Advertisement

ಕೋವಿಡ್‌ ನಿರ್ಬಂಧ ಸಡಿಲಿಕೆಗೆ ಸರಕಾರವನ್ನು  ಒತ್ತಾಯಿಸಿದ ಹೊಟೇಲಿಗರ ಸಂಘಟನೆ “ಆಹಾರ್‌’

05:54 PM Apr 04, 2021 | Team Udayavani |

ಮುಂಬಯಿ: ಕಳೆದ ವರ್ಷದ ಲಾಕ್‌ಡೌನ್‌ ಬಳಿಕ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸಿದ ಅತಿಥ್ಯ ಉದ್ಯಮವು ಸರಕಾರದ ಕೋವಿಡ್‌ ರಾತ್ರಿ ಕರ್ಫ್ಯೂವಿನಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ಹೊಟೇಲ್‌ ಉದ್ಯಮಿಗಳ ಪ್ರತಿಷ್ಠಿತ ಸಂಘಟನೆ “ಆಹಾರ್‌’ ಅಘಾತ ವ್ಯಕ್ತಪಡಿಸಿದೆ.

Advertisement

ಭರವಸೆ ಹುಸಿಯಾಗಲಿಲ್ಲ ಸುಮಾರು ಎರಡು ಕೋಟಿಗಿಂತಲೂ ಅಧಿಕ ಕುಟುಂಬ ಗಳು ಹೊಟ್ಟೆಪಾಡಿಗಾಗಿ ಅವ ಲಂಬಿತ ವಾಗಿ ರುವ ಹೊಟೇಲ್‌ ಉದ್ಯಮದ ಬಗ್ಗೆ ಮಹಾರಾಷ್ಟ್ರ ಸರಕಾರವು ಗಂಭೀರ ವಾಗಿ ಪರಿಗಣಿಸಿ ನಿರ್ಬಂಧಗಳನ್ನು ಕೈಗೊಳ್ಳುವ ನಿರೀಕ್ಷೆ ನಮ್ಮಲ್ಲಿತ್ತು. ಈ ಬಗ್ಗೆ ಇತ್ತೀಚೆಗೆ ನಾವು ಸಂಬಂಧಿತ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಭೇಟಿ ಮಾಡಿ ಮನವಿ ಮಾಡಿದ್ದೇವು. ಅವರೆಲ್ಲರೂ ಭರವಸೆಯನ್ನೂ ನೀಡಿದ್ದರು. ಅತಿಥ್ಯ ಉದ್ಯಮ ನಡೆಯುವುದೇ ರಾತ್ರಿ 8 ಗಂಟೆಯ ಬಳಿಕ. ಈ ಸಮಯದಲ್ಲೇ ನಿರ್ಬಂಧಗಳನ್ನು ವಿಧಿಸಿದರೆ ಈಗಾಗಲೇ ನೆಲಕಚ್ಚಿದ ಉದ್ಯಮ ಮತ್ತೆ ಹಳಿಗೆ ಮರಳುದಾದರೂ ಹೇಗೆ ಎಂದು ಆಹಾರ್‌ ಪ್ರಶ್ನಿಸಿದೆ.

