Advertisement

ಹೊಸೂರು ಏರ್‌ಪೋರ್ಟ್‌ ಆರಂಭಿಸಿ

06:00 AM Jun 24, 2018 | Team Udayavani |

ಚೆನ್ನೈ: ಹೊಸೂರಿನಿಂದ ಶೀಘ್ರ ವಿಮಾನ ಹಾರಾಟವನ್ನು ಆರಂಭಿಸಲು ಅನುವು ಮಾಡುವುದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ ನಿರಾಕ್ಷೇಪಣೆ ಪತ್ರವನ್ನು ಒದಗಿಸಬೇಕೆಂದು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಮಿಳುನಾಡು ಸರಕಾರ ಪತ್ರ ಬರೆದಿದೆ. ಬೆಂಗಳೂರಿನಿಂದ 35 ಕಿ.ಮೀ ದೂರದಲ್ಲಿರುವ ಹೊಸೂರು ವಿಮಾನ ನಿಲ್ದಾಣದಿಂದ ವಿಮಾನ ಸಂಪರ್ಕಕ್ಕೆ ಉಡಾನ್‌ ಯೋಜನೆ ಅಡಿಯಲ್ಲಿ ನಿರ್ಧರಿಸ ಲಾಗಿತ್ತು. ಹೊಸೂರಿನಲ್ಲಿ ವಿಮಾನ ಹಾರಾಟ ಆರಂಭಿಸಿದರೆ ಬೆಂಗಳೂರಿನ ದಕ್ಷಿಣ ಭಾಗದ ಜನರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವುದರ ಬದಲಿಗೆ ಹೊಸೂರಿಗೆ ತೆರಳಬಹುದಾದ್ದರಿಂದ, ಬೆಂಗಳೂರು ವಿಮಾನ ನಿಲ್ದಾಣವು ನಿರಾಕ್ಷೇಪಣೆ ಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂದು ತಮಿಳುನಾಡು ಸರಕಾರ ಆರೋಪಿಸುತ್ತಿದೆ. ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಿಂದ 150 ಕಿ.ಮೀ ವ್ಯಾಪ್ತಿಯೊಳಗೆ ಮತ್ತೂಂದು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ನಿರಾಕ್ಷೇಪಣೆ ಪತ್ರ ಅಗತ್ಯವಿರುತ್ತದೆ.

Advertisement

ಹೊಸೂರು ಏರ್‌ಪೋರ್ಟ್‌ನಿಂದ ವಿಮಾನ ಸಂಚಾರ ಆರಂಭಿಸಿದರೆ ಕೃಷ್ಣಗಿರಿ ಹಾಗೂ ಸುತ್ತಲಿನ ಜಿಲ್ಲೆಗಳ ಔದ್ಯಮಿಕ ಕೇಂದ್ರಕ್ಕೆ ನೆರವಾಗಲಿದೆ. ಅಲ್ಲದೆ ಚೆನ್ನೈ-ಬೆಂಗಳೂರು ಔದ್ಯಮಿಕ ಕಾರಿಡಾರ್‌ಗೂ ಅನುಕೂಲವಾಗಲಿದೆ.

ರಾಮನಾಥಪುರಂ ಹಾಗೂ ನೈವೇಲಿ ಏರ್‌ಪೋರ್ಟ್‌ ನಿಂದಲೂ ವಿಮಾನ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಕೇಳಿಕೊಂಡಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next