Advertisement

Hosapete; ಕರಡಿ ದಾಳಿ: ಮಹಿಳೆಗೆ ಗಂಭೀರ ಗಾಯ, ಅರಣ್ಯ ಇಲಾಖೆ‌ ವಿರುದ್ಧ ಆಕ್ರೋಶ

09:38 PM Nov 04, 2023 | Team Udayavani |

ಹೊಸಪೇಟೆ: ಏಕಾಏಕಿ ಮಹಿಳೆಯ ಮೇಲೆ ಕರಡಿ ದಾಳಿ ನಡೆಸಿ ಗಂಭೀರ‌‌ವಾಗಿ ಗಾಯಸಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ ತಾಂಡದಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ಮನೆ ಮುಂಭಾಗದಲ್ಲಿ ನಿಂತಿದ್ದ ಕಾಳಿಬಾಯಿ ಎಂಬ ಮಹಿಳೆ ಮೇಲೆ ಕರಡಿ‌ ಎರಗಿದ್ದು, ಮುಖ, ಕೈಗಳು ಹಾಗೂ ಭುಜಕ್ಕೆ ಗಂಭೀರ ಸ್ವರೂಪದ ಗಾಯ ಗಳನ್ನು ಮಾಡಿದೆ. ಗಾಯಗೊಂಡ ಕಾಳಿಬಾಯಿಗೆಯನ್ನು ಕೂಡ್ಲಿಗಿಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಬಂಡೆ ಬಸಾಪುರ ತಾಂಡದ ಜನರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಕರಡಿ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next