Advertisement

Daily Horoscope:ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ,ತಪ್ಪು ತಿಳಿವಳಿಕೆಯಿಂದ ಅನವಶ್ಯ ಕಲಹ

07:16 AM Dec 06, 2023 | Team Udayavani |

ಮೇಷ: ಉತ್ತರಾಯಣ ಸಮೀಪಿಸುತ್ತಿರುವಂತೆ ಚುರುಕಾಗುತ್ತಿರುವ ಬುದ್ಧಿಶಕ್ತಿ! ಉದ್ಯೋಗಸ್ಥರಿಗೆ ಹೆಚ್ಚು ಹುಮ್ಮಸ್ಸು. ಸರಕಾರಿ ರಂಗದವರಿಗೆ ಯಥಾಸ್ಥಿತಿ. ಹೊಟೇಲ್‌ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು. ಪಶ್ಚಿಮ ದೇಶದಲ್ಲಿರುವ ಬಂಧುಗಳೊಡನೆ ದೂರವಾಣಿಯಲ್ಲಿ ಸಂಭಾಷಣೆ.

Advertisement

ವೃಷಭ: ಕಲ್ಪಿಸಿರುವ ಯೋಜನೆಗಳನ್ನು ಒಂದೊಂದಾಗಿ ಕಾರ್ಯಗತಗೊಳಿಸುವ ಪ್ರಯತ್ನ. ಉದ್ಯೋಗಸ್ಥರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ದಿನ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಹೇರಳ ಲಾಭ. ವೃತ್ತಿಪರಿಣತ ಶಿಕ್ಷಿತರಿಗೆ ಉದ್ಯೋಗಾವಕಾಶ.

ಮಿಥುನ: ಮುಂದೂಡುತ್ತಾ ಬಂದಿರುವ ಯೋಜನೆ ಗಳನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಆರಂಭ. ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ತಪ್ಪು ತಿಳಿವಳಿಕೆಯಿಂದ ಅನವಶ್ಯ ಕಲಹ. ಕೇಳಿದವರಿಗೆ ಮಾತ್ರ ಸಲಹೆ ಕೊಡಿ. ಯುವ ಜನರಿಗೆ ಧಾರ್ಮಿಕ ಮಾರ್ಗದರ್ಶನದ ವ್ಯವಸ್ಥೆಯ ನೇತೃತ್ವ.

ಕರ್ಕಾಟಕ: ಸುಲಭದಲ್ಲಿ ಆಗುವ ಕೆಲಸಕ್ಕೆ ಸುತ್ತಿ ಬಳಸಿ ಹೋಗುವ ಮಾರ್ಗ ಹಿಡಿಯುವುದರಿಂದ ಕೆಲಸ ಇನ್ನಷ್ಟು ವಿಳಂಬ. ಉದ್ಯೋಗಸ್ಥರಿಗೆ ತಡವಾಗಿ ವೇತನ ಏರಿಕೆ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು ವಿಳಂಬ. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ.

ಸಿಂಹ: ಅಪೇಕ್ಷಿತ ವೇಗದಲ್ಲಿ ಸಾಗುವ ಪ್ರಯತ್ನ. ಒಂದಕ್ಕಿಂತ ಹೆಚ್ಚು ವ್ಯವಹಾರಗಳಲ್ಲಿ ಗಮನವನ್ನು ಕೇಂದ್ರೀಕರಿಸುವ ಆವಶ್ಯಕತೆ. ಉದ್ಯೋಗಸ್ಥರಿಗೆ ಘಟಕದ ನಾಯಕತ್ವ. ಉದ್ಯಮಕ್ಕೆ ಹೊಸ ರೂಪ ನೀಡುವ ಪ್ರಕ್ರಿಯೆ ಆರಂಭ. ಪಾಲುದಾರರಾಗಿ ಹಿರಿಯ ಪರಿಣತರ ಸೇರ್ಪಡೆ.

Advertisement

ಕನ್ಯಾ: ವೃತ್ತಿಪರಿಣತಿ ಸಾಧಿಸುವ ಪ್ರಯತ್ನ ಸಫ‌ಲ. ಹೊಸ ಕಾರ್ಯಕ್ಷೇತ್ರದಲ್ಲಿ ಹಿತಕರ ವಾತಾವರಣ. ಕಾರ್ಯನಿಷ್ಠೆಯನ್ನು ಗುರುತಿಸಿದ ಮಾಲಕರಿಂದ ತಕ್ಕ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಹೊಸ ಬಗೆಯ ಕೃಷಿ ಆರಂಭ. ಶಾಶ್ವತ ನೀರಾವರಿ ಒದಗಿಸುವ ಪ್ರಯತ್ನದಲ್ಲಿ ಮುನ್ನಡೆ.

