Advertisement

ಮಂಗಳವಾರದ ರಾಶಿಫಲ; ಇಲ್ಲಿದೆ ನಿಮ್ಮ ಗ್ರಹಬಲ

07:38 AM Oct 04, 2022 | Team Udayavani |

ಮೇಷ: ಅಧಿಕ ಧನ ಸಂಚಯನ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ದೇವತಾ ಸ್ಥಳ ಸಂದರ್ಶನ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ವೃಷಭ: ನಿರೀಕ್ಷಿತ ಸ್ಥಾನಮಾನ ಗೌರವಾದಿ ವೃದ್ಧಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಒದಗುವ ಕಾಲ. ಅನಿರೀಕ್ಷಿತ ಧನ ಸಂಪತ್ತು ಲಭ್ಯ. ಕೆಲಸ ಕಾರ್ಯಗಳಲ್ಲಿ ಶ್ಲಾಘನೆ ಇತ್ಯಾದಿ ಶುಭಫ‌ಲ.

Advertisement

ಮಿಥುನ: ದೂರ ಪ್ರಯಾಣ ಸಂಭವ. ಸಂಪತ್ತಿನ ಉಳಿತಾಯಕ್ಕೆ ಚಿಂತನೆ. ಮಾತೃ ಸಮಾನ ವರ್ಗದವರ ನಿಮಿತ್ತ ಖರ್ಚು. ಮಿತ್ರರೊಂದಿಗೆ ಜಾಗೃತೆಯಿಂದ ವ್ಯವಹರಿಸಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಅಧಿಕ ಶ್ರಮದಿಂದ ಯಶಸ್ಸು ಲಭ್ಯ.

ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ನೇತೃತ್ವ, ತಲ್ಲೀನತೆ. ನಿರೀಕ್ಷಿತ ಕೆಲಸಗಳಲ್ಲಿ ಸಫ‌ಲತೆ. ಮಿತ್ರ ಸಮಾನರಿಂದ ಅನುಕೂಲ. ಆರೋಗ್ಯದಲ್ಲಿ ಸುಧಾರಣೆ. ಸಾಂಸಾರಿಕ ಸುಖಕ್ಕೆ ಪರಿಶ್ರಮ ಅಗತ್ಯ. ಅನಗತ್ಯ ಖರ್ಚಿಗೆ ಆಸ್ಪದ ನೀಡದಿರಿ.

ಸಿಂಹ: ವಿದ್ಯಾರ್ಥಿಗಳಿಗೆ, ಜ್ಞಾನಿಗಳಿಗೆ ಅನುಕೂಲಕರ ಪರಿಸ್ಥಿತಿ. ತಿಳಿದಂತಹ ವಿದ್ಯೆಯನ್ನು ಪರರಿಗೆ ಹಂಚಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಹಣ ಸಂಪತ್ತಿನ ವೃದ್ಧಿ. ದೇವತಾ ಕಾರ್ಯಗಳಲ್ಲಿ ಅಡಚಣೆ ಎದುರಾದೀತು.

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ. ನೇತೃತ್ವ ವಹಿಸಿದ ನೆಮ್ಮದಿ. ದೀರ್ಘ‌ ಪ್ರಯಾಣ ಸಂಭವ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯದ ಬಗ್ಗೆ ಗಮನಹರಿಸಿ.

Advertisement

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ. ದೂರ ಪ್ರಯಾಣ ಸಂಭವ. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಹಠಮಾರಿತನ ಸಲ್ಲದು. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದಿಂದ ಪ್ರಗತಿ. ಅನಗತ್ಯ ಹಣಕಾಸಿನ ಖರ್ಚಿಗೆ ಆಸ್ಪದ ನೀಡದಿರಿ.

ವೃಶ್ಚಿಕ: ದಂಪತಿಗಳಲ್ಲಿ ಅನ್ಯೋನ್ಯತೆ. ಮನೋರಂಜನೆ, ಪಾಲುಗಾರಿಕಾ ವ್ಯವಹಾರದಲ್ಲಿ ಪ್ರಗತಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಉತ್ತಮ ಧನ ವೃದ್ಧಿ. ಮಿತ್ರರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ.

ಧನು: ಧಾರ್ಮಿಕ ಕಾರ್ಯಗಳ ನೇತೃತ್ವ. ಅನ್ಯರಿಗೆ ಉತ್ತಮ ಮಾರ್ಗದರ್ಶನ ಮಾಡುವಲ್ಲಿ ಸಫ‌ಲತೆ. ಪ್ರಶಂಸೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಗುರುಹಿರಿಯರಿಂದ ಪ್ರೋತ್ಸಾಹ.ಮಕ್ಕಳ ನಿಮಿತ್ತ ಹೆಚ್ಚಿದ ಪರಿಶ್ರಮ.

ಮಕರ: ದೂರ ಪ್ರಯಾಣ. ಧಾರ್ಮಿಕ ಸ್ಥಳ ಸಂದರ್ಶನದಿಂದ ಮನಃಸಂತೋಷ. ಉತ್ತಮ ಧನ ಸಂಚಯನ. ಗುರು ಹಿರಿಯರಿಂದ ಸಂದರ್ಭಕ್ಕೆ ಸರಿಯಾದ ಮಾರ್ಗದರ್ಶನ. ದೂರದ ಊರುಗಳಲ್ಲಿ ಉಳಿತಾಯದ ಆಲೋಚನೆ. ಗೃಹದಲ್ಲಿ ಸಂಭ್ರಮದ ಸ್ಥಿತಿ.

ಕುಂಭ: ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ತಾಯಿ ಸಮಾನ ವರ್ಗದವರಿಂದ ಪ್ರೋತ್ಸಾಹ. ಮಾರ್ಗದರ್ಶನ. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಸೇವಾ ವರ್ಗದವರಿಗೆ ಲಾಭ.

ಮೀನ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ ಜನಮನ್ನಣೆ ಪ್ರಾಪ್ತಿ. ನಿರೀಕ್ಷಿಸಿದಂತೆ ಸಹಾಯ ಲಭ್ಯ. ದಂಪತಿಗಳು ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ಸಂತೋಷ.

Advertisement

Udayavani is now on Telegram. Click here to join our channel and stay updated with the latest news.

Next