Advertisement

ರಾಶಿ ಫಲ: ಎಲ್ಲರೂ ಶ್ಲಾಘಿಸುವಂತಹ ದಿನಚರಿ, ಗೌರವ ಆದರಗಳು ವೃದ್ಧಿ

07:18 AM Feb 03, 2023 | Team Udayavani |

ಮೇಷ: ದೈಹಿಕ ಮಾನಸಿಕ ಸುಖ ವೃದ್ಧಿ. ಅಧಿಕ ಶ್ರಮದಿಂದ ಕೂಡಿದ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ದಾಂಪತ್ಯ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡವಿದ್ದರೂ ಕಾರ್ಯ ಸಾಧಿಸಿದ ತೃಪ್ತಿ.

Advertisement

ವೃಷಭ: ಜವಾಬ್ದಾರಿಯುತ ಕಾರ್ಯವೈಖರಿ ಯಿಂದ ಸ್ಥಾನ ಗೌರವಾದಿ ಸುಖ ಪ್ರಶಂಸೆ ಆರೋಗ್ಯ ವೃದ್ಧಿ. ಗೃಹೋಪ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಸಾಂಸಾರಿಕ ಸುಖದಲ್ಲಿ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ.

ಮಿಥುನ: ಉತ್ತಮ ಜನಸಂಪರ್ಕ. ಎಲ್ಲರೂ ಶ್ಲಾಘಿಸುವಂತಹ ದಿನಚರಿ. ಗೌರವ ಆದರಗಳು ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ. ನಷ್ಟ ವಸ್ತುಗಳಿಗಾಗಿ ಪುನಃ ಪ್ರಯತ್ನಿಸಿದರೆ ಸಿಗುವ ಸಮಯ. ದಂಪತಿಗಳಲ್ಲಿ ಪರಸ್ಪರ ಪ್ರೀತಿ ವೃದ್ಧಿ.

ಕರ್ಕ: ಉತ್ತಮ ಯೋಗ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಿಂದ ಕೀರ್ತಿ ಜನಮನ್ನಣೆ ಪ್ರಾಪ್ತಿ. ಆರೋಗ್ಯ ವೃದ್ಧಿ ನಿರೀಕ್ಷಿತ ಧನಸಂಚಯನ. ಮಾತಿನಲ್ಲಿ ತಾಳ್ಮೆ ಪ್ರಾಮಾಣಿಕತೆ ಇರಲಿ. ಗುರು ಹಿರಿಯರಲ್ಲಿ ಭಯ ಭಕ್ತಿಯ ನಡವಳಿಕೆಯಿಂದ ಗೌರವ.

ಸಿಂಹ: ನಿರೀಕ್ಷಿತ ಸ್ಥಾನ ಮಾನ ಪ್ರಾಪ್ತಿ. ರಾಜಕೀಯ, ಸಹಕಾರಿ ವ್ಯವಹಾರಗಳಲ್ಲಿ ಅಭಿವೃದ್ಧಿ. ಲೋಕಪ್ರೀಯತೆ ಜನಮನ್ನಣೆ. ನಿರೀಕ್ಷಿತ ಧನ ಸಂಪತ್ತು ವೃದ್ಧಿ. ಪರೋಪಕಾರದಿಂದ ಅಪವಾದ ತೊಂದರೆ ಸಂಭವ. ವಿಚಾರಮಾಡಿ ತೀರ್ಮಾನಿಸಿದರೆ ನೆಮ್ಮದಿ.

Advertisement

ಕನ್ಯಾ: ಉತ್ತಮ ವಾಕ್‌ ಚತುರತೆ. ಅಧಿಕ ಧನ ಸಂಪತ್ತು ಲಭಿಸಿದ ಸಂತೋಷ. ಕುಟುಂಬ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಬುದ್ಧಿವಂತಿಕೆ ನಡೆಯಿಂದ ಯಶಸ್ಸು. ಜನಮನ್ನಣೆ. ಗೌರವ ಪ್ರಾಪ್ತಿ. ದಂಪತಿಗಳಲ್ಲಿ ಹೆಚ್ಚಿದ ಅನುರಾಗ.

ತುಲಾ: ಪರರ ಸಹಾಯದಿಂದ ಹೆಚ್ಚಿದ ಧನಲಾಭ. ಸಂದಭೋìಚಿತವಾದ ವಾಕ್‌ ಚತುರತೆಯಿಂದ ಕಾರ್ಯ ಸಫ‌ಲತೆ. ಹೆಚ್ಚಿದ ಸಾಂಸಾರಿಕ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ದೂರದ ಚಟುವಟಿಕೆಗಳಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ವೃಶ್ಚಿಕ: ಅನಿರೀಕ್ಷಿತ ಧನವೃದ್ಧಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಕುಟುಂಬ ಸುಖ ವೃದ್ಧಿ. ಆರೋಗ್ಯದ ಬಗ್ಗೆ ಹೆಚ್ಚಿದ ನಿಗಾ ವಹಿಸುವಿಕೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಧನು: ವಿದ್ಯಾರ್ಜನೆಯಲ್ಲಿ ಆಸಕ್ತಿ. ಅನಿರೀಕ್ಷಿತ ಸುಖ ವ್ಯವಸ್ಥೆಗಳು ಲಭಿಸುವುವು. ಪದವಿ ಪ್ರಾಪ್ತಿ. ಮಾನಸಿಕ ತೃಪ್ತಿ. ಯೋಚಿಸಿದಂತೆ ಕಾರ್ಯಗಳು ನಡೆಯುವುವು. ಗುರು ಹಿರಿಯರ ಮಾರ್ಗದರ್ಶನದ ಲಾಭ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವುದು.

ಮಕರ: ದೂರ ಪ್ರಯಾಣ. ಗುರುಹಿರಿಯರ ಅವಲಂಬನೆ ಪರಿಶ್ರಮ ನಿಷ್ಠೆಗೆ ತಕ್ಕ ಪ್ರತಿಫ‌ಲ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ ಮಾನ್ಯತೆ ಪ್ರಾಪ್ತಿ. ಗೃಹದಲ್ಲಿ ಸಂಭ್ರಮ. ಬಂಧು ಮಿತ್ರರ ಆಗಮನದಿಂದ ಮನಃಸಂತೋಷ.

ಕುಂಭ: ಉತ್ತಮ ಸ್ಥಾನ ಗೌರವದ ಸುಖ. ಆಸ್ತಿ ಸಂಗ್ರಹದಲ್ಲಿ ಆಸಕ್ತಿ. ನೂತನ ಮಿತ್ರರ ಭೇಟಿ. ಮಾತೃಸಮಾನರಿಂದ ಸಹಕಾರ ಪ್ರೋತ್ಸಾಹ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕವಾಗಿ ಸುದೃಢ.

ಮೀನ: ಪಾಲುದಾರಿಕ ವ್ಯವಹಾರದಲ್ಲಿ ತಾಳ್ಮೆ ಸಹನೆಯಿಂದ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಆಲೋಚಸಿ ನಿರ್ಣಯ ಮಾಡುವುದರಿಂದ ಯಶಸ್ಸು. ದಾಂಪತ್ಯದಲ್ಲಿ ಯಾ ಮನೆಯ ವಾತಾವರಣದಲ್ಲಿ ಹೆಚ್ಚಿನ ಚರ್ಚೆಗೆ ಆದ್ಯತೆ ನೀಡದಿರಿ.ಧನಾರ್ಜನೆಗೆ ಅತ್ಯುತ್ತಮ.

Advertisement

Udayavani is now on Telegram. Click here to join our channel and stay updated with the latest news.

Next