Advertisement

ಹೊನ್ನಾವರ : ಕಾರು ಭೀಕರ ಅವಘಡ ; 3 ಬಲಿ ; 8 ಮಂದಿಗೆ ಗಾಯ 

11:07 AM Nov 13, 2018 | Team Udayavani |

ಹೊನ್ನಾವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206 ರ ಆರೋಳ್ಳಿ ಕ್ರಾಸ್‌ನಲ್ಲಿ  ಸ್ಕಾರ್ಪಿಯೋ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಗುಡ್ಡಕ್ಕೆ ಢಿಕ್ಕಿಯಾಗಿ ಮೂವರು ಸಾವನ್ನಪ್ಪಿ  , 8 ಮಂದಿ ಗಂಭೀರವಾಗಿ ಗಾಯಗೊಂಡ  ಭೀಕರ ಅವಘಡ ಮಂಗಳವಾರ ನಸುಕಿಕ 2.30 ರ ವೇಳೆಗೆ ನಡೆದಿದೆ. 

Advertisement

ಮೃತ ದುರ್ದೈವಿಗಳು ಸಾಗರ ತಾಲೂಕಿನ ಆನಂದಪುರ ನಿವಾಸಿಗಳಾಗಿದ್ದು , ಗೋವಾಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಾಸಾಗುತ್ತಿದ್ದರು ಎನ್ನಲಾಗಿದೆ. 

ಮೃತರನ್ನು ರುಬಿಯಾ(42), ಫಾತಿಮಾಬಿ(65)ಮತ್ತು ಬಾಬು ಸಾಬ್‌ (65) ಎಂದು ಗುರುತಿಸಲಾಗಿದೆ.
8 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತೀ ವೇಗದಲ್ಲಿ ಕಾರನ್ನು ಚಲಾಯಿಸಿದ್ದೇ ಅವಘಡಕ್ಕೆ ಕಾರಣ ಎಂದು ಎಫ್ಐಆರ್‌ನಲ್ಲಿ ದಾಖಲಾಗಿದೆ. 

Advertisement

ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next