Advertisement

Horoscope: ದೀರ್ಘ‌ಕಾಲದಿಂದ ನೆನೆಗುದಿಗೆ ಬಿದ್ದಿರುವ ಯೋಜನೆ ಆಚರಣೆಗೆ ತರುವ ಪ್ರಕ್ರಿಯೆ

07:17 AM Dec 19, 2023 | Team Udayavani |

ಮೇಷ: ಬುದ್ಧಿಯ ಹರಿತವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುವ ಕಾರ್ಯವೈವಿಧ್ಯ. ಉದ್ಯೋಗದಲ್ಲಿ ಬದಲಾಗುವ ಜವಾಬ್ದಾರಿಗಳು. ಸರಕಾರಿ ಉದ್ಯೋಗಸ್ಥರಿಗೆ ಬದಲಾಗದ ಅನುಭವ, ಸಣ್ಣ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು.

Advertisement

ವೃಷಭ: ಹಲವು ಬಗೆಯ ಯೋಜನೆಗಳನ್ನು ಏಕಕಾಲದಲ್ಲಿ ಕಾರ್ಯಗತಗೊಳಿಸುವ ಪ್ರಯತ್ನ. ಉದ್ಯೋಗಸ್ಥರೆದುರು ತೆರೆದುಕೊಂಡ ವಿಶಿಷ್ಟ ಅವಕಾಶಗಳು. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಹೇರಳ ಲಾಭ.

ಮಿಥುನ: ದೀರ್ಘ‌ಕಾಲದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಆಚರಣೆಗೆ ತರುವ ಪ್ರಕ್ರಿಯೆ ಮುನ್ನಡೆ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ತಪ್ಪು ತಿಳಿವಳಿಕೆಯಿಂದ ಅನವಶ್ಯ ವೈಮನಸ್ಯದ ಸಾಧ್ಯತೆ.

ಕರ್ಕಾಟಕ: ನೇರ ಮಾರ್ಗದ ನಡೆಯಿಂದ ಕಾರ್ಯಸಾಧನೆ ಸುಲಭ. ಉದ್ಯೋಗಸ್ಥರಿಗೆ ವೇತನ ಏರಿಕೆಯಲ್ಲಿ ವಿಳಂಬ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು ಮಧ್ಯವರ್ತಿಗಳ ಅಡ್ಡಗಾಲು. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ.

ಸಿಂಹ: ಕಾರ್ಯರಂಗದಲ್ಲಿ ತಡೆಯಿಲ್ಲದೆ ಸಾಗುವ ಪ್ರಯತ್ನ. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವ್ಯವಹಾರಗಳಿಗೆ ಗಮನ ಹರಿಸುವ ಅನಿವಾರ್ಯತೆ. ಉದ್ಯೋಗಸ್ಥರಿಗೆ ಆರ್ಥಿಕ ಲಾಭ ನೀಡದ ಪದೋನ್ನತಿ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ.

Advertisement

ಕನ್ಯಾ: ವೃತ್ತಿಪರಿಣತಿ ಸಾಧನೆಯಿಂದ ಸುಲಭವಾದ ಕಾರ್ಯನಿರ್ವಹಣೆ. ಕಾರ್ಯಕ್ಷೇತ್ರದ ವಾತಾವರಣದಲ್ಲಿ ಹಿತಕರ ಬದಲಾವಣೆ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಮುಂದುವರಿದ ಕೃಷಿ ಪ್ರಯೋಗ. ಶಾಶ್ವತ ನೀರಾವರಿ ಒದಗಿಸುವ ಪ್ರಯತ್ನ ಸಫಲ.

ತುಲಾ: ಶರೀರಕ್ಕಾದ ಬಾಧೆಯಿಂದ ಚೇತರಿ ಸಿಕೊಳ್ಳುವ ಪ್ರಯತ್ನ. ಉದ್ಯೋಗಸ್ಥರಿಗೆ ಮುಂದುವರಿದ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿಗೆ ತಾತ್ಕಾಲಿಕ ತಡೆ. ಲೇವಾದೇವಿ ವ್ಯವಹಾರದಿಂದ ದೂರವಿರಿ.

ವೃಶ್ಚಿಕ: ಸದ್ಯೋಭವಿಷ್ಯದಲ್ಲಿ ಯಾವುದೇ ಹಾನಿಯಾಗುವ ಸೂಚನೆಯಿಲ್ಲ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿಯಾಗದು. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ರಾಜಕಾರಣಿಗಳ ಹೆಸರು ಕೆಡಿಸುವ ಪ್ರಯತ್ನ ವಿಫಲ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ.

ಧನು: ಕ್ರಿಯಾಶೀಲತೆಯೊಂದಿಗೆ ಸಾಹಸವೂ ಮೈಗೂಡಿರುವುದರಿಂದ ಮುನ್ನಡೆಗೆ ತೊಂದರೆಯಾಗದು. ಪಟ್ಟುಬಿಡದ ಪ್ರಯತ್ನದಿಂದ ಘಟಕದ ಕಾರ್ಯನಿರ್ವಹಣೆ ಸುಧಾರಣೆ. ಉದ್ಯಮದ ವೈವಿಧಿÂàಕರಣ ಯೋಜನೆಯಲ್ಲಿ ಮುನ್ನಡೆ.

ಮಕರ: ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಸೂಚನೆಗಳು. ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲುಗಳು. ಹಿತಶತ್ರುಗಳ ಮಸಲತ್ತಿಗೆ ಮದ್ದರೆಯುವ ಹಿತೈಷಿಗಳು. ಉದ್ಯಮಿಗಳಿಗೆ ಹಠಾತ್‌ ನಷ್ಟವಾಗುವ ಭೀತಿ.

ಕುಂಭ: ಸಪ್ತಾಹ ಮುಂದುವರಿಯುತ್ತಿದ್ದಂತೆ ಮುಂದೆ ಸಾಗುವ ಹಲವು ಬಗೆಯ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ಲಾಭ.

ಮೀನ: ಅಷ್ಟೊಂದು ಪ್ರೋತ್ಸಾಹಕ ವಾತಾವರಣ ಕಾಣಿಸದಿದ್ದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಯಶಸ್ವಿ. ನಿಲ್ಲಿಸಿರುವ ಉದ್ಯಮವನ್ನು ಮತ್ತೆ ಪ್ರಾರಂಭಿಸಲು ಮುಂದುವರಿದ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next