Advertisement

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

07:28 AM Apr 18, 2024 | Team Udayavani |

ಮೇಷ: ಸಾಂದರ್ಭಿಕ ಸವಾಲುಗಳಿಗೆ ತಕ್ಕ ಉತ್ತರ. ಉದ್ಯೋಗ ಸ್ಥಾನದಲ್ಲಿ ಯಥೋ ಚಿತ ಬದಲಾವಣೆ. ಉದ್ಯಮಿಗಳು ಕಾನೂನು ಸಮಸ್ಯೆಗಳಿಂದ ಪಾರು. ದೂರ ದೇಶದಲ್ಲಿರುವ ಮಗನ ಉದ್ಯೋಗ ಬದಲಾವಣೆ.

Advertisement

ವೃಷಭ: ಉದ್ಯೋಗಸ್ಥರಿಂದ ಹೊಸ ಅವಕಾಶಗಳ ಸದುಪಯೋಗ. ನರ್ಸಿಂಗ್‌ ಮತ್ತು ಟೆಕ್ನಿಶಿಯನ್‌ ಶಿಕ್ಷಣ ಪಡೆದವರಿಗೆ ಉದ್ಯೋಗಾ ವಕಾಶ. ದೀರ್ಘ‌ಕಾಲದ ಕೌಟುಂಬಿಕ ವೈಮನಸ್ಯ ಮುಕ್ತಾಯ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.

ಮಿಥುನ: ಯೋಜನೆಗಳು ಅನುಷ್ಠಾನಕ್ಕೆ ಸಿದ್ಧ. ತಾತ್ಕಾಲಿಕ ಉದ್ಯೋಗಸ್ಥರ ಅತಂತ್ರ ಸ್ಥಿತಿಗೆ ಪರಿಹಾರ. ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ. ಅನವಶ್ಯ ವಿವಾದಗಳಿಂದ ದೂರವಿರಿ. ಯುವಜನರಿಗೆ ಧಾರ್ಮಿಕ ಮಾರ್ಗದರ್ಶನ.

ಕರ್ಕಾಟಕ: ಉದ್ಯೋಗಸ್ಥರ ಆರ್ಥಿಕ ಸಮಸ್ಯೆಗೆ ಪರಿಹಾರ. ಸರಕಾರಿ ಸಬ್ಸಿಡಿ ವಿತರಣೆಗೆ ಕೆಂಪು ಪಟ್ಟಿ ಅಡ್ಡಿ. ವ್ಯವಸ್ಥೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ. ಪ್ರಾಮಾಣಿಕ ನಾಯಕರ ಹೆಸರು ಕೆಡಿಸಲು ದುಷ್ಟರ ಕುತಂತ್ರ.

ಸಿಂಹ: ಇನ್ನಷ್ಟು ಹೊಸ ಜವಾಬ್ದಾರಿಗಳ ಹೊರೆ. ಹೆಚ್ಚು ವ್ಯವಹಾರಗಳ ಕಡೆಗೆ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಉದ್ಯಮದ ಸ್ವರೂಪ ಬದಲಾವಣೆಯ ಪ್ರಕ್ರಿಯೆಗೆ ಚಾಲನೆ. ಹಿರಿಯ ಪರಿಣತರ ಸಕ್ರಿಯ ಪಾತ್ರ.

Advertisement

ಕನ್ಯಾ: ವೃತ್ತಿ ಪರಿಣತಿ ಸುಧಾರಣೆಯಿಂದ ಸರ್ವವಿಧ ಲಾಭ. ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ವರಿಷ್ಠರಿಂದ ಶ್ಲಾಘನೆ.ಲೇವಾದೇವಿ ವ್ಯವಹಾರ ನಷ್ಟಕ್ಕೆ ಕಾರಣ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

ತುಲಾ: ಸಾಂದರ್ಭಿಕವಾದ ಎಲ್ಲ ಬಗೆಯ ಪರೀಕ್ಷೆಗಳಲ್ಲೂ ವಿಜಯ. ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಕಡಿಮೆ ಯಾದ ಎದುರಾಳಿಗಳ ಪೈಪೋಟಿ. ನ್ಯಾಯಾಲಯ ವ್ಯವಹಾರಗಳಲ್ಲಿ ವಿಜಯ.

ವೃಶ್ಚಿಕ: ಎಲ್ಲ ಬಗೆಯ ಪರಿಸ್ಥಿತಿಗಳಲ್ಲೂ ಅನುಕೂಲದ ಪರಿಣಾಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ರಕ್ಷಣೆ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ರಾಜಕಾರಣಿಗಳಿಗೆ ಬಿಗಿಯಾದ ಇಕ್ಕಟ್ಟಿನ ಪರಿಸ್ಥಿತಿ.

ಧನು: ಜನ್ಮಜಾತ ಉದ್ಯಮಶೀಲತೆಗೆ ಸಹ ಚರರ ಮೆಚ್ಚುಗೆ. ಉದ್ಯೋಗ ಘಟಕದ ಕಾರ್ಯ ನಿರ್ವಹಣೆಗೆ ಹೊಸ ರೂಪ ನೀಡಿಕೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ಪಡೆಯಲು ಸಹಾಯ. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರೋತ್ಸಾಹ.

ಮಕರ: ಸದ್ಯಕ್ಕೆ ಸಂದಿಗ್ಧ ಪರಿಸ್ಥಿತಿಯಿಂದ ಮುಕ್ತಿ. ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ಉದ್ಯೋಗಸ್ಥರಿಗೆ ವಿಜಯ. ಬಂಧುವರ್ಗದಲ್ಲಿ ಸಾಮರಸ್ಯ ವೃದ್ಧಿ. ಲೇವಾದೇವಿ ವ್ಯವಹಾರಸ್ತರಿಗೆ ನಷ್ಟ. ಗೃಹೋಪಯೋಗಿ ಸಾಮಗ್ರಿಗಳ ದುರಸ್ತಿಗೆ ಧನವ್ಯಯ.

ಕುಂಭ: ಬೆನ್ನಟ್ಟಿ ಬರುವ ಹಲವು ಬಗೆಯ ಜವಾಬ್ದಾರಿಗಳು. ಉದ್ಯೋಗಸ್ಥರಿಗೆ ಒಂದೇ ಬಗೆಯ ಅನುಭವ. ಸರಕಾರಿ ನೌಕರರಿಗೆ ಹೆಚ್ಚುವರಿ ಹೊಣೆಗಾರಿಕೆಗಳು.ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಎಚ್‌. ಡುಂಡಿರಾಜ್‌ ಸಂತಸದ ಸಮಾಚಾರ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ.

ಮೀನ: ಸಪ್ತಾಹದ ಮಧ್ಯದಲ್ಲಿ ಹಲವು ಹಿತಾನುಭವಗಳು. ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ಸಹಾಯ. ಸೇವಾ ರೂಪದ ಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಯಶಸ್ವಿ. ಹಳೆಯ ಉದ್ಯಮ ಪುನರಾರಂಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಪರಿಸರ ಸುಧಾರಣಾ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯ ಚೇತರಿಕೆ.

Advertisement

Udayavani is now on Telegram. Click here to join our channel and stay updated with the latest news.

Next