Advertisement

ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮ

04:50 PM Nov 11, 2019 | Naveen |

ಹೊಸಪೇಟೆ: ಡಿಸೆಂಬರ್‌ 5 ರಂದು ವಿಜಯನಗರ ಕ್ಷೇತ್ರದ ಉಪಚುನಾವಣೆ ಪ್ರಯುಕ್ತನ. 11ರಿಂದ ನೀತಿ ಸಂಹಿತೆ ಜಾರಿಯಾಗಲಿದ್ದು ಅಂದೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸೀಫ್ ಹೇಳಿದರು.

Advertisement

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಈಗಾಗಲೇ ಅಳವಡಿಸಿರುವ ಬ್ಯಾನರ್‌, ಬಂಟಿಂಗ್ಸ್‌ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುವುದು ಎಂದರು.

ಆಯೋಗ ಈ ಹಿಂದೆ ಚುನಾವಣೆ ದಿನಾಂಕ ನಿಗದಿಗೊಳಿಸಿತ್ತು. ಆದರೆ, ಸುಪ್ರಿಂಕೋರ್ಟ್‌ ತಡೆ ನೀಡಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚುನಾವಣೆ ಡಿ. 5ರಂದು ನಡೆಯಲಿದೆ. ಡಿ. 7ರಿಂದ ಸಂಜೆ 6ವರಗೆ ಚುನಾವಣೆ ನಡೆಯಲಿದೆ. ನಗರದ ಸಂಡೂರು ಬೈಪಾಸ್‌ ರಸ್ತೆಯಲ್ಲಿರುವ ಲಿಟ್ಲ ಪ್ಲವರ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

ಒಬ್ಬ ಅಭ್ಯರ್ಥಿ ಚುನಾವಣೆಯಲ್ಲಿ 28 ಲಕ್ಷ ರೂಪಾಯಿ ಖರ್ಚು ಮಾಡುವ ಮಿತಿ ನೀಡಲಾಗಿದೆ. ನಾಮಪತ್ರ ಸಲ್ಲಿಸುವ ಕೇಂದ್ರದಿಂದ ನೂರು ಮೀಟರ್‌ ವ್ಯಾಪ್ತಿಯಲ್ಲಿ ಹೆಚ್ಚು ಜನ ಸೇರುವಂತಿಲ್ಲ. ನಾಮ ಪತ್ರ ಸಲ್ಲಿಕೆ ಮಾಡುವ ಅಭ್ಯರ್ಥಿ ಜೊತೆ ನಾಲ್ವರಿಗೆ ಮಾತ್ರ ಅವ ಕಾಶ ನೀಡಲಾಗುವುದು. ಮೂರು ವಾಹನಗಳು ತರಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಯಾವುದೇ ಅಭ್ಯರ್ಥಿಗಳು ಚಿನ್ನ ಇರುವ ವಸ್ತ್ರಗಳನ್ನು ವಿತರಿಸುವಂತಿಲ್ಲ. ಕರ ಪತ್ರಗಳ ಮೇಲೆ ಅಭ್ಯರ್ಥಿ ಹಾಗೂ ಮುದ್ರಕರ ಹೆಸರು ಕಡ್ಡಾಯವಾಗಿದೆ. ಚುನಾವಣೆ ಅಕ್ರಮ ತಡೆಗಾಗಿ ನಗರದ ಹೊರವಲಯದ ಏಳು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು.

Advertisement

ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುವುದು. ಮತದಾರರಿಗೆ ಹೆಂಡ-ಹಣ, ಸೀರೆ, ಇತರೆ ವಸ್ತುಗಳನ್ನು ಅಮಿಷ ಒಡ್ಡುವ ಅಥಾವ ವಿತರಣೆ ಮಾಡುವ ಪ್ರಕರಣಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 21 ಸೆಕ್ಟರ್‌ ಅಧಿಕಾರಿಗಳು 15 ಫ್ಲಾಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ ಎಂದರು.

ಸಾರ್ವಜನಿಕರು, ಚುನಾ ವಣೆ ಕುರಿತಾದ ದೂರುಗಳು ಸಲ್ಲಿಸಬಹುದಾಗಿದೆ. ದೂರುಗಳನ್ನು ಸಲ್ಲಿಸಲು (08394-232209 ಅಥವಾ 1950) ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಟ್ಟು 247
ಮತ  ಕೇಂದ್ರಗಳಲ್ಲಿ ಏಳು ಅತಿ ಸೂಕ್ಷ್ಮ ಹಾಗೂ 37 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಲಾಗಿದೆ. ಎರಡು ಪಿಂಕ್‌ ಮತಗಟ್ಟೆಗಳನ್ನು ಮಾಡಲಾಗುವುದು ಎಂದರು. ತಹಶೀಲ್ದಾರ ಡಿ.ಜಿ. ಹೆಗಡೆ ಹಾಗೂ ಚುನಾವಣೆ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next