Advertisement

ಇಂದಿನ ಗ್ರಹಬಲ: ಈ ರಾಶಿಯವರಿಂದು ಕಂಡಕಂಡವರ ಮೈಮೇಲೆ ಬಿದ್ದು ಗೆಳೆತನದ ಚಟದಿಂದ ದೂರವಿರಿ!

07:55 AM Mar 05, 2021 | Team Udayavani |

05-03-2021

Advertisement

ಮೇಷ: ಈ ದಿನದಲ್ಲಿ ನಿಮಗೆ ಹೊಸಬರನ್ನು ಭೇಟಿಯಾಗುವ ಅವಕಾಶ ಸಿಗುವುದರಿಂದ, ಸಂಬಂಧ ಬೆಳೆಸುವ ಮುನ್ನ ಯೋಚಿಸಿ, ಚಿಂತಿಸಿ ಮುನ್ನಡೆದರೆ ಉತ್ತಮ. ನೀವು ಒಂಟಿಯಾಗಿದ್ದರೆ ನಿಮಗೆ ಜಂಟಿಯಾಗುವ ಆಸೆ.

ವೃಷಭ: ನೂತನ ಗೆಳೆಯ, ಗೆಳತಿಯರ ಸಂಗ ಆನಂದ ನೀಡಬಲ್ಲದು. ನಿಮಗೆ ಬೇಕಾಗಿರುವುದು ಒಂದು ಅರ್ಥಪೂರ್ಣ ಸಂಬಂಧ. ಮನೆಯವರು ನಿಮಗೆ ಸದಾಕಾಲ ಜೊತೆಯಾಗಿ ಪತ್ನಿಯು ಸಹಕಾರ ದೊರೆಯುವುದು. ದಿನಾಂತ್ಯ ಶುಭವಿದೆ.

ಮಿಥುನ: ಶಾಂತಿಪ್ರಿಯರಾದ ನಿಮಗೆ ಶಾಂತಿಯ ಕೊಳಲ ನಾದವನ್ನು ಕೇಳಬಯಸುವಿರಿ. ಆದರೆ ಈಗ ಅದು ಶ್ರುತಿ ತಪ್ಪಿದ ಹಾಡಾಗಲಿದೆ. ಅದಕ್ಕೆ ಕಾರಣ ಸಂಬಂಧಗಳ ಲಯ ತಪ್ಪಿರುವುದು. ಎಲ್ಲರಿಗೂ ಸಮಾಧಾನಿಸುವ ತವಕ.

ಕರ್ಕ: ನಿಮ್ಮ ಮನಸ್ಸಿಗೆ ತೋಚಿದ್ದನ್ನು ನುಡಿಯುವ ಬಾಯಿ ಚಪಲ ನಿಮ್ಮದು. ಅದನ್ನು ಅರ್ಥೈಸಿಕೊಂಡರೆ ಉತ್ತಮ. ಇಲ್ಲದಿದ್ದಲ್ಲಿ ಹಳಸಲಿದೆ. ನಿಮ್ಮಿಂದ ಉಪಕೃತರಾದವರೇ ನಿಮ್ಮನ್ನು ಜರೆಯುವರು. ಇದಕ್ಕೆಲ್ಲ ತಲೆ ಕೆಡಿಸದಿರಿ.

Advertisement

ಸಿಂಹ: ನಿಮಗೆ ಹುಡುಕಿಕೊಂಡು ಬಂದ ಅವಕಾಶವನ್ನು ಬಳಸಿಕೊಳ್ಳಿರಿ. ಅವಿಭಕ್ತ ಕುಟುಂಬದಲ್ಲಿ ಕಷ್ಟ ತಪ್ಪಿದ್ದಲ್ಲ ಎಂದು ನಿಮಗರಿವಿರಲಿ. ಕಂಡಕಂಡವರ ಮೈಮೇಲೆ ಬಿದ್ದು ಗೆಳೆತನದ ಚಟದಿಂದ ದೊರವಿರಿ. ಮುನ್ನಡೆಯಿರಿ.

ಕನ್ಯಾ: ಅನಿಶ್ಚಿತತೆಯ ಬುನಾದಿ ಮೇಲೆ ಸ್ಥಾಪನೆಯಾಗುವ ಸಂಬಂಧ ನಿಮ್ಮನ್ನೆಲ್ಲೋ ಕೊಂಡೊಯ್ಯಲಿದೆ. ಕುಡುಕರ ವ್ಯಭಿಚಾರಿಗಳ ಸ್ನೇಹದಿಂದ ದೂರವಿದ್ದಷ್ಟು ಉತ್ತಮ. ನಿಮ್ಮ ಜೀವನ ಸರಿ ಹೋದೀತು. ಗೃಹದಲ್ಲಿ ಸುಖ, ಸಂತೋಷವಿದೆ.

