Advertisement

Hosapete: ಆಕಸ್ಮಿಕ ಬೆಂಕಿ; ಲಾರಿಯಲ್ಲಿದ್ದ ವಸ್ತುಗಳು ಭಸ್ಮ

11:54 AM Jul 30, 2023 | Team Udayavani |

ಹೊಸಪೇಟೆ: ಆಕಸ್ಮಿಕ ಬೆಂಕಿ‌ ತಗುಲಿ ಲಾರಿಯಲ್ಲಿದ್ದ ಪಾರ್ಸಲ್ ಬಾಕ್ಸ್ ಗಳು ಬೆಂಕಿಗೆ ಆಹುತಿಯಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂ.ಬಿ ಅಯ್ಯನಹಳ್ಳಿ ಗ್ರಾಮದ ಬಳಿ ಜು.30ರ ಭಾನುವಾರ  ನಡೆದಿದೆ.‌‌

Advertisement

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಪಾರ್ಸಲ್ ತುಂಬಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ‌ ಕಾಣಿಸಿದ್ದು, ಲಾರಿಯಲ್ಲಿ‌‌ ಸಂಗ್ರಹಿಸಿಡಲಾಗಿದ್ದ ಪಾರ್ಸಲ್ ಬಾಕ್ಸ್ ಗಳು ಸುಟ್ಟು ಭಸ್ಮವಾಗಿವೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ‌ ಸಿಬ್ಬಂದಿ ಬೆಂಕಿ ನಂದಿಸಿ,‌ ಮುಂದಾಗಬಹುದಾದ ಅನಾಹುತ ತಪ್ಪಿಸಿದ್ದಾರೆ.

ಕಾನಾಹೊಸಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next