Advertisement

Daily Horoscope: ನಕಾರಾತ್ಮಕ ಕಲ್ಪನೆಗಳನ್ನು ಆರಂಭದಲ್ಲೇ  ಛಿದ್ರಗೊಳಿಸಿದರೆ ಕ್ಷೇಮ

07:44 AM Nov 18, 2023 | Team Udayavani |

ಮೇಷ: ಲಾಭ- ನಷ್ಟದ ಲೆಕ್ಕಾಚಾರಕ್ಕೆ ಸೂಕ್ತವಲ್ಲದ ಸಮಯ. ಉದ್ಯೋಗದಲ್ಲಿ ಗುರುತರವಾದ ಜವಾಬ್ದಾರಿ ನಿರ್ವಹಣೆಯ ಅನಿವಾರ್ಯತೆ. ಸ್ವಂತ ಉದ್ಯಮದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಾದ ಸಂದರ್ಭ. ಎಲ್ಲರ ಆರೋಗ್ಯ ಉತ್ತಮ.

Advertisement

ವೃಷಭ: ಸರಿಯಾದ ಗೊತ್ತುಗುರಿಯೊಂದಿಗೆ ನಡೆದರೆ ಎಣಿಕೆ ಮೀರಿದ ಯಶಸ್ಸು ಸಾಧ್ಯ. ನಿಧಾನವಾದರೂ ಸ್ಥಿರವಾದ ಪ್ರಗತಿ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಕೃಷಿ ಉಪಕರಣಗಳ ನಿರ್ಮಾಪಕರ ಆದಾಯ ವೃದ್ಧಿ.

ಮಿಥುನ: ನಕಾರಾತ್ಮಕ ಕಲ್ಪನೆಗಳನ್ನು ಆರಂಭದಲ್ಲೇ ಛಿದ್ರಗೊಳಿಸಿದರೆ ಕ್ಷೇಮ. ಮನೋಬಲ ವೃದ್ಧಿಗೆ ಪ್ರಯತ್ನ ಆರಂಭ. ಉದ್ಯೋಗದಲ್ಲಿ ಪ್ರತಿಭೆಗೆ ಪ್ರಾಧಾನ್ಯ. ಉದ್ಯಮದ ಹೆಸರು ಕೆಡಿಸಲು ಹಿತಶತ್ರುಗಳು ಮಾಡುವ ಪ್ರಯತ್ನ ವಿಫ‌ಲ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕರ್ಕಾಟಕ: ಎಲ್ಲರನ್ನೂ ಜತೆಯಲ್ಲಿ ಸೇರಿಸಿ ಕೊಂಡು ಮುಂದೆ ಸಾಗುವ ವ್ಯಕ್ತಿತ್ವಕ್ಕೆ ಹಿನ್ನಡೆ ಇಲ್ಲ. ಉದ್ಯೋಗದಲ್ಲಿ ಅನಿರೀಕ್ಷಿತವಾಗಿ ಉನ್ನತ ಜವಾಬ್ದಾರಿ. ಉದ್ಯಮ ಕ್ಷೇತ್ರದಲ್ಲಿ ಕೀರ್ತಿ ವರ್ಧನೆ. ಸರಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಪ್ರಯತ್ನಕ್ಕೆ ಮುನ್ನಡೆ.

ಸಿಂಹ: ನಡೆದುಬಂದ ದಾರಿಯ ಅವಲೋಕನ ದಿಂದ ಆತ್ಮತೃಪ್ತಿ. ಕಿರಿಯ ಸಹೋದ್ಯೋಗಿಗಳಿಗೆ ಯಥೋಚಿತ ಸಲಹೆ. ಸ್ವಂತ ಉದ್ಯಮದಲ್ಲಿ ನೌಕರರ ಕ್ಷೇಮಾಭಿವೃದ್ಧಿಗೆ ಕ್ರಮಗಳು. ಮಾನವಹಿತದ ಕಾರ್ಯಗಳಿಂದ ಸಮಾಜದಲ್ಲಿ ಗೌರವ. ನೂತನ ವಾಹನ ಖರೀದಿಗೆ ನಿರ್ಧಾರ.