ತುಲಾ: ಏಕಾಂತದಲ್ಲಿ ಕಾಲ ಕಳೆಯುವುದರಲ್ಲಿರುವ ಸುಖದ ಅರಿವು ನಿಮಗಾಗಲಿದೆ. ಈ ಮೂಲಕ ನೀವು ಈ ಹಿಂದೆ ಮಾಡಿದ ಹಲವಾರು ಆಯ್ಕೆಗಳನ್ನು ಮರುಮೌಲ್ಯಮಾಪನ ಮಾಡಬಹುದು. ಸರಿಯಾದ ದಿಕ್ಕಲ್ಲಿ ಆಲೋಚಿಸಿರಿ.

ವೃಶ್ಚಿಕ: ಸಂಬಂಧಗಳಲ್ಲಿ ಎಲ್ಲಾ ಏಳುಬೀಳುಗಳ ನಂತರವೂ ಸಂಗಾತಿ ನಿಮ್ಮನ್ನೇ ನೆಚ್ಚಿಕೊಳ್ಳುವುದಕ್ಕೆ ತೀರ್ಮಾನಿಸಿರುವುದು ನಿಮಗೊಂದು ಪಾಠವಾಗಲಿದೆ. ಅವಿವಾಹಿತರು ತಮ್ಮ ಸಂಗಾತಿಯಿಂದ ಮಿಶ್ರ ಪತ್ರಿಕ್ರಿಯೆ ಸ್ವೀಕರಿಸಬಹುದು.

ಧನು: ನಿಮ್ಮ ಸಹೋದ್ಯೋಗಿಗಳನ್ನು ಅತೀ ಎಚ್ಚರಿಕೆಯಿಂದ ಗಮನಿಸಿರಿ. ನಿಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದನ್ನು ನೀವು ದೂರ ಮಾಡಿರಿ. ಮನೆಯಲ್ಲಿ ಹಿರಿಯರೊಂದಿಗೆ ವಾದ, ವಾಗ್ವಾದಕ್ಕೆ ಇಳಿಯದಿರಿ. ಪ್ರೀತಿಯಿಂದ ವ್ಯವಹರಿಸಿರಿ.

ಮಕರ: ಹಳೆಯ ಗೆಳೆಯರು ಪುನಃ ಬಂದು ನಿಮಗೆ ಭೇಟಿಯಾದರು. ನೀವು ಸಂಭ್ರಮಿಸುವ ಕಾಲವಿದು. ಹಳೆಯ ವೈಷಮ್ಯವನ್ನು ಬಿಟ್ಟು ಬಿಡಿರಿ. ಗೆಳೆತನದ ಹಸ್ತ ಚಾಚಿರಿ. ಕಡಿದು ಹೋದ ಸಂಬಂಧ ಜೋಡಣೆಯಾಗಲಿದೆ.

ಕುಂಭ:ಕೆಲವೊಂದು ವಿಚಾರವನ್ನು ಥಟ್ಟನೆ ಹೇಳುವ ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡಿರಿ. ನಿಮ್ಮ ವೃತ್ತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಪ್ರಗತಿ ಬಹಳ ನಿಧಾನಗತಿಯಲ್ಲಿರುತ್ತದೆ. ಸಹನೆ, ತಾಳ್ಮೆ ಅಗತ್ಯ.

ಮೀನ: ನಿಮ್ಮ ಕೆಲಸ ಕಾರ್ಯಗಳಲ್ಲಿ ಇಡೀ ದಿನ ತೊಡಗಿಸಿಕೊಂಡು ಬಿಡುವು ಇಲ್ಲವಾದೀತು. ಸಹೋದ್ಯೋಗಿಗಳೊಡನೆ ಎಚ್ಚರಿಕೆಯಿಂದ ವ್ಯವಹರಿಸಿರಿ. ಯಾರಾದರೂ ಕೊಂಚ ಹೊಗಳಿದರೆ ಅಟ್ಟಕ್ಕೇರ ಬೇಡಿ. ನಿಮ್ಮ ಜಾಗ್ರತೆಯಲ್ಲಿ ನೀವಿರಿ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next