Advertisement

ಶುಕ್ರವಾರದ ರಾಶಿ ಫಲ; ಹೊಸ ಉದ್ಯೋಗ ವ್ಯವಹಾರಗಳಲ್ಲಿ ಅವಕಾಶ, ಅನಿರೀಕ್ಷಿತ ಧನಾಗಮನ

07:14 AM Dec 02, 2022 | Team Udayavani |

ಮೇಷ: ಅನಿರೀಕ್ಷಿತ ಧನಾಗಮನ. ಯೋಗ್ಯ ಮಾತುಗಾರಿಕೆಯಿಂದ ಜನಮನ್ನಣೆ. ಮನೋರಂಜನೆಯಲ್ಲಿ ಕಾಲ ಕಳೆಯುವಿಕೆ. ನೂತನ ಬಂಧುಮಿತ್ರರ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ, ಪ್ರಾಮಾಣಿಕತೆ ಪ್ರದರ್ಶನ.

Advertisement

ವೃಷಭ: ದೂರ ಪ್ರಯಾಣ ಸಂಭವ. ವಿದೇಶೀ ವ್ಯವಹಾರಗಳಲ್ಲಿ ಆಸಕ್ತಿ. ಜನಸಂಪರ್ಕ. ನಾನಾ ರೀತಿಯಲ್ಲಿ ಹೂಡಿಕೆಗೆ ಚಿಂತನೆ. ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ. ವಿಲಾಸೀ ಜೀವನ. ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಸಿಗುವ ಭಾಗ್ಯ.

ಮಿಥುನ: ಸರಿಯಾದ ಯೋಜನೆ, ಆಲೋಚನೆಯಿಂದ ಕಾರ್ಯ ನಿರ್ವಹಿಸಿದರಿಂದ ಯೋಗ್ಯ ಸ್ಥಾನಮಾನ ಗೌರವ ಲಭ್ಯ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಹೊಸ ಉದ್ಯೋಗ ವ್ಯವಹಾರಗಳಲ್ಲಿ ಅವಕಾಶ.

ಕರ್ಕ: ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ. ಕಾರ್ಯ ಸಾಧನೆ. ನಿರೀಕ್ಷಿಸಿದ ಧನಾಗಮನ. ಪರರ ಸಹಾಯದಿಂದ ಸ್ಥಾನಮಾನದಲ್ಲಿ ಪ್ರಗತಿ. ಅತೀ ಮಾತುಗಾರಿಕೆಯಿಂದ ಗೌರವಕ್ಕೆ ಧಕ್ಕೆ ಸಂಭವ. ಗೃಹ ಉಪಯೋಗೀ ವಸ್ತುಗಳ ಸಂಗ್ರಹ.

ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಹಿರಿಯರ, ಮೇಲಧಿಕಾರಿಗಳ ಸಹಾಯ, ಮಾರ್ಗದರ್ಶನದಿಂದ ಲಾಭ, ಪ್ರಗತಿ ಕಂಡುಬರುವುದು. ಉತ್ತಮ ಧನಾರ್ಜನೆ. ಹೊಸ ಪಾಲುದಾರಿಕಾ ವ್ಯವಹಾರಕ್ಕೆ ಚಾಲನೆ. ದಾಂಪತ್ಯ ತೃಪ್ತಿದಾಯಕ.

Advertisement

ಕನ್ಯಾ: ಆರೋಗ್ಯದಲ್ಲಿ ಸುಧಾರಣೆ. ದೇಹಾ ಯಾಸ ಸಂಭವ. ಅಧಿಕ ಒತ್ತಡವಿಲ್ಲದ ಕೆಲಸ ನಿರ್ವಹಿಸಿ. ವಿದ್ಯಾರ್ಥಿಗಳಿಗೆ ಅಭಿವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಹೋದ್ಯೋಗಿಗಳ ಸಹಕಾರ, ಗುರುಹಿರಿಯರ ಪ್ರೋತ್ಸಾಹ, ಮಾರ್ಗದರ್ಶನದ ಲಾಭ.

ತುಲಾ: ಮನೋರಂಜನೆ ಉಲ್ಲಾಸದಲ್ಲಿ ಕಾಲ ಕಳೆಯುವಿಕೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ. ದೀರ್ಘ‌ ಪ್ರಯಾಣ. ವಿವಾಹಾದಿ ವಿಚಾರಗಳಲ್ಲಿ ಆಸಕ್ತಿ. ವಿದೇಶದಲ್ಲಿ ಅಧ್ಯಯನ ಆಸಕ್ತರಿಗೆ ವಿಪುಲ ಅವಕಾಶಗಳು ಒದಗಿಬರುವುವು.

ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗ. ಉದ್ಯೋಗ ವ್ಯವಹಾರಗಳಲ್ಲಿ ಬಹುಜನರ ಸಂಪರ್ಕ. ಅನ್ಯರ ಮೇಲೆ ಅವಲಂಬನೆ. ಗೃಹ ಉಪಯೋಗಿ ವಸ್ತುಗಳ ಸಂಗ್ರಹ. ವಾಹನಾದಿ ಸುಖ ವೃದ್ಧಿ. ಆಸ್ತಿ ಸಂಗ್ರಹ. ಮಿತ್ರರ ಸಹಕಾರ ಲಭ್ಯ.

ಧನು: ಹಠ ಮಾಡದೇ ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾಗಿ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಪ್ರಗತಿ. ಗೌರವಾನ್ವಿತ ಧನ ಸಂಪಾದನೆ. ಸಾಂಸಾರಿಕ ಸುಖ ತೃಪ್ತಿದಾಯಕ.

ಮಕರ: ದೂರ ಪ್ರಯಾಣ. ಗುರುಹಿರಿಯರ ಅವಲಂಬನೆ. ಪರಿಶ್ರಮ, ನಿಷ್ಠೆಗೆ ತಕ್ಕ ಪ್ರತಿಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ, ಮಾನ್ಯತೆ ಪ್ರಾಪ್ತಿ. ಗೃಹದಲ್ಲಿ ಸಂಭ್ರಮ. ಬಂಧುಮಿತ್ರರ ಆಗಮನದಿಂದ ಮನ ಸಂತೋಷ.

ಕುಂಭ: ಉತ್ತಮ ಸ್ಥಾನ ಗೌರವದ ಸುಖ. ಆಸ್ತಿ ಸಂಗ್ರಹದಲ್ಲಿ ಆಸಕ್ತಿ. ನೂತನ ಮಿತ್ರರ ಭೇಟಿ. ಮಾತೃ ಸಮಾನರಿಂದ ಸಹಕಾರ, ಪ್ರೋತ್ಸಾಹ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕವಾಗಿ ಸುದೃಢತೆ.

ಮೀನ: ಸಣ್ಣ ಪ್ರಯಾಣ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ. ಅಧ್ಯಯನದಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ವಿಪುಲ ಸದವಕಾಶಗಳು ಒದಗಿಬರುವುವು. ಹೆಚ್ಚಿದ ಧನಾಗಮನ. ಉಳಿತಾಯಕ್ಕೆ ಆದ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ.

Advertisement

Udayavani is now on Telegram. Click here to join our channel and stay updated with the latest news.

Next