Advertisement

Horrific! ಲಾಕ್‌ ಆಗಿದ್ದ ಕಾರಿನಲ್ಲಿ ಅವಳಿ ಸಹೋದರಿಯರ ದಾರುಣ ಸಾವು

04:37 PM Jun 15, 2017 | udayavani editorial |

ಗುರ್ಗಾಂವ್‌ : ಅತ್ಯಂತ ಹೃದಯ ವಿದ್ರಾವಕ ಹಾಗೂ ಭರಿಸಲಾಗದ ನಷ್ಟದ ದುರಂತದಲ್ಲಿ ಐದರ ಹರೆಯದ ಅವಳಿ ಜವಳಿ ಸಹೋದರಿಯರು ಎರಡು ತಾಸುಗಳಿಗೂ ಅಧಿಕ ಕಾಲ, ಲಾಕ್‌ ಆಗಿದ್ದ ಬಿಸಿಯೇರಿದ ಕಾರಿನೊಳಗೆ ಸಿಲುಕಿ ದಾರಣವಾಗಿ ಮೃತಪಟ್ಟಿದ್ದಾರೆ. 

Advertisement

ತಮ್ಮ ಅಜ್ಜ-ಅಜ್ಜಿಯೊಂದಿಗೆ ರಜಾ ದಿನಗಳನ್ನು ಕಳೆಯಲು ಜಮಾಲ್‌ಪುರ ಗ್ರಾಮಕ್ಕೆ ಈ ಅವಳಿ ಸಹೋದರಿಯರು ಬಂದಿದ್ದರು; ನಿನ್ನೆ ಬುಧವಾರ ಈ ದುರ್ಘ‌ಟನೆ ನಡೆಯಿತು. 

ಲಾಕ್‌ ಆಗಿದ್ದ ಬಿಸಿಯೇರಿದ್ದ ಕಾರಿನೊಳಗೆ ಸುಮಾರು ಎರಡು ತಾಸುಗಳ ಸಿಲುಕಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ  ಹರ್ಷಾ ಮತ್ತು ಹರ್ಷಿತಾ ಎಂಬ ಹೆಸರಿನ ಈ ಅವಳಿ ಸಹೋದರಿಯರನ್ನು ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿನ ವೈದ್ಯರು “ಬಾಲಕಿಯರು ಅದಾಗಲೇ ಮೃತಪಟ್ಟಿದ್ದಾರೆ’ ಎಂದು ಘೋಷಿಸಿದರು. 

ಕಾರಿನೊಳಗೆ ಸಿಲುಕಿಕೊಂಡಿದ್ದ ಈ ಬಾಲಕಿಯರು ಹೊರ ಬರಲು ಕಾರಿನ ಬಾಗಿಲನ್ನು ತೆರೆಯುವ ಪ್ರಯತ್ನವನ್ನು ಮಾಡಿದ್ದರೆಂಬುದು ಅಲ್ಲಿನ ಲಕ್ಷಣಗಳಿಂದ ಕಂಡುಬರುತ್ತದೆ ಎಂದು ಎನ್‌ ಡಿ ಟಿ ವಿ ವರದಿ ಮಾಡಿದೆ. 

ಈ ನತದೃಷ್ಟ ಬಾಲಕಿಯರ ತಂದೆ ಸೇನೆಯಲ್ಲಿದ್ದು ಮೀರತ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. ನಿನ್ನೆ ಬುಧವಾರವೇ ಈ ಬಾಲಕಿಯರು ತಮ್ಮ ಹೆತ್ತವರೊಂದಿಗೆ ನಗರಕ್ಕೆ ಮರಳುವವರಿದ್ದರು.

Advertisement

ಕಾರಿನ ಲಾಕ್‌ ದೋಷಪೂರ್ಣವಾಗಿತ್ತು ಮತ್ತು ಲಿವರ್‌ ಕೆಟ್ಟುಹೋಗಿದ್ದುದರಿಂದ ಅದರ ಕಿಟಿಕಿ ಗಾಜನ್ನು ಮೇಲೆ-ಕೆಳಗೆ ಸರಿಸಲಾಗುತ್ತಿರಲಿಲ್ಲ. ಸಂಜೆ ಸುಮಾರು 4 ಗಂಟೆಯ ಹೊತ್ತಿಗೆ ಈ ನತದೃಷ್ಟ ಬಾಲಕಿಯರು ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದುದು ಪತ್ತೆಯಾಗಿತ್ತು. ಇದಕ್ಕೆ ಮೊದಲು ಮನೆಯವರು ಬಾಲಕಿಯರಿಗಾಗಿ ಹುಡುಕಾಟ ನಡೆಸುತ್ತಿದ್ದರು.

ದುಃಖತಪ್ಪ ಬಾಲಕಿಯರ ತಂದೆ ಗೋವಿಂದ ಸಿಂಗ್‌ ಅವರು ತಮ್ಮ ಹೃದಯದಾಳದ ನೋವನ್ನು ಹೀಗೆ ತೋಡಿಕೊಂಡಿದ್ದರು : ನನ್ನ ಈ ಅವಳಿ ಹೆಣ್ಣು ಮಕ್ಕಳು ಹುಟ್ಟಿದಾಗ ನಮ್ಮ ಇಡಿಯ ಕುಟುಂಬದವರು ಆನಂದತುಂದಿಲರಾಗಿದ್ದರು. ಈ ಮಕ್ಕಳನ್ನು ನಾನು ಮೀರತ್‌ನ ಸೆಂಟ್ರಲ್‌ ಸ್ಕೂಲ್‌ ಗೆ ಸೇರಿಸಿದೆ. ಆಟ ಪಾಠಗಳಲ್ಲಿ ತುಂಬಾ ಚುರುಕಾಗಿದ್ದ ಈ ಹುಡುಗಿಯರುಬಗ್ಗೆ ಎಲ್ಲರಿಗೂ ಭಾರೀ ಭರವಸೆ ಇತ್ತು. ಈಗ ಎಲ್ಲವೂ ಮುಗಿದ ಹೋದ ವಿಷಯವಾಗಿದೆ’.

Advertisement

Udayavani is now on Telegram. Click here to join our channel and stay updated with the latest news.

Next