ಹೂವಿನಹಡಗಲಿ: ಕಳೆದ 8 ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಮಲ್ಲಪ್ಪ ನಿನ್ನೆ ಶವವಾಗಿದ್ದ ರೀತಿಯಲ್ಲಿ ಪತ್ತೆಯಾಗಿದ್ದು ಈ ಸಾವು ಅನುಮಾಸ್ಪದವಾಗಿದೆ ಎಂದು ಮೃತ ಮಲ್ಲಪ್ಪನ
ಹೆಂಡತಿ ದೂರು ನೀಡಿದ್ದಾಳೆ.
ಸೋಮವಾರ ಮೃತನ ಸಂಬಂಧಿಕರು ಮೃತದೇಹವನ್ನು ತಾಲೂಕು ಕಚೇರಿ ಮುಂದೆ ತಂದು ಈ ಹಿಂದೆ ತಮ್ಮ ಭೂಮಿಗೆ ಸಂಬಂಧಿಸಿದಂತೆ ತಮಗೆ ಸಂಬಂಧಿಸಿದ 22 ಸೆಂಟ್ಸ ಭೂಮಿ ಕಬಳಿಕೆಯಾಗಿದ್ದು ಈ ಕೂಡಲೇ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮೃತರ ಸಂಬಂಧಿಕರು ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತರು.
ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ಮೃತರ ಸಂಬಂಧಿಕರಿಗೆ ಪ್ರಕರಣ ಕುರಿತು ಶೀಘ್ರ ಇತ್ಯರ್ಥ ಮಾಡುವುದಲ್ಲದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರಸವೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು.
ನಂತರ ಅಪರ ಜಿಲ್ಲಾಧಿಕಾರಿ ಮಹೇಶ ಬಾಬು ಸಂಬಂಧಪಟ್ಟ ಅಧಿಕಾರಿಗಳ ಜೊತೆಯಲ್ಲಿ ಸಮಸ್ಯೆ ಕುರಿತು ಸಭೆ ನಡೆಸಿದರು. ಆದರೆ ಯಾವುದೇ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಲು ನಿರಾಕರಿಸಿದರು.