Advertisement

ರಾಶಿ ಫಲ; ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ, ನಿರೀಕ್ಷಿತ ಧನಾಗಮನ

07:14 AM Jan 21, 2023 | Team Udayavani |

ಮೇಷ: ಉದ್ಯೋಗ ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಂಭವ. ಆರೋಗ್ಯ ಗಮನಿಸಿ. ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಪ್ರಗತಿ. ಉತ್ತಮ ಧನವೃದ್ಧಿ. ಬಂಧು ಮಿತ್ರರ ಪ್ರೋತ್ಸಾಹ. ಧಾರ್ಮಿಕ ವಿಚಾರದಲ್ಲಿ ನಿಷ್ಠೆ ಶ್ರದ್ಧೆ.

Advertisement

ವೃಷಭ: ದೇವತಾ ಕಾರ್ಯದಲ್ಲಿ ತಲ್ಲೀನತೆ. ಜನಮನ್ನಣೆ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು. ಕೀರ್ತಿ ಸಂಪಾದನೆ. ಧನಾರ್ಜನೆಗೆ ವೃದ್ಧಿ. ಗುರು ಹಿರಿಯರಿಂದ ಸಂತೋಷ ವೃದ್ಧಿ. ಮಿತ್ರರಿಂದ ಸಂತೋಷ ವಾರ್ತೆ.

ಮಿಥುನ: ಉದ್ಯೋಗ ವ್ಯವಹಾರದಲ್ಲಿ ಅಭಿ ವೃದ್ಧಿ. ನಿರೀಕ್ಷಿತ ಧನಾಗಮನ. ಸಹೋದ್ಯೋಗಿಗಳಿಂದ ಸಹಕಾರ. ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಪ್ರಗತಿ. ಸಂಶೋಧಕ ಪ್ರವೃತ್ತಿಯವರಿಗೆ ಸೌಕರ್ಯಾದಿ ವೃದ್ಧಿ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ.

ಕರ್ಕ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ತಲ್ಲಿನತೆ. ನಿರೀಕ್ಷಿತ ಯಶಸ್ಸು ಲಭ್ಯ. ಆರ್ಥಿಕ ಸುದೃಢತೆ. ಮಕ್ಕಳಿಂದಲೂ, ವಿದ್ಯಾರ್ಥಿಗಳಿಂದಲೂ ಹಿರಿಯರಿಗೆ ಸಂತೋಷ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ತಾಳ್ಮೆಯಿಂದ ವ್ಯವಹರಿಸಿ.

ಸಿಂಹ: ಸ್ಥಿರ ಬುದ್ಧಿ ದೃಢತೆಯಿಂದ ಕೂಡಿದ ಕಾರ್ಯವೈಖರಿ. ಸ್ಥಾನಮಾನ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಅಗತ್ಯ. ಮಾತಿನಲ್ಲಿ ತಾಳ್ಮೆ ಸಹನೆ ವಹಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಗೃಹೋಪಕರಣ ವಸ್ತು ಸಂಗ್ರಹ.

Advertisement

ಕನ್ಯಾ: ಪಾಲುದಾರಿಕಾ ವ್ಯವಹಾರದಲ್ಲಿ ಸಂಶಯಕ್ಕೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ. ಉತ್ತಮ ಧನ ಸಂಚಯನ ಹಾಗೂ ಹೂಡಿಕೆಗಳಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ತುಲಾ: ಹಠಮಾರಿತನ ಮಾಡದೇ ಕಾರ್ಯ ಪ್ರವೃತ್ತರಾಗಿ ಅನಾವಶ್ಯಕ ವಾಗ್ವಾದಕ್ಕೆ ಅವಕಾಶ ನೀಡದಿರಿ. ಬಂಧು ಮಿತ್ರರಿಂದ ಸಹಕಾರ. ದಾಂಪತ್ಯ ತೃಪ್ತಿಕರ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ವೃಶ್ಚಿಕ: ಬಂಧು ಮಿತ್ರರ ಭೇಟಿ. ಭೂ ಸಂಭಂಧೀ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ಉತ್ತಮ ಧನಾರ್ಜನೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಅನ್ಯೋನ್ಯತೆ. ಮಕ್ಕಳಿಂದ ಹೆಚ್ಚಿದ ಸುಖ.

ಧನು: ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ. ನಿರೀಕ್ಷಿತ ಧನಸಂಪತ್ತು ಲಭ್ಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ. ಗುರು ಹಿರಿಯರೊಂದಿಗೆ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ದಂಪತಿಗಳಿಗೆ ಹೆಚ್ಚಿದ ಸುಖ.

ಮಕರ: ಆರೋಗ್ಯ ಗಮನಿಸಿ. ಉದ್ಯೋಗದಲ್ಲಿ ನಿರೀಕ್ಷೆಯಂತೆ ಪ್ರಗತಿ. ಯೋಜನೆಗಳ ಸಫ‌ಲತೆ. ದೂರದ ಧನಸಂಪತ್ತು ಪ್ರಾಪ್ತಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ದಾಂಪತ್ಯ ತೃಪ್ತಿಕರ. ಮಕ್ಕಳ ನಿಮಿತ್ತ ಹೆಚ್ಚಿದ ನೆಮ್ಮದಿ.

ಕುಂಭ: ಸ್ಥಿರ ಉತ್ತಮ ಆರೋಗ್ಯ. ಅಧ್ಯಯನದಲ್ಲಿ ತತ್ಪರತೆ. ಮಕ್ಕಳಿಗೆ ಹೆಚ್ಚಿದ ಸೌಕರ್ಯ. ಉದ್ಯೋಗ ವ್ಯವಹಾರಗಳಲ್ಲಿ ಗಣನೀಯ ಉತ್ತಮ ಪ್ರಗತಿ. ಹೆಚ್ಚಿದ ವರಮಾನ ದಾಂಪತ್ಯ ತೃಪ್ತಿದಾಯಕ. ಗುರುಹಿರಿಯರ ರಕ್ಷೆ ಲಭ್ಯ.

ಮೀನ: ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ದೀರ್ಘ‌ ಪ್ರಯಾಣ. ದೂರದ ವ್ಯವಹಾರಗಳಿಂದ ಅನಿರೀಕ್ಷಿತ ಧನಾಗಮ. ಖರ್ಚು ವೆಚ್ಚಗಳಲ್ಲಿ ಮುಂಜಾಗ್ರತೆ ವಹಿಸಿ. ದಾಂಪತ್ಯ ಸುಖ ವೃದ್ಧಿ. ಮಕ್ಕಳಿಗೆ ಉತ್ತಮ ಪ್ರಗತಿದಾಯಕ ಬದಲಾವಣೆ.

 

Advertisement

Udayavani is now on Telegram. Click here to join our channel and stay updated with the latest news.

Next