Advertisement

ಕಂಬನಿ ಮಿಡಿದ ಬಿಸಿಲೂರು

10:44 AM Aug 18, 2018 | Team Udayavani |

ಕಲಬುರಗಿ: ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ನಾಯಕ, ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ನಿಧನಕ್ಕೆ ನಗರದಲ್ಲಿ ಶುಕ್ರವಾರ ಹಲವು ಗಣ್ಯರು, ಸಂಘ-ಸಂಸ್ಥೆಗಳು, ಸಂಘಟನೆಗಳು, ನಾಗರಿಕರು ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಬಾಬುರಾವ್‌ ಚವ್ಹಾಣ ಸಂತಾಪ: ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಾಬುರಾವ್‌ ಚವ್ಹಾಣ ಸಂತಾಪ ಸೂಚಿಸಿದ್ದು, ವಾಜಪೇಯಿ ಆತ್ಮಕ್ಕೆ ದೇವರು ಶಾಂತಿ ನೀಡಲಿ ಮತ್ತು ಕುಟುಂಬದವರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಕನ್ನಡ ರಣಧೀರರ ಪಡೆ: ಜಿಲ್ಲಾ ಘಟಕದ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿ, ವಾಜಪೇಯಿ ಅವರ ಜೀವನ-ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಅವಳಡಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಆನಂದ ಕಪನೂರ, ಹೈಕ ಭಾಗದ ಸಂಚಾಲಕ ನಾಗರಾಜ ಬಾಣೆಕಾರ, ರೇಣುಕಾ ಗಾಯಕವಾಡ ಮತ್ತಿತರರು ಇದ್ದರು.

ಕನ್ನಡ ಪರ ಸಂಘಟನೆಗಳ ಒಕ್ಕೂಟ: ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ಶ್ರದ್ಧಾಂಜಲಿ ಅರ್ಪಿಸಿತು. ಸಚಿನ ಫರಹತಾಬಾದ್‌, ಮಂಜುನಾಥ ನಾಲವಾರಕರ್‌, ಕಾಶಿನಾಥ ಮಾಳಗೆ, ದತ್ತು ಭಾಸಗಿ, ನಾಗರಾಜ ಸ್ವಾದಿ ಇದ್ದರು.

ಹಿಂದೂ ಮಹಾಸಭಾ: ಜಿಲ್ಲಾ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮಾಶಂಕರ ರಾಜಗುಂಡೆ, ರಾಜ್ಯ ಉಪಾಧ್ಯಕ್ಷ ದಿನಕರರಾವ್‌ ನಾರಾಯಣ ರಾವ್‌ ಕುಲಕರ್ಣಿ ಅಷ್ಠಿಗಿ, ಕೋಶಾಧ್ಯಕ್ಷ ಪ್ರಮೋದ ಚೌದ್ರಿ, ಮಾಜಿ ಜಿಲ್ಲಾಧ್ಯಕ್ಷ ಧರ್ಮರಾಜ ವಡೆಯರ್‌, ಮರುಳಾರಾಧ್ಯ ಮಠಪತಿ ಮತ್ತಿತರರು ಇದ್ದರು.

Advertisement

ಹುಮನಾಬಾದ ರಿಂಗ್‌ ರಸ್ತೆ: ಉದ್ಯಮಿ ರಾಮಚಂದ್ರ ರಘೋಜಿ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು. ಸಿದ್ದಾಜಿ ಪಾಟೀಲ, ಗುರು ಸ್ವಾಮಿ, ಸಚಿನ ರೆಡ್ಡಿ, ಸಿ.ಬಿ.ಪಾಟೀಲ, ದಯಾನಂದ, ಸಂಜು ಮಡಗಿ, ಶರಣು ಕಲಶೆಟ್ಟಿ, ವಿಷ್ಣು ಸುರಪುರ ಇದ್ದರು. 

ವಿವೇಕ ಗ್ರೂಪ್‌: ಹುಮನಾಬಾದ ರಿಂಗ್‌ ರಸ್ತೆಯಲ್ಲಿ ನಮನ ಸಲ್ಲಿಸಿದರು. ಅಧ್ಯಕ್ಷ ಸಿದ್ಧಾಜಿ ಪಾಟೀಲ. ಸಂಗಮೇಶ ಮನಳ್ಳಿ, ರವಿ ಪಾಟೀಲ, ದಯಾನಂದ ಗುತ್ತೆದಾರ, ಚನ್ನು ಫದಿರಬಂದಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next