Advertisement

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

07:06 PM Oct 20, 2024 | Team Udayavani |

ಮೇಷ: ವೇಗವೊಂದೇ ಕಾರ್ಯಸಿದ್ಧಿಗೆ ಕಾರಣ ವಲ್ಲವೆಂಬುದು  ನೆನಪಿರಲಿ. ಪರಿಚಿತರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ. ವಿವಾಹ ಸಂಬಂಧ ಮಾತುಕತೆಯಲ್ಲಿ ಪ್ರಗತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ.

Advertisement

ವೃಷಭ: ಎಲ್ಲ ರಂಗಗಳಲ್ಲೂ ಪ್ರಭಾವ ಬೀರುವಿರಿ. ಅಧ್ಯಾಪಕರು ಅಧ್ಯಯನಶೀಲತೆಯನ್ನು ಬಿಡಬೇಡಿ.  ಹಿರಿಯರ ಆರೋಗ್ಯ ಗಮನಿಸಿ. ಹೊಸ ಅವಕಾಶಗಳ ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನದ ವ್ಯವಸ್ಥೆ.

ಮಿಥುನ: ಮನೋಬಲ  ವೃದ್ಧಿಗಾಗಿ ನಿರಂತರ ಸಾಧನೆಯಿರಲಿ. ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ. ಹಿರಿಯರಿಗೆ ನೆಮ್ಮದಿ, ಮಕ್ಕಳಿಗೆ ಸಂಭ್ರಮ. ಸತ್ಕಾರ್ಯಕ್ಕೆ ದಾನ ಮಾಡಿ ಸಾರ್ಥಕ ಭಾವ ಹೊಂದುವಿರಿ.

ಕರ್ಕಾಟಕ: ಇನ್ನಷ್ಟು ಕೆಲಸಗಳು ಬಂದರೂ ಅಂಜದಿರಿ. ನೊಂದವರಿಗೆ  ಸಾಂತ್ವನ ಹೇಳಿ ಧನ್ಯರಾಗುವ ಯೋಗ. ಅಪರೂಪದ ನೆಂಟರ ಆಗ ಮನ. ಕೃಷಿಕರಿಗೆ ಸಂತೋಷ, ಸಮಾಧಾನದ ಸನ್ನಿವೇಶ. ಗೆಳೆಯರ ಮಕ್ಕಳಿಗೆ ಸಂಬಂಧ ಕುದುರಿಸಲು ಸಹಾಯ.

ಸಿಂಹ: ಅನ್ಯಾಯ ಮಾಡಿದವರ ವಿರುದ್ಧ ಸೇಡಿನ ಯೋಚನೆ ಬೇಡ. ಉದ್ಯೋಗ, ವ್ಯವಹಾರ ರಂಗಗಳಲ್ಲಿ  ಅಡಚಣೆ ನಿವಾರಣೆ. ಆಪ್ತಮಿತ್ರನಿಂದ  ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ.

Advertisement

ಕನ್ಯಾ: ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ. ವೃತ್ತಿಪರ ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ. ಸಹೋದರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ  ಹೊಂದಾಣಿಕೆ, ಅನುರಾಗ ವೃದ್ಧಿ.

ತುಲಾ: ದೈಹಿಕ ಆರೋಗ್ಯ ಉತ್ತಮ. ವೃತ್ತಿರಂಗದಲ್ಲಿ ಸ್ಪರ್ಧಾ ಮನೋಭಾವದಿಂದ ಕಿರಿಕಿರಿ. ಗೃಹೋದ್ಯಮಗಳಲ್ಲಿ ತೊಡಗಿರುವವರಿಗೆ ಅನುಕೂಲದ ವಾತಾವರಣ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ.

ವೃಶ್ಚಿಕ: ಉದ್ಯೋಗ ರಂಗದ ಸಾಧನೆಯಿಂದ ಮೇಲಿನವರಿಗೆ ಹರ್ಷ. ವ್ಯಾಪಾರಿಗಳಿಗೆ  ನಿರೀಕ್ಷೆ  ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಆಯ್ದ ಕಸುಬುಗಳಲ್ಲಿ ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ.

ಧನು: ನಿರೀಕ್ಷಿಸದ ಮೂಲದಿಂದ  ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯಸಿದ್ಧಿಯಿಂದ ಹರ್ಷಾಚರಣೆ. ಹಿರಿಯರ ಆವಶ್ಯಕತೆಗಳ ಕಡೆಗೆ ಗಮನ ಇರಲಿ.

ಮಕರ: ಮೃದು ಮಾತಿನಿಂದ ಸುಲಭದಲ್ಲಿ  ಕಾರ್ಯಸಾಧನೆ. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತನೆ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ವರ್ತನೆ.

ಕುಂಭ: ಜನೋಪಯೋಗಿ ಯೋಜನೆಗಳಿಗೆ ನೆರವು ನೀಡಿದ ಸಮಾಧಾನ. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿಗಳಿಗೆ ಹಿರಿಯರ ಪ್ರೋತ್ಸಾಹ.

ಮೀನ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ  ವ್ಯವಹಾರಸ್ಥರಿಗೆ ಅಡಚಣೆ. ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ಅಡಚಣೆ. ಉದ್ಯೋಗ ಬದಲಾವಣೆಯ ಪ್ರಯತ್ನ ಬೇಡ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next