Advertisement

ಕನ್ಯಾ: ಆತಂಕದ ಕ್ಷಣಗಳಿಂದ ಬಿಡುಗಡೆ. ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಿಂದ ಸಹಾಯ. ಬಂಧುಗಳ ಮನೆಯಲ್ಲಿ ವ್ಯವಹಾರ ಮಾತುಕತೆಯಲ್ಲಿ ಭಾಗಿ.

ತುಲಾ: ಹತಾಶೆಯ ಕ್ಷಣಗಳ ಎದುರು ಸೋಲದಿರಿ. ಬಾಲ್ಯದ ಒಡನಾಡಿಗಳ ಸಹಾಯದಿಂದ ಸಮಸ್ಯೆ ಪರಿಹಾರ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಅಸೂಯಾಪರರಿಗೆ ಅನಿರೀಕ್ಷಿತ ಪರಾಜಯ. ಗುರುಸ್ಥಾನದಲ್ಲಿರುವ ವ್ಯಕ್ತಿ ಅನಿರೀಕ್ಷಿತವಾಗಿ ಮನೆಗೆ ಆಗಮನ

. ವೃಶ್ಚಿಕ: ದೈಹಿಕ ಆರೋಗ್ಯ ಸುಧಾರಣೆಯಿಂದ ಆನಂದ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಕ್ಕೆ ಪ್ರತಿಸ್ಫರ್ಧಿಗಳಿಂದ ಪೈಪೋಟಿ. ನೌಕರರ ಸಮಸ್ಯೆ ಪರಿಹಾರ ಪ್ರಯತ್ನ ಸಫ‌ಲ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ಪ್ರಗತಿಗೆ ತೊಂದರೆ.

ಧನು: ಸದುದ್ದೇಶಕ್ಕಾಗಿ ಛಲದಿಂದ ಪ್ರಯತ್ನಿಸು ವುದು ಅನಿವಾರ್ಯ. ಉದ್ಯೋಗದಲ್ಲಿ ಸಹೋ ದ್ಯೋಗಿಗಳಿಂದ ಪ್ರೋತ್ಸಾಹ. ಕೃಷಿ ಆಧಾರಿತ ಉದ್ಯಮ ಘಟಕದ ಸ್ಥಾಪನೆಗೆ ಅನುಭವಿಗಳೊಂದಿಗೆ ಸಮಾಲೋಚನೆ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ.

ಮಕರ: ಮನಸ್ಸನ್ನು ವಿಶಾಲಗೊಳಿಸುವ ಪ್ರಯತ್ನದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಲು ಸಾಮೂಹಿಕ ಪ್ರಯತ್ನ. ಮಕ್ಕಳ ಭವಿಷ್ಯ ಚಿಂತನೆ. ಸ್ವಂತ ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ.

ಕುಂಭ: ಸಂತೃಪ್ತಿಯ ದಿನವಾದರೂ ಎಣಿಕೆಗೆ ಮೀರಿದಷ್ಟು ಕಾರ್ಯಗಳ ಹೊರೆ. ಹಲವು ರಂಗಗಳಿಂದ ಏಕಕಾಲಕ್ಕೆ ಕರ್ತವ್ಯದ ಕರೆ. ಆಪ್ತರಿಂದ ಸಹಾಯದ ಕೊಡುಗೆ. ಉದ್ಯೋಗ ಸ್ಥಾನದಲ್ಲಿ ಕಿರಿಯರಿಗೆ ಮಾರ್ಗದರ್ಶನ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು.

ಮೀನ: ಅವಸರದ ಕಾರ್ಯಕ್ರಮಗಳು. ಉದ್ಯೋಗದಲ್ಲಿ ಏಕಕಾಲಕ್ಕೆ ಹಲವು ವಿಭಾಗಗಳತ್ತ ಲಕ್ಷÂ ಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನದಿಂದಾಗಿ ಕಾರ್ಯ ನಿರ್ವಹಣೆ ನಿರಾತಂಕ. ಕೃಷಿ ಆದಾರಿತ ಉದ್ಯಮ ಘಟಕ ಆರಂಭಿಸಲು ನುರಿತವರ ಸಹಾಯ ಸಂಭವ. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.

Advertisement

Udayavani is now on Telegram. Click here to join our channel and stay updated with the latest news.

Next