋಟಿ ರೂ. ಮೌಲ್ಯದ ನಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇನ್ನುಳಿದ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದ್ದು, ದರೋಡೆಯ ಮಾಸ್ಟರ್ ಮೈಂಡ್ ನಾಗೇಶ್ ತನ್ನ ಸ್ನೇಹಿತರು ಮತ್ತು ತಾಯಿಯ ಚಿಕ್ಕಪ್ಪನೊಂದಿಗೆ ಅಪರಾಧ ಎಸಗಲು ಯೋಜಿಸಿದ್ದನು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next