Advertisement

ಬೈಕಂಪಾಡಿ: ಮನೆ ಬೆಂಕಿಗಾಹುತಿ

11:22 AM Dec 16, 2018 | Harsha Rao |

ಸುರತ್ಕಲ್‌: ಬೈಕಂಪಾಡಿ ಸಮೀಪದ ಮೀನಕಳಿಯದಲ್ಲಿ ಶನಿವಾರ ಪೂರ್ವಾಹ್ನ ಮನೆಯೊಂದು ಬೆಂಕಿಗಾಹುತಿಯಾಗಿದೆ.

Advertisement

ಕೇಶವ ಕುಲಾಲ್‌ ಅವರು ಬೆಳಗ್ಗೆ ಎಂದಿನಂತೆ ಬೈಕಂಪಾಡಿಯಲ್ಲಿರುವ ತಮ್ಮ ಕ್ಯಾಂಟೀನ್‌ ಕೆಲಸಕ್ಕೆ ತೆರಳಿದ್ದರು. ಹನ್ನೊಂದು ಗಂಟೆ ಸುಮಾರಿಗೆ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಅಮೂಲ್ಯ ವಸ್ತುಗಳು, ದಾಖಲೆ ಪತ್ರ, ಬಟ್ಟೆ ಬರೆ ಸಹಿತ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸಿದರು. ಸ್ಥಳೀಯ ಕೋಡಿಕಲ್‌ ಮೊಗವೀರ ಮಹಾಸಭಾದ ಸದಸ್ಯರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ನೆರವಾದರು.

ಬೀದಿಗೆ ಬಿದ್ದ ಕುಟುಂಬ: ಕೇಶವ ಕುಲಾಲ್‌ ಅವರು ಸಣ್ಣ ಕ್ಯಾಂಟೀನ್‌ ನಡೆಸುತ್ತಿದ್ದು, ಅವರದ್ದು ಇಬ್ಬರು ಹೆಣ್ಣು ಮಕ್ಕಳಿರುವ ಬಡ ಕುಟುಂಬವಾಗಿದೆ. ಘಟನೆಯಿಂದ ಅವರು ತೀವ್ರ ಆಘಾತಕ್ಕೀಡಾಗಿದ್ದು, ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next