Advertisement

ಕಾವೂರು: ಬೆಂಕಿಗಾಹುತಿಯಾಯ್ತು ವಾಸದ ಮನೆ..; ಕಂಗಾಲಾದ ಬಡ ಕುಟುಂಬ

12:21 PM Jan 23, 2023 | Team Udayavani |

ಮಂಗಳೂರು: ಇಲ್ಲಿನ ಕಾವೂರು ಪಳನೀರು ಎಂಬಲ್ಲಿ ಬಡ ಕುಟುಂಬದ ಮನೆಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಮನೆ ಹೊತ್ತಿ ಉರಿದ ಘಟನೆ ಸೋಮವಾರ ನಡೆದಿದೆ.

Advertisement

ಸೋಮವಾರ ಬೆಳಗ್ಗೆ ಮನೆಮಂದಿಯೆಲ್ಲಾ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಇಂದಿರಾ ಎಂಬವರಿಗೆ ಸೇರಿದ ಮನೆ ಹೊತ್ತಿ ಉರಿದಿದೆ.

ಇದನ್ನೂ ಓದಿ:ಸಿನಿಮಾವೇ ಇಲ್ಲದಿದ್ದರೆ… ಬಾಯ್ಕಾಟ್ ಟ್ರೆಂಡ್‌ ಬಗ್ಗೆ ಮತ್ತೆ ಮಾತನಾಡಿದ ಕರೀನಾ ಕಪೂರ್‌!

ಸ್ಥಳೀಯರು, ಅಗ್ನಿಶಾಮಕ ದಳದ ನೆರವಿನಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಬೆಂಕಿ ನಂದಿಸಲಾಗಿದೆ.

Advertisement

ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಮನೆಯೊಳಗಿನ ವಸ್ತುಗಳೆಲ್ಲಾ ಹೊತ್ತಿ ಉರಿದಿದೆ. ವಾಸದ ಮನೆ ಹೊತ್ತಿಯುರಿದ ಘಟನೆಯಿಂದ ಆಘಾತಕ್ಕೆ ಒಳಗಾಗಿರುವ ಬಡ ಕುಟುಂಬ ಕಂಗಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next