Advertisement

Horoscope: ಕಾಡುತ್ತಿದ್ದ ಸಮಸ್ಯೆಗಳಿಂದ ಬಿಡುಗಡೆ, ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ

07:30 AM Sep 06, 2024 | Team Udayavani |

ಮೇಷ: ಸಣ್ಣ ತಾತ್ಕಾಲಿಕ ತೊಂದರೆ. ದೈವಾನು ಗ್ರಹದಿಂದ ಆರೋಗ್ಯ ಪ್ರಾಪ್ತಿ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ.

Advertisement

ವೃಷಭ: ಸತ್ಕಾರ್ಯಗಳ ಕಡೆಗೆ ಒಲವು. ಉದ್ಯೋಗ ರಂಗದಲ್ಲಿ ಹೊಸ ಹೊಣೆಗಾರಿಕೆಗಳು. ವ್ಯವಹಾರ ಕ್ಷೇತ್ರದಲ್ಲಿ ಸಹಜ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ಮೊದಲಾದ ವಸ್ತುಗಳ ವ್ಯಾಪಾರಿಗಳಿಗೆ ಶುಭ ಸೂಚನೆ.

ಮಿಥುನ: ಕಾಡುತ್ತಿದ್ದ ಸಮಸ್ಯೆಗಳಿಂದ ಬಿಡುಗಡೆ. ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ಗೃಹಿಣಿಯರು, ಹಿರಿಯರು, ಮಕ್ಕಳಿಗೆ ಸಮಾಧಾನದ ವಾತಾವರಣ.

ಕರ್ಕಾಟಕ: ವ್ಯವಹಾರ ರಂಗದಲ್ಲಿ ವೇಗದ ಓಟಕ್ಕೆ ಪ್ರಯತ್ನ. ನಿರೀಕ್ಷಿತ ನೆರವು ವಿಳಂಬವಾದರೂ ಮುನ್ನಡೆ ಅಬಾಧಿತ. ಗೃಹಿಣಿಯರ ಆರ್ಥಿಕ ಸ್ವಾವಲಂಬನೆ ಪ್ರಯತ್ನದಲ್ಲಿ ಮುನ್ನಡೆ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ.

ಸಿಂಹ: ಕಾರ್ಯಸಾಧನೆಯಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಕಾರ್ಯರಂಗದ ವಿಸ್ತರಣೆಗೆ ಆಹ್ವಾನ. ದೂರದ ಊರಿನಿಂದ ಶುಭ ಸಮಾಚಾರ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ. ಮಕ್ಕಳಿಂದ ಸಂತಸ.

Advertisement

ಕನ್ಯಾ: ಇಷ್ಟದೇವರ ದರ್ಶನದಿಂದ ದೀರ್ಘ‌ಕಾಲೀನ ಸಮಸ್ಯೆ ನಿವಾರಣೆ.ಸಣ್ಣ ಪ್ರವಾಸ ಸಂಭವ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಮಾನಸಿಕ ಸಮಸ್ಯೆ ಸಂತ್ರಸ್ತರಿಗೆ ಸಹಾಯ.

ತುಲಾ: ಸಾಂಸಾರಿಕ ಸುಖ ವೃದ್ಧಿ. ಭಗವತ್‌ ಕೈಂಕರ್ಯದಿಂದ ಜೀವನ ಯಾತ್ರೆಯ ಎಡರು ತೊಡರುಗಳ ನಿವಾರಣೆ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ನಿಶ್ಚಿತಾರ್ಥ. ದೂರದಲ್ಲಿರುವ ಮಿತ್ರರಿಂದ ಅಮೂಲ್ಯ ಸಲಹೆ .

ವೃಶ್ಚಿಕ: ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವಿರಿ ಸ್ವತಂತ್ರ ವ್ಯವಹಾರಸ್ಥರಿಗೆ ಅನುಕೂಲದ ವಿದ್ಯಮಾನ. ಬಂಧುವರ್ಗದಲ್ಲಿ ಶುಭ ಕಾರ್ಯಕ್ಕೆ ಸಹಾಯ. ವಿದೇಶವಾಸಿ ಬಂಧುಗಳಿಂದ ಶುಭಸಮಾಚಾರ.

ಧನು: ಆಪ್ತರ ಆರೋಗ್ಯ ಸಮಸ್ಯೆ ಪರಿಹರಿಸಲು ಸಹಾಯ. ಧಾರ್ಮಿಕ ಕ್ಷೇತ್ರದಲ್ಲಿ ಗೌರವ.ಪರಿಸರ ನೈರ್ಮಲ್ಯ ಕಾರ್ಯಕ್ರಮಕ್ಕೆ ಉತ್ತೇಜನ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಕೃಷ್ಯುತ್ಪನ್ನ ಮಾರಾಟದಿಂದ ಗಣನಾರ್ಹ ಆದಾಯ.

ಮಕರ: ದೈನಂದಿನ ತರಾತುರಿಗೆ ವಿರಾಮ. ಸಾಂಸಾರಿಕ ಕ್ಷೇತ್ರದಲ್ಲಿ ಹರ್ಷದ ವಾತಾವರಣ. ಹೊಸಬಗೆಯ ಕೆಲಸವೊಂದನ್ನು ವಹಿಸಿಕೊಳ್ಳಲು ಆಹ್ವಾನ. ವಾಹನ ದುರಸ್ತಿ ಕೆಲಸಗಾರರಿಗೆ, ದ್ರವಪದಾರ್ಥ ವ್ಯಾಪಾರಿಗಳಿಗೆ ಲಾಭ.

ಕುಂಭ:ಏಳೂವರೆ ಶನಿಯ ಪ್ರಭಾವದಿಂದ ಕೊಂಚ ಕಿರಿಕಿರಿ. ಹಿರಿಯರ ಆರೋಗ್ಯದಲ್ಲಿ ಎಚ್ಚರ.ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ದೂರದಲ್ಲಿರುವ ಬಂಧುಗಳ ಆಗಮನ. ಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ.

ಮೀನ: ಉದ್ಯೋಗಸ್ಥರಿಗೆ ಸಾಮಾನ್ಯ ಸುಧಾರಣೆ. ಸಾಮಾಜಿಕ ರಂಗದಿಂದ ಒತ್ತಡ. ಪೂರ್ವದಿಕ್ಕಿಗೆ ಪ್ರಯಾಣದ ಸಾಧ್ಯತೆ.ಹೊಸ ವ್ಯವಹಾರ ಆರಂಭದ ದಿನ ಮುಂದಕ್ಕೆ.ಸ್ವಂತ ವ್ಯವಹಾರಸ್ಥರಿಂದ ನಾಳೆಯ ಕೆಲಸಗಳ ಸಿದ್ಧತೆ.

Advertisement

Udayavani is now on Telegram. Click here to join our channel and stay updated with the latest news.

Next