Advertisement

Horoscope: ನಯವಂಚಕರ ಕುತಂತ್ರಕ್ಕೆ ಸೋಲು ಆಗಲಿದೆ

07:44 AM Oct 08, 2024 | Team Udayavani |

ಮೇಷ: ಒಂದಾದಮೇಲೊಂದರಂತೆ ಧಾವಿಸಿ ಬರುವ ಕೆಲಸಗಳು. ಉದ್ಯೋಗಸ್ಥರಿಗೆ ಹೊಸ ವಿಭಾಗಕ್ಕೆ ಪ್ರವೇಶ. ಸ್ವಂತ ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಯಶಸ್ಸು. ವೃತ್ತಿಪರರಿಗೆ ಮಾಮೂಲಿನಂತೆ ಒತ್ತಡ. ಮನೆಯಲ್ಲಿ ಸಂತೋಷದ ಸನ್ನಿವೇಶ.

Advertisement

ವೃಷಭ: ಕ್ರಮಬದ್ಧವಾದ ಚಲನೆಯಿಂದ ಕಾರ್ಯಸಾಧನೆ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ. ಉದ್ಯೋಗಪತಿಗಳಿಗೆ ಕಳಂಕ ಬರಿಸುವ ಘಟನೆ ನಡೆಯುವ ಸಾಧ್ಯತೆ. ಹತ್ತಿರದ ದೇವಿ ಆಲಯಕ್ಕೆ ಸಂದರ್ಶನ.

ಮಿಥುನ: ನಯವಂಚಕರ ಕುತಂತ್ರಕ್ಕೆ ಸೋಲು. ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ. ಸ್ವಂತ ಉದ್ಯಮಗಳಿಗೆ ಬೇಡಿಕೆಗೆ ತಕ್ಕಂತೆ ಪೂರೈಕೆಗಳ ಸಮಸ್ಯೆ. ಸಂಬಂಧಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ.

ಕರ್ಕಾಟಕ: ಉದ್ಯೋಗ, ವ್ಯವಹಾರಗಳಲ್ಲಿ ಸ್ಥೈರ್ಯ. ಹೊಸದಾಗಿ ಪಾಲುದಾರಿಕೆ ವ್ಯವಹಾರಗಳು ಬೇಡ. ದೂರದಲ್ಲಿರುವ ಮಕ್ಕಳಿಂದ ಸಂತೋಷದ ಸುದ್ದಿ. ಬಂಧುವರ್ಗದಲ್ಲಿ ವಿವಾಹಾದಿ ಮಂಗಲ ಕಾರ್ಯಗಳು.

ಸಿಂಹ: ಕ್ಷಿಪ್ರ ಅವಧಿಯಲ್ಲಿ ಮಹತ್ಸಾಧನೆ ಗೈಯುವ ಹಂಬಲ. ಉದ್ಯೋಗ ಸ್ಥಾನದಲ್ಲಿ ಮೇಲಿನವರ ಮೆಚ್ಚುಗೆ. ಉತ್ಪಾದನಾ ರಂಗದವರಿಗೆ ಅಧಿಕ ಬೇಡಿಕೆಯ ಸವಾಲು. ಮನೆಯಲ್ಲಿ ಸೌಹಾರ್ದ, ಸಂಭ್ರಮದ ವಾತಾವರಣ.

Advertisement

ಕನ್ಯಾ: ಎಲ್ಲರ ಆರೋಗ್ಯ ಉತ್ತಮ. ಹಿರಿಯರಿಂದ ವ್ಯವಹಾರಕ್ಕೆ ಸೂಕ್ತವಾದ ಸಲಹೆ ಲಭ್ಯ. ಉದ್ಯೋಗ ಸ್ಥಾನದಲ್ಲಿ ಹಿತಾನುಭವ. ಸ್ವಂತ ವ್ಯವಹಾರದಲ್ಲಿ ಸಮಾಧಾನ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಶುಭ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಮಾಮೂಲು ಸವಾಲುಗಳು. ಗುರು, ದೇವತಾನುಗ್ರಹದಿಂದ ನಿತ್ಯದ ವ್ಯವಹಾರಗಳಲ್ಲಿ ಜಯ. ಮನೆಯಲ್ಲಿ ದೇವತಾಕಾರ್ಯಗಳ ಸಿದ್ಧತೆ. ಗೃಹಿಣಿಯರಿಗೆ ಅಧಿಕ ಕೆಲಸವಾದರೂ ಆನಂದ.

