Advertisement

ಅನಿವಾಸಿ ಭಾರತೀಯರಿಂದ ಹೋಟೆಲ್‌ ಕೊಠಡಿ ಭರ್ತಿ

10:09 AM Dec 24, 2022 | Team Udayavani |

ಬೆಂಗಳೂರು: ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷ ಆಚರಣೆ ಹಿನ್ನೆಲೆ ಸಾಲು-ಸಾಲು ರಜೆ ದೊರ ಕಿದ್ದು, ತಮ್ಮ ಸಂಸಾರ ಸಮೇತ ತವರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ, ಸಿಲಿಕಾನ್‌ ಸಿಟಿಯ ಹೋ ಟೆಲ್‌ ರೆಸ್ಟೋರೆಂಟ್‌ಗಳಲ್ಲಿ ಕೊಠಡಿಗಳು ಭರ್ತಿಯಾಗಿವೆ.

Advertisement

ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್‌ ಸೋಂಕು ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂಭ್ರಮ ಕ್ಕೆ ತೊಡಕಾಗಿತ್ತು. ಜತೆಗೆ ಕೋವಿಡ್‌ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರು ಸ್ವಗ್ರಾಮಗಳಿಗೆ ಮರಳಿರಲಿಲ್ಲ. ಆದರೆ, ಇದೀಗ ಕ್ರಿಸ್‌ ಮಸ್‌ ಮತ್ತು ಹೊಸ ವರ್ಷದ ಪ್ರಯು ಕ್ತ ತಮಗೂ ಹಾಗೂ ತಮ್ಮ ಮಕ್ಕಳಿಗೂ ರಜೆ ದೊರೆತಿರುವ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರು ತವರಿನತ್ತ ಮುಖ ಮಾಡಿದ್ದಾರೆ. ಇವರಲ್ಲಿ ಹಲವು ಮಂದಿ ಬೆಂಗಳೂರಿನಲ್ಲಿ ಬೀಡು ಬಿಡಲು ನಿರ್ಧರಿಸಿದ್ದು, ಹೀಗಾಗಿಯೇ ಸಿಲಿಕಾನ್‌ ಸಿಟಿಯಲ್ಲಿನ ಹಲವು ಹೋಟೆಲ್‌ಗ‌ಳ ಕೊಠಡಿಗಳು ಭರ್ತಿಯಾಗಿವೆ.

ಆನ್‌ಲೈನ್‌ನಲ್ಲೇ ಸುಮಾರು 55 ಸಾವಿರ ಕೊಠಡಿಗಳನ್ನು ಬುಕಿಂಗ್‌ ಮಾಡಲಾಗಿದೆ ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಪದಾ ಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆನ್‌ಲೈನ್‌ ಬುಕಿಂಗ್‌ ಮಾಡಿದವರಲ್ಲಿ ಶೇ.50ರಿಂದ 55 ಮಂದಿ ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕೂಡ ಸೇರಿದ್ದಾರೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷವನ್ನು ಬೆಂಗಳೂರಿನಲ್ಲೇ ಆಚರಿಸಲು ಅವರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹೋಟೆಲ್‌ ಕೊಠಡಿಗಳು ಭರ್ತಿಯಾಗಿವೆ ಎಂದು ತಿಳಿಸಿದ್ದಾರೆ.

3500 ಹೋಟೆಲ್‌ ಕಂ ಕೊಠಡಿಗಳಿವೆ: ಸಿಲಿಕಾನ್‌ ಸಿಟಿಯಲ್ಲಿ ಸುಮಾರು 3500 ಹೋಟೆಲ್‌ ಕಮ್‌ ಕೊಠಡಿಗಳಿವೆ. ಹಾಗೆಯೇ ಸುಮಾರು 65 ವಿವಿಧ ರೀತಿಯ ಪಂಚಾತಾರ ಹೋಟೆಲ್‌ಗ‌ಳು ಕೂಡ ಇವೆ. ವಿವಿಧ ದೇಶಗಳಲ್ಲಿರುವ ಹಲವು ರಾಜ್ಯಗಳ ಅನಿವಾಸಿ ಭಾರತೀಯರು ಸ್ವದೇಶಕ್ಕೆ ಮರಳಿರುವ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹೋಟೆಲ್‌ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ ಎಂದು ಬೆಂಗಳೂರು ಹೋಟೆಲ್‌ ಮಾಲೀ ಕರ ಸಂಘಧ ಅಧ್ಯಕ್ಷ ಪಿ.ಸಿ.ರಾವ್‌ ಹೇಳುತ್ತಾರೆ.

ಹೊಸ ವರ್ಷದ ಜತೆಗೆ ಮಡಿಕೇರಿ, ಹೊಸಪೇಟೆ, ಮಂಗಳೂರು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೆಲವು ಉದ್ಯಮ ಕಾರ್ಯದ ದೃಷ್ಟಿಯಿಂದಾಗಿ ಸಿಲಿಕಾನ್‌ ಸಿಟಿಯ ಹೋಟೆಲ್‌ಗ‌ಳನ್ನು ಕಾಯ್ದಿರಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಪ್ರತ್ಯೇಕ ಮಾರ್ಗಸೂಚಿ ಬೇಕು : ರಾತ್ರಿ 3 ಗಂಟೆ ವರೆಗೂ ವ್ಯಾಪಾರಕ್ಕೆ ಅವಕಾಶ ನೀಡಿ ಹೊಸ ವರ್ಷದ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಧ್ಯರಾತ್ರಿ 3ಗಂಟೆಯವರೆಗೆ ಹೋಟೆಲ್‌ ಗಳನ್ನು ತೆರೆಯಲು ಅವಕಾಶ ನೀಡುವಂತೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘವು ನಗರ ಪೊಲೀಸ್‌ ಆಯುಕ್ತರಲ್ಲಿ ಮನವಿ ಮಾಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಹೇಳಿಕೊಳ್ಳುವ ರೀತಿ ಯಲ್ಲಿ ನಡೆದಿರಲಿಲ್ಲ.ಆ ಹಿನ್ನೆಲೆಯಲ್ಲಿ ಈ ವರ್ಷ ರಾತ್ರಿ 3 ಗಂಟೆಯವರೆಗೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವಂತೆ ಕೋರಿದೆ. ಆದರೆ ಬಂದೋಬಸ್ತ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿ ಇಲ್ಲದ ಕಾರ ಣ ನಗರ ಪೊಲೀಸ್‌ ಆಯುಕ್ತರು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಹಿನ್ನೆಲೆ ಸರ್ಕಾರ ಮಾರ್ಗಸೂಚಿಗಳನ್ನು ಜಾರಿಗೊಳಿ ಸಿ ದೆ. ಹೊಸ ವರ್ಷದ ಆಚರಣೆ ಸಂಬಂಧ ಪ್ರತ್ಯೇಕ ಮಾರ್ಗಸೂಚಿಯ ಬಗ್ಗೆ ಈವರೆಗೂ ಪಾಲಿಕೆ ಸರ್ಕಾರಕ್ಕೆ ಯಾವುದೇ ರೀತಿಯ ಪ್ರಸ್ತಾವನೆ ಸಲ್ಲಿಸಿಲ್ಲ. ● ತುಷಾರ್‌ ಗಿರಿನಾಥ್‌, ಪಾಲಿಕೆ ಮುಖ್ಯ ಆಯುಕ್ತ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next