ಎಸ್‌ಒಪಿ ಪಾಲಿಸಿದರೂ ವ್ಯವಹಾರಕ್ಕೆ ಅನುಮತಿ ಇಲ್ಲ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನಾವು ಸರಕಾರದ ಕಟ್ಟು  ನಿಟ್ಟಾದ ಮಾರ್ಗಸೂಚಿಗಳಿಗೆ ಬದ್ಧರಾಗಿ ದ್ದುಕೊಂಡು ವ್ಯವಹಾರವನ್ನು ಪ್ರಾರಂಭಿಸಿ ದ್ದೇವೆ. ಸರಕಾರದ ಮಾರ್ಗಸೂಚಿಗಳನ್ನು ನಾವು ಬೆಂಬಲಿಸುತ್ತಿದ್ದೇವೆ. ಆದರೆ ಇತ್ತೀಚೆಗಿನ ಕ್ರಮವು ಉದ್ಯಮದವರನ್ನು ಸಂಪರ್ಕಿಸದೆ ಮತ್ತು ಮನಬಂದಂತೆ ಏಕಾಏಕಿ ನಿರ್ಬಂಧ ವಿಧಿಸಿರುವುದು ಅತಿಥ್ಯ ಉದ್ಯಮವನ್ನು ಆತ್ಮಹತ್ಯೆಗೆ ಪ್ರೇರೇಪಿಸಿದಂತಾಗಿದೆ. ರಾತ್ರಿಯ ಸಮಯದಲ್ಲಿ ಕೋವಿಡ್‌ ರೆಸ್ಟೋರೆಂಟ್‌ ಗಳಿಂದಲೇ ಹರಡುತ್ತದೆ ಎಂಬ ಆರೋಪಿಯ ಸ್ಥಾನ ದಲ್ಲಿಟ್ಟು ಅತಿಥ್ಯ ಉದ್ಯಮವನ್ನು ನೋಡಲಾ ಗುತ್ತಿದೆ. ಸರಕಾರದ ಈ ಕ್ರಮವು ಯಾವ ಸಂಶೋಧನೆಗಳಿಂದ ಸಾಭೀತಾಗಿದೆ ಎಂಬುವುದು ನಮಗೆ ಗೊತ್ತಿಲ್ಲ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ತಿಳಿಸಿದ್ದಾರೆ.

ಕಾರ್ಮಿಕರಿಗೆ ಸಂಬಳ ಹೇಗೆ ನೀಡಬೇಕು ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಹೊಟೇಲ್‌ ಕಾರ್ಮಿಕರಿದ್ದಾರೆ. ಇತರ ದೇಶಗಳಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಇಂತಹ ಉದ್ಯಮವನ್ನು ಅವಲಂಬಿ  ಸುವ ವರಿಗೆ ಸರಕಾರ ಪ್ರತೀ ತಿಂಗಳು ವೇತನ ನೀಡಲು ಸಹಕರಿಸುತ್ತಿವೆ. ಇಲ್ಲಿ ಮಾತ್ರ ಯಾವುದನ್ನು ಯೋಚಿಸದೆ ಒಮ್ಮಿಂದೊಮ್ಮೆಲೆ ಹೊಟೇಲ್‌, ರೆಸ್ಟೋರೆಂಟ್‌ ಗಳ ಕಾರ್ಯಾಚರಣೆಯ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಇದರಿಂದ ಹೊಟೇ ಲಿಗರು ತಮ್ಮ ಕಾರ್ಮಿಕರಿಗೆ ಹೇಗೆ ವೇತನ ನೀಡುವುದು. ಸರಕಾರದ ನಿರ್ಬಂಧಗಳಿಂದ ಕಾರ್ಮಿಕರು ಮತ್ತೆ ತಮ್ಮ ಹುಟ್ಟೂರಿಗೆ ತೆರಳುವ ಚಿಂತನೆ ನಡೆಸುತ್ತಿದ್ದು, ಇಂತಹ ಸಂದರ್ಭದಲ್ಲಿ ವ್ಯಾಪಾರ ಮಾಡುವುದಾದರೂ ಹೇಗೆ ಎಂದು ಸರಕಾರವನ್ನು ಆಹಾರ್‌ ಪ್ರಶ್ನಿಸಿದೆ.