ವೃಶ್ಚಿಕ: ನಿಮಗೆ ಬೇಕಾದಂತೆ ಬದುಕಿ ಸಂತಸವನ್ನು ಅನುಭವಿಸಿ. ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ. ಬಂಧುವರ್ಗದಿಂದ ಶುಭವಾರ್ತೆ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನದ ಸ್ಥಿತಿ. ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಶುಕ್ರದೆಶೆ.

ಧನು: ಆರಕ್ಕೆ ಏರದ, ಮೂರಕ್ಕೆ ಇಳಿಯದ ಬದುಕು. ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶಗಳು ಲಭ್ಯ. ಕೆಲವು ಬಗೆಯ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಮಕ್ಕಳಿಗೆ ಸಂಭ್ರಮದ ವಾತಾವರಣ. ಅಪರೂಪದ ಬಂಧುಗಳ ಭೇಟಿ.

ಮಕರ: ಆತ್ಮವಿಮರ್ಶೆಯಿಂದ ಪರಿಪೂರ್ಣತೆ ಸಿದ್ಧಿ. ಉದ್ಯೋಗದಲ್ಲಿ ಜವಾಬ್ದಾರಿ ಕೊಂಚ ಬದಲಾವಣೆ. ಕಳೆದು ಹೋದ ವಸ್ತು ಮರಳಿ ಸಿಗುವ ಸಾಧ್ಯತೆ. ಹೊಸಬರ ಪರಿಚಯದಿಂದ ಲಾಭ. ಉದರದ ಆರೋಗ್ಯದತ್ತ ಗಮನವಿರಲಿ.

ಕುಂಭ: ಪರಿಸ್ಥಿತಿಯಲ್ಲಿ ಕೊಂಚ ವ್ಯತ್ಯಾಸ. ಉದ್ಯೋಗದಲ್ಲಿ ಗಳಿಕೆ – ದುಡಿಮೆಯ ನಡುವೆ ಅಸಮತೋಲನ. ಕಿವಿಕಚ್ಚುವ ಪ್ರವೃತ್ತಿ ಯುಳ್ಳವರ ಕುರಿತು ಎಚ್ಚರ. ಸಮಾಜಸೇವೆಗೆ ಮತ್ತಷ್ಟು ಅವಕಾಶಗಳು ಗೋಚರ. ಬಂಧುವರ್ಗದಲ್ಲಿ ವಿವಾಹ ನಿಶ್ಚಯ.

ಮೀನ: ದಿನಾರಂಭದಲ್ಲಿ ಕೊಂಚ ಕಿರಿಕಿರಿ ಅನಿಸಿಕೆ. ವೃತ್ತಿಕ್ಷೇತ್ರದಲ್ಲಿ ಸಮಯ ಪಾಲನೆಯ ಸವಾಲು. ಅಧಿಕಾರಿ ವರ್ಗದಿಂದ ಅನುಕೂಲಕರ ಸ್ಪಂದನ. ಕೊಟ್ಟು ಮರೆತಿದ್ದ ಸಾಲ ತಾನಾಗಿ ಮರಳಿ ಆನಂದ. ಹಿರಿಯರ ಆರೋಗ್ಯದಲ್ಲಿ ಕೊಂಚ ಏರುಪೇರು.

Advertisement

Udayavani is now on Telegram. Click here to join our channel and stay updated with the latest news.

Next