Advertisement

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

12:23 PM Dec 03, 2021 | Team Udayavani |

ಬೆಂಗಳೂರು: ಪಕ್ಷಕ್ಕೆ ಸೇರುವ ಜನರ ಸಂಖ್ಯೆ ಹೆಚ್ಚಾಗಿರಬಹುದು ಆದರೆ ಸೇರುವ ಜನ ಎಷ್ಟು ಸಮರ್ಥರು ಎಂಬುದೂ ಮುಖ್ಯವಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ರಾಜ್ಯ ಬಿಜೆಪಿ ಪ್ರಶ್ನಿಸಿದೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ, ರಾಜ್ಯಾದ್ಯಂತ ಕಾಂಗ್ರೆಸ್ ಜಾತ್ರೆ ಶುರುವಾಗಿದೆ ಎಂದಿದ್ದೀರಿ, ಏನು ಪ್ರಯೋಜನ? ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಹೊರಗಿನವರು ಒಳಗಿನವರು ಎಂಬುದು ಕಾಂಗ್ರೆಸ್‌ ಪಕ್ಷದಲ್ಲಿಲ್ಲ ಎನ್ನುತ್ತಲೇ ಸಿದ್ದರಾಮಯ್ಯ ಜೊತೆ ಕಾದಾಡುತ್ತೀರಿ ಎಂದು ಟೀಕೆ ಮಾಡಿದೆ.

ಇದನ್ನೂ ಓದಿ:ಬಿಜೆಪಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸ‌ ಇಲ್ಲ: ದೇಶಪಾಂಡೆ

ಆಕಾಶ ನೋಡುವುದಕ್ಕೂ ಕೆಲವೊಮ್ಮೆ ನೂಕು‌ನುಗ್ಗಲಾಗುತ್ತದೆ. ಇನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಾತ್ರೆ ಸೇರುವುದು ಹೆಚ್ಚೇ ಎಂದು ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.

Koo App

Advertisement

Udayavani is now on Telegram. Click here to join our channel and stay updated with the latest news.

Next