Advertisement

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಅನವಶ್ಯ ವೈಮನಸ್ಯದ ಸಾಧ್ಯತೆ

07:29 AM Jan 24, 2024 | Team Udayavani |

ಮೇಷ: ಕಾರ್ಯದಲ್ಲಿ ವೈವಿಧ್ಯವಿದ್ದರೆ ಬುದ್ಧಿ ಚುರುಕಾಗಿರುತ್ತದೆ. ಉದ್ಯೋಗದಲ್ಲಿ ಬದಲಾಗು ತ್ತಿರುವ ಹೊಣೆಗಾರಿಕೆಗಳು. ಸಣ್ಣ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು ಎದುರಾಗುತ್ತವೆ. ದೂರದೇಶದಲ್ಲಿರುವ ಬಂಧುಗಳಿಂದ ಸಂತೋಷದ ಸಮಾಚಾರ.

Advertisement

ವೃಷಭ: ಒಂದೇ ಯೋಜನೆಯ ಮೇಲೆ ಶಕ್ತಿ ಯನ್ನು ಕೇಂದ್ರೀಕರಿಸುವುದರಿಂದ ಅನುಕೂಲ. ಉದ್ಯೋಗಸ್ಥರೆದುರು ವಿಶಿಷ್ಟ ಅವಕಾಶಗಳ ಅನಾವರಣ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಹೇರಳ ಲಾಭ.

ಮಿಥುನ: ದೀರ್ಘ‌ಕಾಲದಿಂದ ನಿಷ್ಕ್ರಿಯವಾಗಿದ್ದ ಯೋಜನೆಗಳನ್ನು ಚುರುಕುಗೊಳಿಸುವ ಪ್ರಕ್ರಿಯೆಗೆ ಅಡಚಣೆ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ಹಿತಶತ್ರುಗಳ ಪ್ರಭಾವದಿಂದ ಅನವಶ್ಯ ವೈಮನಸ್ಯದ ಸಾಧ್ಯತೆ.

ಕರ್ಕಾಟಕ: ಸರಳ ಹಾಗೂ ನೇರ ಮಾರ್ಗದ ನಡೆ ಯಿಂದ ಕಾರ್ಯಸಾಧನೆ ಸುಲಭ. ಉದ್ಯೋ ಗಸ್ಥರಿಗೆ ವೇತನ ಏರಿಕೆ. ಉದ್ಯಮಗಳಿಗೆ ಸರ ಕಾರಿ ಸಬ್ಸಿಡಿ ಕೈಸೇರಲು ಮಧ್ಯವರ್ತಿಗಳ ಅಡ್ಡಗಾಲು. ಸರ ಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ.

ಸಿಂಹ: ನಿರಂತರ ಕ್ರಿಯಾಶೀಲತೆಗೆ ಇಂಬು ಕೊಡುವ ಸನ್ನಿವೇಶ ಸೃಷ್ಟಿ. ಏಕಕಾಲದಲ್ಲಿ ಅನೇಕ ಬಗೆಯ ವ್ಯವಹಾರಗಳಿಗೆ ಗಮನ ಹರಿಸುವ ಅನಿ ವಾರ್ಯತೆ. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ಇಲ್ಲದ ಪದೋನ್ನತಿ.

Advertisement

ಕನ್ಯಾ: ಕಾರ್ಯ ನಿರ್ವಹಣೆಗೆ ಅನುಕೂಲಕರವಾದ ಪರಿಣತಿ ಪ್ರಾಪ್ತಿ. ಕಾರ್ಯಕ್ಷೇತ್ರದಲ್ಲಿ ಹಿತಕರ ವಾತಾವರಣ. ಸಂಸ್ಥೆಯ ಪ್ರಮುಖರಿಂದ ಹಿರಿಯ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿ ಅಭಿವೃದ್ಧಿಯಿಂದ ಸಮಾಧಾನ.

ತುಲಾ: ಶಾರೀರಿಕ ಬಾಧೆಯಿಂದ ಚೇತರಿಕೆ. ಉದ್ಯೋ ಗಸ್ಥರಿಗೆ ಹಿತಶತ್ರುಗಳ ಕಾಟ ಮುಂದುವರಿಕೆ. ಎದುರಾಳಿಗಳ ಪೈಪೋಟಿಯ ಕಾರಣದಿಂದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ.

ವೃಶ್ಚಿಕ: ದೊಡ್ಡ ಹಾನಿಯಾಗುವ ಭೀತಿ ಸದ್ಯಕ್ಕಿಲ್ಲ. ಉದ್ಯೋಗಸ್ಥರ ಸ್ಥಾನ ಗೌರವ ಅಬಾಧಿತ. ಸರ ಕಾರಿ ಅಧಿಕಾರಿಗಳಿಗೆ ಆತಂಕದ ಸನ್ನಿ ವೇಶ. ರಾಜಕಾರಣಿಗಳ ಹೆಸರು ಕೆಡಿಸುವ ಪ್ರಯತ್ನ ವಿಫ‌ಲ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ.

ಧನು: ನಿರಂತರ ಕ್ರಿಯಾಶೀಲತೆಯೊಂದಿಗೆ ಸಾಹಸ ಪ್ರವೃತ್ತಿಯೂ ಇರುವುದರಿಂದ ಅಭಿ ವೃದ್ಧಿಗೆ ತೊಂದರೆಯಾಗದು. ಪಟ್ಟು ಬಿಡದ ಪ್ರಯತ್ನ ದಿಂದ ಘಟಕದ ಕಾರ್ಯ ನಿರ್ವಹಣೆ ಸುಧಾರಣೆ. ಉದ್ಯಮದ ವೈವಿಧಿÂàಕರಣ ಯೋಜನೆಯಲ್ಲಿ ಮುನ್ನಡೆ.

ಮಕರ: ಶನಿಯ ಅನುಗ್ರಹ ಪ್ರಾಪ್ತಿಯ ಸಮಯ ಸನ್ನಿಹಿತ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲುಗಳು. ಹಿತಶತ್ರುಗಳ ಪೀಡೆ ನಿವಾರಣೆ. ಸಣ್ಣ ಉದ್ಯಮಿಗಳಿಗೆ ಹಠಾತ್‌ ನಷ್ಟವಾಗುವ ಸಾಧ್ಯತೆ. ಯಂತ್ರೋಪಕರಣ ಉದ್ಯಮಿಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣ.

ಕುಂಭ: ಸಪ್ತಾಹ ಮುಂದುವರಿಯುತ್ತಿದ್ದಂತೆ ಮುಂದೆ ಸಾಗುವ ಹಲವು ಬಗೆಯ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಅನುಕೂಲಕರ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ಅಲ್ಪ ಲಾಭ.

ಮೀನ: ಬಹಳ ಪ್ರೋತ್ಸಾಹದ ವಾತಾವರಣ ಅಲ್ಲವಾದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಯಶಸ್ವಿ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯ ಸ್ಥಾನ ಲಭ್ಯ. ಪರಿಸರ ಸುಧಾರಣೆಯ ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ.

Advertisement

Udayavani is now on Telegram. Click here to join our channel and stay updated with the latest news.

Next