Advertisement

ಕೇಂದ್ರ ಎಷ್ಟು ಜಡ್ಜ್  ಹೆಸರು ತಡೆದಿದೆ?

06:00 AM May 05, 2018 | |

ನವದೆಹಲಿ: ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಗುದ್ದಾಟ ಶುಕ್ರವಾರ ಸುಪ್ರೀಂಕೋರ್ಟಲ್ಲಿ ಬಹಿರಂಗವಾಗಿಯೇ ವ್ಯಕ್ತವಾಗಿದೆ. 

Advertisement

ಕೊಲೀಜಿಯಂ ಸೂಚಿಸಿದ ಹೆಸರುಗಳನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ನ್ಯಾಯಮೂರ್ತಿ ಗಳಾದ ಮದನ್‌ ಬಿ.ಲೋಕುರ್‌ ಮತ್ತು ದೀಪಕ್‌ ಗುಪ್ತಾ  ಅವರುಳ್ಳ ನ್ಯಾಯಪೀಠ, ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ರನ್ನು ತರಾಟೆಗೆ ತೆಗೆದುಕೊಂಡಿದೆ.

ಎಷ್ಟು ಹೆಸರುಗಳು ಸರ್ಕಾರದ ಬಳಿ ಇವೆ ಎಂದು ಪ್ರಶ್ನಿಸಿದಾಗ, ಅಟಾರ್ನಿ ಜನರಲ್‌ ಅದರ ಬಗ್ಗೆ ಪರಿಶೀಲಿಸಿ ತಿಳಿಸುವುದಾಗಿ ಹೇಳಿದರು. ಅದಕ್ಕೆ ಆಕ್ಷೇಪ ಮಾಡಿದ ನ್ಯಾಯಪೀಠ, ಸರ್ಕಾರಕ್ಕೆ ಪ್ರಶ್ನೆ ಮಾಡಿದಾಗೆಲ್ಲ ಇಂಥ ಉತ್ತರವೇ ಬರುತ್ತದೆ ಎಂದಿತು. ಹೈಕೋರ್ಟ್‌ಗಳಲ್ಲಿ 40 ನ್ಯಾಯಮೂರ್ತಿಗಳ ಹುದ್ದೆಗಳು ಭರ್ತಿಗೆ ಬಾಕಿ ಉಳಿದಿವೆ. ಮೂವರ ಹೆಸರುಗಳನ್ನು ಮಾತ್ರ ಕೊಲೀಜಿಯಂ ಶಿಫಾರಸು ಮಾಡಿದೆ ಎಂದು ಕೆ.ಕೆ.ವೇಣುಗೋಪಾಲ್‌ ಹೇಳಿದಾಗ, ನೇಮಕ ಪ್ರಕ್ರಿಯೆ ನಡೆಸಬೇಕಾದದ್ದು ಸರ್ಕಾರ ಎಂದು ನ್ಯಾಯಪೀಠ ಅಟಾರ್ನಿ ಜನರಲ್‌ಗೆ ನೆನಪಿಸಿತು.

Advertisement

Udayavani is now on Telegram. Click here to join our channel and stay updated with the latest news.

Next