Advertisement

Daily Horoscope: ಆತಂಕದ ಕಾಲ ಕಳೆದು ನೆಮ್ಮದಿಯ ಪರ್ವ ಆರಂಭ, ಉದ್ಯೋಗದಲ್ಲಿ ಪ್ರತಿಭೆ

07:27 AM Mar 02, 2024 | Team Udayavani |

ಮೇಷ: ಸಪ್ತಾಹದ ಕೊನೆಯ ದಿನ. ಉದ್ಯೋಗಸ್ಥರಲ್ಲಿ ಕೆಲವರಿಗೆ ಅವಧಿಗೆ ಮೊದಲೇ ಕೆಲಸ ಮುಗಿದ ಸಮಾಧಾನವಿದ್ದರೆ ಇನ್ನು ಕೆಲವರಿಗೆ ಮುಗಿಸುವ ಆತುರ. ಉದ್ಯಮಗಳ ಪ್ರಗತಿಗೆ ಹಾನಿಯಿಲ್ಲ. ಮಹಿಳೆಯರ ಉದ್ಯಮ ಅಭಿವೃದ್ಧಿ.

Advertisement

ವೃಷಭ: ಸರ್ವತೋಮುಖ ಅಭಿವೃದ್ಧಿಯ ಲಕ್ಷಣಗಳು ಗೋಚರ. ಉದ್ಯೋಗಸ್ಥರು ಕರ್ತವ್ಯ ಪಾಲನೆಯಲ್ಲಿ ಯಶಸ್ವಿ. ಉದ್ಯಮಗಳ ಅಭಿವೃದ್ಧಿ ಅಬಾಧಿತ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಹೇರಳ ಲಾಭ.

ಮಿಥುನ: ಆತಂಕದ ಕಾಲ ಕಳೆದು ನೆಮ್ಮದಿಯ ಪರ್ವ ಆರಂಭ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯಸಾಮರ್ಥ್ಯಕ್ಕೆ ಗೌರವ. ಕೃಷಿ ಕ್ಷೇತ್ರದಲ್ಲಿ ಮುಂದುವರಿದ ಬೆಳವಣಿಗೆ. ಧಾರ್ಮಿಕ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ.

ಕರ್ಕಾಟಕ: ಪ್ರತಿಭೆ ತೋರಲು ಸರಿಯಾದ ಪರಿಸರಕ್ಕೆ ಪ್ರವೇಶ. ಉದ್ಯೋಗ ಸ್ಥಾನದಲ್ಲಿ ಕ್ರಿಯೆಗೆ ಉತ್ತೇಜಿಸುವ ವಾತಾವರಣ. ಒಡೆಯರು- ನೌಕರರ ನಡುವೆ ಸಂಬಂಧ ಸುಧಾರಣೆ. ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯ.

ಸಿಂಹ: ಎಲ್ಲ ವಿಭಾಗಗಳಲ್ಲೂ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ. ಸರಕಾರಿ ನೌಕರರಿಗೆ ಹಿತಾನುಭವ. ಉದ್ಯಮಿ ಮಹಿಳೆಯರಿಗೆ ಸಂತೃಪ್ತಿಯ ವಾತಾವರಣ.

Advertisement

ಕನ್ಯಾ: ಎಲ್ಲ ಯೋಜನೆಗಳನ್ನೂ ಯಾವುದೇ ವಿಘ್ನವಿಲ್ಲದೆ ಸಕಾಲದಲ್ಲಿ ಅನುಷ್ಠಾನಕ್ಕೆ ತಂದ ತೃಪ್ತಿ. ಉದ್ಯೋಗ, ಉದ್ಯಮಗಳಲ್ಲಿ ಕಾರ್ಯನಿಷ್ಠೆಗೆ ಪ್ರತಿಫ‌ಲ. ಹೊಸ ಪರಿಚಿತರಿಂದ ಸಹಾಯ. ಮನೆಯ ವಾಸ್ತು ಸುಧಾರಣೆಗೆ ಕ್ರಮ. ಹಿರಿಯರ ಆರೋಗ್ಯ ಉತ್ತಮ.

ತುಲಾ: ಕಾರ್ಯಸಂಬಂಧ ದೂರ ಪ್ರಯಾಣ. ಉದ್ಯೋಗಸ್ಥರಿಗೆ ವಿಭಾಗ ಬದಲಾವಣೆ. ನಿಕಟ ಬಂಧುಗಳಿಂದ ಸಕಾಲದಲ್ಲಿ ಸಹಾಯ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಭರವಸೆ. ಆರೋಗ್ಯ ತಕ್ಕಮಟ್ಟಿಗೆ ಉತ್ತಮ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಕಾರ್ಯ ಕ್ಷಮತೆಗೆ ವಿಶೇಷ ಮನ್ನಣೆ. ಉದ್ಯಮಗಳಲ್ಲಿ ಸೌಹಾರ್ದದ ವಾತಾವರಣ. ಲೇವಾದೇವಿ ವ್ಯವಹಾರ ದಿಂದ ಪ್ರತಿಕೂಲ ಪರಿಣಾಮ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಧನು: ವಿವಿಧ ಮೂಲಗಳಿಂದ ವರಮಾನದಲ್ಲಿ ಏರಿಕೆ. ಉದ್ಯೋಗ ಸಂಬಂಧಿ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ. ಪಾಲುದಾರಿಕೆ ಉದ್ಯಮ ಆರಂಭ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ತೃಪ್ತಿಕರ. ವಸ್ತ್ರ ಶೋಕಿ ಪದಾರ್ಥ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ.

ಮಕರ: ನಿರೀಕ್ಷಿಸಿದ್ದಕ್ಕಿಂತ ಸುಲಭವಾಗಿ ಕಾರ್ಯ ಸಾಧನೆ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಿದ ಸಮಾಧಾನ. ವಿದ್ಯುತ್‌ ಸಾಧನಗಳ ಖರೀದಿಗೆ ಧನವ್ಯಯ. ಹಿರಿಯರ ಆರೋಗ್ಯ ಸುಧಾರಣೆ.

ಕುಂಭ: ಸಹೋದ್ಯೋಗಿ ವೃಂದದ ಉತ್ತೇಜನದಿಂದ ಇನ್ನಷ್ಟು ಕಾರ್ಯಗಳಿಗೆ ಸಜ್ಜು. ಉದ್ಯಮದ ಉತ್ಪನ್ನಗಳಿಗೆ ಹಾಗೂ ಮುದ್ರಣ ಸಾಮಗ್ರಿಗಳಿಗೆ ವ್ಯಾಪಕ ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭದ ಕಾಲ.

ಮೀನ: ಆಯೋಜಿತ ಕಾರ್ಯಗಳು ಶೀಘ್ರ ಮುಕ್ತಾಯ. ಹೊಸ ಸೇವೆಗಳನ್ನು ಆರಂಭಿಸಲು ಆಸಕ್ತಿ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷ್ಯುತ್ಪನ್ನಗಳ ಪ್ರಮಾಣ ವೃದ್ಧಿ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ವೃದ್ಧಿ. ವ್ಯಾಪಾರ ನಿಮಿತ್ತ ಪ್ರಯಾಣ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next