Advertisement

Daily Horoscope: ಒಂದೇ ಲಕ್ಷ್ಯವಿಟ್ಟುಕೊಂಡು ಮುಂದುವರಿಯಿರಿ, ತಾತ್ಕಾಲಿಕ ಆತಂಕಗಳು ದೂರ

07:25 AM Sep 08, 2023 | Team Udayavani |

ಮೇಷ: ವ್ಯವಹಾರ ಕ್ಷೇತ್ರದಲ್ಲಿ ಏಕ ಲಕ್ಷ್ಯದಲ್ಲಿ ಸ್ಥಿರವಾಗುವ ಪ್ರಯತ್ನದಲ್ಲಿ ಯಶಸ್ಸಿನತ್ತ ಸಾಗುವಿರಿ. ವಸ್ತ್ರ ಹಾಗೂ ಉಡುಪುಗಳಿಗೆ ಸಂಬಂಧಪಟ್ಟ ವ್ಯವಹಾರಸ್ಥರಿಗೆ ಹೆಚ್ಚು ಲಾಭದ ಸೂಚನೆ. ದೂರಗಾಮೀ ಲಾಭದ ಹೂಡಿಕೆಗಳಿಗೆ ಇದು ಸಕಾಲ.

Advertisement

ವೃಷಭ: ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುತ್ತಿರುವ ಹಿತಶತ್ರುಗಳ ಪರಾಭವ. ಉದ್ಯೋಗ, ವ್ಯವಹಾರ, ಸಂಸಾರ ಈ ಮೂರು ಕ್ಷೇತ್ರಗಳಲ್ಲೂ ನೆಮ್ಮದಿಯ ವಾತಾವರಣ. ಈ ದಿನ ನಿಮಗೆ ಎಲ್ಲ ದಿಕ್ಕುಗಳಿಂದಲೂ ಶುಭ ಸಮಾಚಾರಗಳು ಬರಲಿವೆ.

ಮಿಥುನ: ಒಂದೇ ಲಕ್ಷ್ಯವಿಟ್ಟುಕೊಂಡು ಮುಂದುವರಿಯಿರಿ. ದೇವತಾರಾಧನೆಯಿಂದ ಅಧಿಕ ಬಲ ಪ್ರಾಪ್ತಿ.ಉದ್ಯೋಗಸ್ಥರ ಮುನ್ನಡೆ. ಖನಿಜಗಳಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಮಾಡುವವರಿಗೆ ವಿಶೇಷ ಯಶಸ್ಸು. ಗೃಹಾಲಂಕಾರ ಉದ್ಯಮಿಗಳಿಗೆ ಲಾಭ.

ರ್ಕಾಟಕ: ಪದೇ ಪದೇ ಕಾಡುತ್ತಿದ್ದ ಅನಾರೋಗ್ಯ ದೂರ. ಪ್ರೇಕ್ಷಣೀಯ ಸ್ಥಳವೊಂದಕ್ಕೆ ಭೇಟಿ ನೀಡುವ ಸಾಧ್ಯತೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಉತ್ತೇಜನ ಹಾಗೂ ಸಹೋದ್ಯೋಗಿಗಳ ಪೂರ್ಣ ಸಹಕಾರ. ಬಂಧುವರ್ಗದಲ್ಲಿ ಮಂಗಲ ಕಾರ್ಯ.

ಸಿಂಹ: ಗುರಿ ಮುಟ್ಟುವ ಸಮಯ ದೂರವಿಲ್ಲವಾದ್ದರಿಂದ ವೇಗದ ಪ್ರಯತ್ನ ಸಫ‌ಲ. ಉದ್ಯೋಗಸ್ಥರಿಗೆ ಶುಭಾನುಭವ. ಕಟ್ಟಡ ಸಾಮಗ್ರಿ, ಸಿದ್ಧ ಉಡುಪು ಹಾಗೂ ಕೃಷ್ಯುತ್ಪನ್ನ ಮಾರಾಟಗಾರರಿಗೆ ಅಧಿಕ ಲಾಭ ಸಂಭವ. ಸಾಹಿತ್ಯ ಸೇವಾಸಕ್ತರಿಗೆ ಗೌರವ ಪ್ರಾಪ್ತಿ.

Advertisement

ಕನ್ಯಾ: ಜಾಣತನದ ಮೃದು ಮಾತಿನಿಂದ ಕಾರ್ಯಸಾಧನೆ. ಕಾರ್ಯಕ್ಷೇತ್ರ ವಿಸ್ತರಣೆಗೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟಲ್ಲಿ ಯಶಸ್ಸು ಶತಸ್ಸಿದ್ಧ. ಬಂಧು ಗಳ ಭೇಟಿಯಿಂದ ಹರ್ಷ. ಬಂಧುವರ್ಗದಲ್ಲಿ ಉಪನಯನ, ವಿವಾಹಾದಿ ಮಂಗಲ ಕಾರ್ಯಗಳ ಸೂಚನೆ.

