Advertisement

Daily Horoscope: ಧೈರ್ಯ, ಸಾಹಸದ ಮನಸ್ಥಿತಿಯೊಂದಿಗೆ ಹೊಸ ಸಪ್ತಾಹಕ್ಕೆ ಪ್ರವೇಶ

07:28 AM Dec 04, 2023 | Team Udayavani |

ಮೇಷ: ವಾರದ ವಿರಾಮ ಮುಕ್ತಾಯದೊಂದಿಗೆ ಪುಟಿದೇಳುವ ಕಾರ್ಯೋತ್ಸಾಹ. ಉದ್ಯೋಗ ಸ್ಥಾನ ದಲ್ಲಿ ಹೊಸ ಬೆಂಬಲ. ಸ್ವಂತ ಉದ್ಯಮದ ಓಟ ಆರಂಭ. ನೌಕರರಿಗೆ ಹೆಚ್ಚಿದ ಉತ್ಸಾಹ. ಮಹಿಳೆಯರ ಗೃಹೋದ್ಯಮದ ಜನಪ್ರಿಯತೆ ಹೆಚ್ಚಳ. ಪಾಲುದಾರಿಕೆ ವ್ಯವಹಾರ ಅಭಿವೃದ್ಧಿ.

Advertisement

ವೃಷಭ: ಭಾರೀ ಮುನ್ನೆಗೆತದ ಭರವಸೆಯೊಂದಿಗೆ ಸಪ್ತಾಹ ಆರಂಭ.ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಯುವಜನರನ್ನು ಸೆಳೆಯಲು ಮುಂದುವರಿದ ಪ್ರಯತ್ನ . ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ದೊರಕಿಸಲು ಸಹಾಯ. ಮನೆ ವಿಸ್ತರಣೆಗೆ ಯೋಜನೆ.

ಮಿಥುನ: ಧೈರ್ಯ, ಸಾಹಸದ ಮನಸ್ಥಿತಿಯೊಂದಿಗೆ ಹೊಸ ಸಪ್ತಾಹಕ್ಕೆ ಪ್ರವೇಶ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು ಕೋರಿಕೆ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ . ವ್ಯಾಪಾರಿಗಳಿಗೆ ಆದಾಯ ತೆರಿಗೆ ವಿವರ ಒಪ್ಪಿಸುವ ಚಿಂತೆ.

ಕರ್ಕಾಟಕ:ಬದುಕಿನಲ್ಲಿ ಉತ್ಕರ್ಷ ಹೊಂದುವ ಆಕಾಂಕ್ಷೆಯೊಂದಿಗೆ ಪರಹಿತ ಸಾಧನೆಯ ಬಯಕೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ. ಅಕಸ್ಮಾತ್‌ ಧನಾಗಮ ಯೋಗ. ಉತ್ತರ ದಿಕ್ಕಿನಿಂದ ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಕುಟುಂಬದ ಹಿರಿಯ ವ್ಯಕ್ತಿ ಆಗಮನ.

ಸಿಂಹ: ವಿರಾಮದ ಮರುದಿನ ಪುಷ್ಟೀಕೃತ ಕಾರ್ಯಶಕ್ತಿಯೊಂದಿಗೆ ಕಾರ್ಯರಂಗ ಪ್ರವೇಶ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ. ಕಾರ್ಯಕ್ಷೇತ್ರದಲ್ಲಿ ಉದ್ಯಮದ ಪ್ರಗತಿ. ಹೊಸ ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ. ದೊಡ್ಡ ಪ್ರಮಾಣದ ಕೃಷಿ ಆರಂಭ ಯೋಜನೆಗೆ ಶ್ರೀಕಾರ. ಹಿರಿಯರು, ಗೃಹಿಣಿಯರು ಮಕ್ಕಳಿಗೆ ಸಮಾಧಾನದ ಅನುಭವ.

Advertisement

ಕನ್ಯಾ: ಜೀವನೋಪಾಯಕ್ಕೆ ಒಂದೇ ವೃತ್ತಿಯನ್ನು ಅವಲಂಬಿಸುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ತಂದೆಯ ಕಡೆಯ ಹಿರಿಯ ವ್ಯಕ್ತಿಯ ಸಹಕಾರ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಅನುಕೂಲ ವಾತಾವರಣ.

ತುಲಾ: ಕಾಗದದ ಹುಲಿಗಳಿಗೆ ಹೆದರಬೇಡಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಹಿತಶತ್ರುಗಳಿಗೆ ಸೋಲು ಸನ್ನಿಹಿತ. ಗುರುಸ್ಥಾನದಲ್ಲಿರುವ ಹಿರಿಯರು ಮನೆಗೆ ಆಗಮನ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸು ಸಮಾಧಾನ. ಮಕ್ಕಳ ಪ್ರತಿಭೆಗೆ ಶಾಲೆಯಲ್ಲಿ ಪ್ರಶಂಸೆ .

ವೃಶ್ಚಿಕ: ಪ್ರತಿಕೂಲ ವಾತಾವರಣದಲ್ಲಿ ದೇಹ, ಮನಸ್ಸುಗಳ ಸ್ವಾಸ್ಥ್ಯವನ್ನು ಕಾಯ್ದುಕೊಂಡ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಕ್ಕೆ ಎದುರಾಳಿಗಳಿಂದ ಮತ್ತೆ ಪೈಪೋಟಿ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ತಾತ್ಕಾಲಿಕ ಸಮಸ್ಯೆ ನಿವಾರಣೆ.

ಧನು: ದೈವಭಕ್ತಿ, ಆತ್ಮವಿಶ್ವಾಸದೊಂದಿಗೆ ಪಟ್ಟು ಬಿಡದ ಪ್ರಯತ್ನದಿಂದ ಅಂತಿಮವಾಗಿ ಕಾರ್ಯಸಾಧನೆ. ಸಹೋದ್ಯೋಗಿಗಳಿಗೆ ಹರ್ಷ. ಬಾಲ್ಯದ ಒಡನಾಡಿಯಿಂದ ಸಣ್ಣ ಉದ್ಯಮ ಘಟಕದ ಸ್ಥಾಪನೆ .ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆ ಆರಂಭಿಸಲು ನಿರ್ಧಾರ.

ಮಕರ: ಮನಸ್ಸಿನ ಚಾಂಚಲ್ಯ ತೊಲಗಿಸುವ ಪ್ರಯತ್ನ ಸಾರ್ಥಕ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ಪ್ರಯತ್ನ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.

ಕುಂಭ: ಹೆಸರಿಗೆ ಮಾತ್ರವಿರಾಮದ ದಿನ ಮುಗಿದ ಬಳಿಕ ಕಾರ್ಯರಂಗಕ್ಕೆ ಪ್ರವೇಶ.ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ. ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ.ಸಾಮಾಜಿಕ ವಲಯದ ಆಪ್ತರಿಂದ ಸಹಾಯದ ಕೊಡುಗೆ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು.

ಮೀನ: ಸಪ್ತಾಹ ಆರಂಭದ ದಿನ ಹಲವು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳನ್ನು ಗಮನಿಸುವ ಅನಿವಾರ್ಯತೆ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ. ಕಾರ್ಯ ನಿರ್ವಹಣೆಗೆ ಸಾರ್ವಜನಿಕರ ಪ್ರಶಂಸೆ. ಕೃಷಿ ಆಧಾರಿತ ಉದ್ಯಮ ಘಟಕ ಸ್ಥಾಪನೆ ಪ್ರಯತ್ನ ಮುನ್ನಡೆ. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.

Advertisement

Udayavani is now on Telegram. Click here to join our channel and stay updated with the latest news.

Next