ತುಲಾ: ಸಾಲುಗಟ್ಟಿ ಬರುವ ನೂರಾರು ಪ್ರಶ್ನೆಗಳನ್ನು ಬದಿಗೆ ಸರಿಸಿ ಮುಂದೆ ಸಾಗಬೇಕಾದ ಸಂದರ್ಭ. ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳಿಂದ ಪೈಪೋಟಿ. ಉದ್ಯೋಗ ಅರಸುವವರಿಗೆ ಮಾರ್ಗದರ್ಶನ ಮಾಡುವ ಅವಕಾಶ.

ವೃಶ್ಚಿಕ: ತಕ್ಕಮಟ್ಟಿಗೆ ಎಲ್ಲವೂ ಚೆನ್ನಾಗಿರುವ ಪರಿಸ್ಥಿತಿ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಿಲ್ಲ. ಸರಕಾರಿ ಅಧಿಕಾರಿಗಳು ಸುಸ್ಥಿತಿಯಲ್ಲಿ. ರಾಜಕಾರಣಿಗಳಿಗೆ ಸೋಲಿನ ಪ್ರಶ್ನೆಯಿಲ್ಲ.ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಲಕ್ಷಿ¾àಕಟಾಕ್ಷ ಹೊತ್ತ ಸೊಸೆ ಮನೆಗೆ ಬರುವ ಸಾಧ್ಯತೆ.

ಧನು: ಜನ್ಮಜಾತ ಉದ್ಯಮಶೀಲರಾದವರಿಗೆ ಆಲಸ್ಯ ಬಾಧಿಸುವ ಪ್ರಶ್ನೆಯಿಲ್ಲ. ಉದ್ಯೋಗಸ್ಥರಿಗೆ ಘಟಕದ ಕಾರ್ಯ ನಿರ್ವಹಣೆಯನ್ನು ಸುಧಾರಿಸುವ ಜವಾಬ್ದಾರಿ. ಉದ್ಯಮದ ವೈವಿಧಿÂàಕರಣ ಯೋಜನೆ ಕಾರ್ಯಾರಂಭ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ.

ಮಕರ: ಏಳೂವರೆ ಶನಿಯ ಕೊನೆಯ ಹಂತದಲ್ಲಿ ಕ್ಷಣಕ್ಷಣಕ್ಕೆ ಎದುರಾಗುವ ವಿಚಿತ್ರ ಸಮಸ್ಯೆಗಳು. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷಿಸುವ ಸನ್ನಿವೇಶಗಳಲ್ಲಿ ವಿಜಯ. ಕೆಲವರ ಸಂಶಯಾಸ್ಪದ ನಡವಳಿಕೆಯಿಂದ ಹಾನಿಯಾಗಬಹುದಾದ ಸಂದರ್ಭ.

ಕುಂಭ: ವಾರದ ಮಧ್ಯದಲ್ಲಿ ನಿಲ್ಲದೆ ಸಾಗುವ ಹಲವು ಬಗೆಯ ಕೆಲಸ ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸದ ಸಮಾಚಾರ.

ಮೀನ: ಸಪ್ತಾಹ ಪ್ರಾರಂಭದ ದಿನದ ಅನುಭವಗಳ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಇಲಾಖೆಯವರ ಸಕಾರಾತ್ಮಕ ಸ್ಪಂದನದಿಂದ ಯಶಸ್ವಿ. ಕೊಂಚ ಕಾಲದಿಂದ ನಿಲ್ಲಿಸಿರುವ ಉದ್ಯಮವನ್ನು ಮತ್ತೆ ಪ್ರಾರಂಭಿಸಲು ಆಗ್ರಹ. ಪರಿಸರ ಸುಧಾರಣೆಗೆ ಸಂಬಂಧಪಟ್ಟ ಸಾಮೂಹಿಕ ಕಾರ್ಯಗಳಲ್ಲಿ ಆಸಕ್ತಿ. ಕುಟುಂಬದ ಹಿರಿಯ ವ್ಯಕ್ತಿಯ ಆಗಮನ.

Advertisement

Udayavani is now on Telegram. Click here to join our channel and stay updated with the latest news.

Next