Advertisement

Daily Horoscope: ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಚರ್ಚೆ, ಧನಾರ್ಜನೆ ಸುಗಮ

07:15 AM Jul 21, 2023 | Team Udayavani |

ಮೇಷ: ಆರೋಗ್ಯದ ಕಡೆಗೆ ಗಮನವಿರಲಿ. ಉದ್ಯೋಗ ವ್ಯವಹಾರಗಳಲ್ಲಿ ಆಸಕ್ತಿ. ವಾಕ್‌ಚಾತುರ್ಯದ ಕಾರ್ಯ ವೈಖರಿ. ಅನಿರೀಕ್ಷಿತ ಧನಾಗಮನ. ದೂರದ ಬಂಧುಮಿತ್ರರ ಸಹಾಯ. ಸಂಸಾರ ಸುಖದಲ್ಲಿ ತೃಪ್ತಿ.

Advertisement

ವೃಷಭ: ಪ್ರಯಣದಿಂದ ದೇಹಾಯಾಸ. ದೂರದ ವ್ಯವಹಾರದಲ್ಲಿ ಪ್ರಗತಿ. ಧಾರ್ಮಿಕ ಕಾರ್ಯಗಳಿಗೆ ಕುಟುಂಬದವರಿಂದ ಪ್ರೋತ್ಸಾಹ. ನಿರೀಕ್ಷಿತ ಧನಲಾಭ. ದಾಂಪತ್ಯ ಸುಖ ಮಧ್ಯಮ. ಆರೋಗ್ಯ ಗಮನಿಸಿ.

ಮಿಥುನ: ನೂತನ ಮಿತ್ರರ ಸಹಕಾರ. ಮಾತೃಸಮಾನರಿಂದ ಸಂತೋಷ. ಆಸ್ತಿ ವ್ಯವಹಾರದಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರ ಕ್ಷೇತ್ರಗಳಲ್ಲಿ ಚರ್ಚೆ. ಧನಾರ್ಜನೆ ಸುಗಮ. ದಾಂಪತ್ಯ ತೃಪ್ತಿಕರ. ಜಲೋತ್ಪನ್ನಗಳಿಂದ ಲಾಭ.

ಕರ್ಕ: ಉದ್ಯೋಗ ವ್ಯವಹಾರ ಸಮರ್ಪಕ ನಿರ್ವಹಣೆಯಿಂದ ಧನ ಗೌರವ ಸಂಪಾದನೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಆಸ್ತಿ, ಗೃಹ ವಾಹನ ಸಂಬಂಧ ಖರ್ಚು. ಸ್ವಾವಲಂಬಿಗಳಾಗಿ ಕಾರ್ಯ ನಿರ್ವಹಿಸಿ.

ಸಿಂಹ: ಕೆಲಸ ಕಾರ್ಯದಲ್ಲಿ ತಲ್ಲೀನತೆ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗದೆ ಬೇಸರ. ಸಂಪಾದನೆ. ಗೃಹೋಪಯೋಗಿ ವಸ್ತುಗಳ ಖರೀದಿ. ಗುರು ಹಿರಿಯರಿಂದ ಸಹಾಯ ಸಾಧ್ಯ. ವೈರಿಯ ದಮನ. ಸಂಬಂಧಿಕರೊಂದಿಗೆ ಸೌಹಾರ್ದತೆಯಿಂದಿರಿ.

Advertisement

ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ದೂರ ಪ್ರಯಾಣ ಸಂಭವ. ದೂರದ ವ್ಯವಹಾರದಲ್ಲಿ ಪ್ರಗತಿ. ಅಧ್ಯಯನಶೀಲರಿಗೆ ವಿಪುಲ ಅವಕಾಶ. ದಾಂಪತ್ಯ ಸುಖ ಮಧ್ಯಮ. ಹಣಕಾಸಿನ ಬಗ್ಗೆ ಜಾಗೃತೆ ವಹಿಸಿ. ಆರೋಗ್ಯದ ಬಗ್ಗೆ ಗಮನಿಸಿ.

ತುಲಾ: ಉತ್ತಮ ಧನಾರ್ಜನೆ. ಆರೋಗ್ಯದ ಕಡೆಗೆ ಗಮನಹರಿಸಿ. ಸತಿ-ಪತಿ ಸಹಕಾರದಿಂದ ಸಂತೋಷ. ಮಾತಿನಲ್ಲಿ ಸ್ಪಷ್ಟತೆ. ಸಹನೆ ಅಗತ್ಯ. ಮಾನಸಿಕ ಒತ್ತಡಕ್ಕೆ ಅವಕಾಶ ನೀಡದಿರಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ.

ವೃಶ್ಚಿಕ: ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ದೂರದ ಮಿತ್ರರೊಂದಿಗೆ ಸಮಾಗಮ. ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ. ಯೋಚಿಸಿದಂತೆ ಕಾರ್ಯಸಿದ್ಧಿ. ಹಿರಿಯರಿಂದ ಸೂಕ್ತ ಸಲಹೆ ಮಾರ್ಗದರ್ಶನ.

ಧನು: ಆರೋಗ್ಯವನ್ನು ನಿರ್ಲಕ್ಷಿಸದಿರಿ. ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಧೀರ, ಶೂರರಾಗಿ ಮುನ್ನಡೆಯಿರಿ. ನಾಯಕತ್ವ ಗುಣವೃದ್ಧಿ. ಅಧಿಕ ಧನಾರ್ಜನೆ. ಸಂಸಾರ ಸುಖ ತೃಪ್ತಿಕರ.

ಮಕರ: ಧೈರ್ಯದಿಂದ ಮುನ್ನುಗ್ಗುವಿರಿ. ಕಾರ್ಯರಂಗದಲ್ಲಿ ಕೀರ್ತಿ ಸಂಪಾದನೆ. ನಿರೀಕ್ಷೆಯಂತೆ ಮರ್ಯಾದೆಯ ಗಳಿಕೆ ವೃದ್ಧಿ. ಧಾರ್ಮಿಕ ಕ್ಷೇತ್ರ ಸಂದರ್ಶನ. ದೂರದ ಮಿತ್ರರ, ಗುರುಹಿರಿಯರ ಸಹಕಾರ. ದಂಪತಿಗಳ ಅನ್ಯೋನ್ಯತೆ ವೃದ್ಧಿ.

ಕುಂಭ: ಉತ್ತಮ ಆರೋಗ್ಯ. ಬಂಧುಮಿತ್ರರ ಭೇಟಿ. ಗೃಹದಲ್ಲಿ ಸಂಭ್ರಮ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು. ಸಂತೋಷ ವೃದ್ಧಿ. ದಾಂಪತ್ಯ ತೃಪ್ತಿಕರ. ಮಕ್ಕಳಿಂದ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ.

ಮೀನ: ಸಂಸಾರ ಸಹಿತ ದೀರ್ಘ‌ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಯಶಸ್ಸು. ಧನಾದಾಯ ವೃದ್ಧಿ. ವಾಕ್ಚಾತುರ್ಯದಿಂದ ಜನರಂಜನೆ. ಆಸ್ತಿ ವ್ಯವಹಾರದಲ್ಲಿ ಮುನ್ನಡೆ.

 

Advertisement

Udayavani is now on Telegram. Click here to join our channel and stay updated with the latest news.

Next