ನ್ಯಾಯಾಲಯದ ಬಾಗಿಲು ತಟ್ಟುವ ಸಿದ್ಧತೆಯಲ್ಲಿ ಆಹಾರ್‌ ಈಗಾಗಲೇ ಅತಿಥ್ಯ ಉದ್ಯಮ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಮಧ್ಯೆ ಕೊರೊನಾ ಸೋಂಕನ್ನು ತಡೆಗಟ್ಟುವ ಕ್ರಮಗಳಲ್ಲಿ ಹೊಟೇಲ್‌ ಉದ್ಯಮಕ್ಕೆ ಮಾತ್ರ ಸರಕಾರವು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಇಂತಹ ಕ್ರಮದ ವಿರುದ್ಧ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಒಂದು ವೇಳೆ ನಮ್ಮ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಗದಿ ದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಹಿಂದೇಟು ಹಾಕುವುದಿಲ್ಲ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ಅಬಕಾರಿ ಶುಲ್ಕ ಪಾವತಿಯಲ್ಲಿ 10 ದಿನಗಳ ವಿಸ್ತರಣೆ ಅಬಕಾರಿ ಪರವಾನಗಿ ಶುಲ್ಕವನ್ನು ಪಾವತಿಸುವಾಗ ನಾವು ಮುಖ್ಯಮಂತ್ರಿಗಳಿಗೆ ಸುಲಭ ಕಂತುಗಳನ್ನು ಕೋರಿ ಪ್ರಾತಿನಿಧ್ಯವನ್ನು ನೀಡಿದ್ದೇವೆ. ಅವರು ಅದನ್ನು ಪರಿಶೀಲಿಸುದಾಗಿ ಭರವಸೆ ನೀಡಿದ್ದಾರೆ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ವಾರ್ಷಿಕ ರಾಜ್ಯ ಅಬಕಾರಿ ಪರವಾನಗಿ ಮಾರ್ಚ್‌ 31ಕ್ಕೆ ಕೊನೆಗೊಂಡಿದ್ದು, ಸದ್ಯಕ್ಕೆ ನಾವು ಅಬಕಾರಿ ಶುಲ್ಕವನ್ನು ಪಾವತಿಸಲು 10 ದಿನಗಳ ವಿಸ್ತರಣೆಯನ್ನು ಸ್ವೀಕರಿಸಿದ್ದೇವೆ. ಒಂದು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ವಾರ್ಷಿಕ ಮದ್ಯ ಪರವಾನಗಿ ಶುಲ್ಕವು 7 ಲಕ್ಷ ರೂ. ಗಳಾಗಿದ್ದು, ಕೊರೊನಾ ನಿರ್ಬಂಧಗಳಿಂದ ರಾತ್ರಿ 8 ಗಂಟೆಗೆ ಹೊಟೇಲ್‌ಗ‌ಳ ಬಾಗಿಲು ಮುಚ್ಚಿದರೆ ನಾವು ಇಷ್ಟೊಂದು ಬೃಹತ್‌ ಶುಲ್ಕವನ್ನು ಭರಿಸುದಾದರೂ ಹೇಗೆ ಎಂದು ಆಹಾರ್‌ ಪ್ರಶ್ನಿಸಿದೆ.

Advertisement

ನಮ್ಮ ನಡೆಯನ್ನು ತಮಾಷೆಯಾಗಿ ಕಾಣಬೇಡಿ ಅತಿಥ್ಯ ಉದ್ಯಮದವರು ಏನೂ ಮಾಡಿದರೂ ಸಹಿಸಿಕೊಳ್ಳುತ್ತಾರೆ ಎಂಬ ಮನೋಭಾವವನ್ನು ಸರಕಾರ ಬಿಡಬೇಕು. ಇದು ತಮಾಷೆಯ ವಿಷಯವಲ್ಲ. ಸಮಯದ ನಿರ್ಬಂಧಗಳನ್ನು ತೆಗೆದುಹಾಕುವಂತೆ ನಾವು ವಿನಂತಿಸುತ್ತಿದ್ದೇವೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂಬ ಭರವಸೆಯನ್ನೂ ಆಹಾರ್‌ ನೀಡುತ್ತದೆ. ನಿರ್ಬಂಧಗಳ ಸಡಿಲಿಕೆಯಿಂದ ಮಾತ್ರ ನಿಶ್ಚಿಂತೆಯಿಂದ ನಮ್ಮ ವ್ಯವಹಾರವನ್ನು ಮುಂದುವರಿಸಲು ಸಾಧ್ಯವಿದೆ.

ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ಉದ್ಯಮವು ಸಂಪೂರ್ಣ ನೆಲಕಚ್ಚಿದ್ದು, ಪ್ರಸ್ತುತ ಸರಕಾರದ ಯಾವುದೇ ಬೆಂಬಲವಿಲ್ಲದೆ ಚೇತರಿಸಿಕೊಳ್ಳುತ್ತಿದ್ದು, ಮತ್ತೆ ವಿನಃ ಕಾರಣ ಅತಿಥ್ಯ ಉದ್ಯಮವನ್ನು ಅನಿಶ್ಚಿತತೆಗೆ ತಳ್ಳಲಾಗುತ್ತಿದೆ. ಇದರ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಆಹಾರ್‌ ಸರಕಾರಕ್ಕೆ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next