ತುಲಾ: ಡೋಲಾಯಮಾನ ಸ್ಥಿತಿಯಿಂದ ಮುಕ್ತಿ ಹೊಂದುವ ಯತ್ನ ಸಫ‌ಲ. ಗಣೇಶನ ಉಪಾಸನೆಯಿಂದ ಶೀಘ್ರ ಫ‌ಲ ಪ್ರಾಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಉದ್ಯೋಗಾನ್ವೇಷಕರಿಗೆ ಯಶಸ್ಸು ಸನ್ನಿಹಿತ. ಹತ್ತಿರದ ದೇವತಾ ಸನ್ನಿಧಾನ ಭೇಟಿ ಸಂಭವ.

ವೃಶ್ಚಿಕ: ದೇವತಾರಾಧನೆಯಲ್ಲಿ ವಿಶೇಷ ಆಸಕ್ತಿ. ಗೃಹಿಣಿಯರಿಂದ ವಸ್ತ್ರಾಭರಣ ಖರೀದಿ. ಉದ್ಯೋಗಸ್ಥರಿಂದ ಸವಾಲುಗಳ ಯಶಸ್ವೀ ನಿರ್ವಹಣೆ. ವಧೂ-ವರಾನ್ವೇಷಣೆಯಲ್ಲಿ ತೊಡಗಿರುವವರಿಗೆ ಯಶಸ್ಸು. ಮಕ್ಕಳಿಗೆ ಅಧ್ಯಯನಾಸಕ್ತಿ ಮೂಡಿಸಲು ಪ್ರಯತ್ನ.

ಧನು: ಕಾರ್ಯದಲ್ಲಿ ಪರಿಪೂರ್ಣತೆ ಸಾಧಿಸುವ ಪ್ರಯತ್ನದಲ್ಲಿ ಯಶಸ್ಸು. ದೀರ್ಘ‌ಕಾಲೀನ ಹೂಡಿಕೆಗಳಿಂದ ಶುಭ. ವೈದ್ಯರ ಭೇಟಿಯಿಂದ ಸಮಸ್ಯೆ ಪರಿಹಾರ. ತಾತ್ಕಾಲಿಕ ಆತಂಕಗಳು ದೂರ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಃಪ್ರಾಪ್ತಿ.

ಮಕರ: ಮಕ್ಕಳ ಭವಿಷ್ಯದ ಕುರಿತಾದ ಚಿಂತೆಗೆ ಪರಿಹಾರ ಲಭ್ಯ. ಆಪ್ತರಿಂದ ಕಾರ್ಯ ಸಾಧ್ಯ ಸಲಹೆ. ಉದ್ಯೋಗ, ವ್ಯವಹಾರಗಳಲ್ಲಿ ಪೈಪೋಟಿ ಎದುರಿಸು ವುದರಲ್ಲಿ ಯಶಸ್ವಿಯಾಗುವಿರಿ. ಕೃಷ್ಯಾ ಧಾರಿತ ಉದ್ಯಮ ಗಳಲ್ಲಿ ಆಸಕ್ತರಿಗೆ ಶುಭ ಸಮಾಚಾರ.

ಕುಂಭ: ನಿಮ್ಮ ಆಸಕ್ತಿಯ ಕ್ಷೇತ್ರವಾಗಿರುವ ಸಮಾಜ ಸೇವೆಯಲ್ಲಿ ಹೊಸ ಅವಕಾಶಗಳು ಲಭ್ಯ. ವಿವಾದಗಳಿಂದ ದೂರವುಳಿಯುವ ಪ್ರಯತ್ನ. ಸ್ವಂತದ ಹಾಗೂ ಮನೆಯವರ ಆರೋಗ್ಯ ಗಮನಿಸಿ. ದೂರದ ಅತಿಥಿಗಳ ಆಗಮನ. ಸಂಗೀತ ಶ್ರವಣ, ನಾಮಸಂಕೀರ್ತನೆಗಳಲ್ಲಿ ಆಸಕ್ತರಿಗೆ ಆನಂದ.

ಮೀನ: ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ. ಉದ್ಯೋಗ ದಲ್ಲಿ ನೆಮ್ಮದಿ.ವ್ಯವಹಾರದಲ್ಲಿ ಸುಧಾರಣೆ.ಹಣಕಾಸು ಪರಿಸ್ಥಿತಿ ಕೊಂಚ ಉತ್ತಮ. ಹಿರಿಯರ ಅಪೇಕ್ಷೆ ಈಡೇರಿಸುವ ಪ್ರಯತ್ನದಲ್ಲಿ ಯಶಸ್ಸು ಲಭ್ಯ. ಕುಟುಂಬದ ಬಂಧುಗಳ ಆಗಮನ ನಿರೀಕ್ಷೆ. ಉದ್ಯೋಗ ಅರಸುತ್ತಿರುವವರಿಗೆ ಯಶಸ್ಸು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಗೆ ವಿಶೇಷ ಪ್ರಯತ್ನ ಅವಶ್ಯ.

Advertisement

Udayavani is now on Telegram. Click here to join our channel and stay updated with the latest news.

Next