Advertisement

ಎಷ್ಟು ಸಮಯದವರೆಗೆ ಹೆದ್ದಾರಿ ತಡೆ ಸಾಧ್ಯ?: ರೈತ ಸಂಘಟನೆಗಳಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

11:44 PM Sep 30, 2021 | Team Udayavani |

ಹೊಸದಿಲ್ಲಿ: “ಎಷ್ಟು ಸಮಯದ ವರೆಗೆ ಹೆದ್ದಾರಿಯನ್ನು ಉದ್ದೇಶ ಪೂರ್ವಕವಾಗಿ ತಡೆಹಿಡಿಯುತ್ತೀರಿ’? ಹೀಗೆಂದು ಸುಪ್ರೀಂ ಕೋರ್ಟ್‌ ಗುರುವಾರ ರೈತ ಸಂಘಟನೆಗಳಿಗೆ ಪ್ರಶ್ನೆ ಮಾಡಿದೆ.

Advertisement

ರೈತ ಕಾಯ್ದೆ ವಿರುದ್ಧ ಪ್ರತಿಭಟನೆಯಿಂದ ಸಂಚಾರಕ್ಕೆ  ತೊಂದರೆಯಾಗುತ್ತಿದೆ ಎಂಬ ಅರ್ಜಿಯ ವಿಚಾರಣೆ ನ್ಯಾ| ಎಸ್‌.ಕೆ. ಕೌಲ್‌ ನೇತೃತ್ವದ ನ್ಯಾಯಪೀಠ ನಡೆಸಿತು.

ನ್ಯಾಯಾಂಗದ ಮೂಲಕ, ಸಂಸತ್‌ನಲ್ಲಿ ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು ಎಂದಿತು. ಸರಕಾರ ಕ್ರಮದ ಬಗ್ಗೆ  ಪ್ರಶ್ನಿಸಿದಾಗ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ  ಅರಿಕೆ ಮಾಡಿ ಕಾಯ್ದೆಗಳ ಪರಿಶೀಲನೆಗೆ ಸಮಿತಿ ರಚಿಸಿದೆ ಮತ್ತು ಮಾತುಕತೆಗೆ ರೈತ ಮುಖಂಡರನ್ನು ಆಹ್ವಾನಿಸಿದರೂ ಅವರು ಬಂದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next