Advertisement

ಕೊಯಮತ್ತೂರು ಸ್ಫೋಟಕ್ಕೂ ಉಗ್ರರ ಸಂಬಂಧ?

12:46 AM Oct 25, 2022 | Team Udayavani |

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಉಕ್ಕಡಮ್‌ ಎಂಬಲ್ಲಿ ರವಿವಾರ ಕಾರು ಸ್ಫೋಟಗೊಂಡು ಜೆಮಿಶಾ ಮುಬೀನ್‌ ಎಂಬ ಎಂಜಿನಿಯರ್‌ ಅಸುನೀಗಿದ ಪ್ರಕರಣಕ್ಕೆ ಉಗ್ರರ ಸಂಪರ್ಕ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

2019ರಲ್ಲಿ ಶ್ರೀಲಂಕೆಯಲ್ಲಿ ನಡೆದಿದ್ದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಆತನ ತನಿಖೆಯನ್ನೂ ನಡೆಸಿತ್ತು ಎಂಬ ಅಂಶ ಬಯಲಾಗಿದೆ.

ಸ್ಫೋಟಗೊಂಡಿರುವ ಕಾರಿನಲ್ಲಿ ಮೊಳೆಗಳು, ಅಮೃತಶಿಲೆ ಕಲ್ಲುಗಳು ಸಿಕ್ಕಿವೆ. ಮುಬೀನ್‌ ಮನೆಯನ್ನೂ ಪೊಲೀಸರು ತಪಾಸಣೆ ನಡೆಸಿದ್ದ ವೇಳೆ ಪೊಟ್ಯಾಶಿಯಂ ನೈಟ್ರೇಟ್‌, ಅಲ್ಯೂಮಿನಿಯಂ ಪುಡಿ, ಸಲ#ರ್‌, ಇದ್ದಿಲು ಸಿಕ್ಕಿವೆ. ಇವು ನಾಡಬಾಂಬುಗಳ ತಯಾರಿಕೆಗೆ ಬಳಸುವ ವಸ್ತುಗಳು. ಹಾಗಾಗಿ ಇದು ಆತ್ಮಹತ್ಯಾ ಸ್ಫೋಟವಾಗಿರಬಹುದೇ ಎಂಬ ಶಂಕೆ ದಟ್ಟವಾಗಿದೆ.

ಶನಿವಾರ ರಾತ್ರಿ 11.25ಕ್ಕೆ ಮುಬೀನ್‌ ಮನೆಯಿಂದ ಐವರು ವ್ಯಕ್ತಿಗಳು; ಗನ್‌ಗಳನ್ನು ಹೊತ್ತೂಯ್ಯುವ ಬ್ಯಾಗ್‌ಗಳೊಂದಿಗೆ ಹೋಗಿದ್ದರು. ಈ ಪೈಕಿ ಮುಬೀನ್‌ ಸಾವನ್ನಪ್ಪಿದ್ದಾರೆ. ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಒಟ್ಟು 7 ಮಂದಿಯನ್ನು ಇದುವರೆಗೆ ವಿಚಾರಣೆ ನಡೆಸಲಾಗಿದೆ. ಇವರೆಲ್ಲ ಮುಬೀನ್‌ ಜತೆಗೆ ಸಂಪರ್ಕ ಹೊಂದಿದ್ದವರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next