Advertisement

ಡೇರಾ ದತ್ತುಪುತ್ರಿ ನೇಪಾಲ ಪಲಾಯನ ಯತ್ನ : ಪೊಲೀಸ್‌ ಕಟ್ಟೆಚ್ಚರ

10:50 AM Sep 11, 2017 | udayavani editorial |

ಹೊಸದಿಲ್ಲಿ : ಗುರ್ಮಿತ್‌ ರಾಮ್‌ ರಹೀಮ್‌ ನ ನಿಕಟವರ್ತಿ ಹಾಗೂ ಆತನ ದತ್ತು ಪುತ್ರಿ ನೇಪಾಲಕ್ಕೆ ಪಲಾಯನ ಮಾಡುವ ಯತ್ನದಲ್ಲಿದ್ದಾಳೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ಫೋಟೋವನ್ನು ದೇಶಾದ್ಯಂತ ಬಿಡುಗಡೆ ಮಾಡಿದ್ದಾರೆ.

Advertisement

ನೇಪಾಲ ಗಡಿ ಭಾಗದಲ್ಲಿರುವ ಎಲ್ಲ ಭಾರತೀಯ ಪೊಲೀಸ್‌ ಠಾಣೆಗಳಲ್ಲಿ ಹನಿಪ್ರೀತ್‌ಳ ಭಾವಚಿತ್ರವನ್ನು ಅಂಟಿಸಲಾಗಿದೆ. 

ಹನಿಪ್ರೀತ್‌ ನೇಪಾಲಕ್ಕೆ ಪಲಾಯನ ಮಾಡದಂತೆ ಎಚ್ಚರ ವಹಿಸುವ ಸಲುವಾಗಿ ಕಾನೂನು ಮತ್ತು ಸುವ್ಯವಸ್ಥೆ ಯ ಹೊಣೆಹೊತ್ತ ಪೊಲೀಸರು ಹೈ ಆಲರ್ಟ್‌ ಘೋಷಿಸಿದ್ದಾರೆ.

ಸಿದ್ಧಾರ್ಥ ನಗರ ಪೊಲೀಸ್‌ ಸುಪರಿಂಟೆಂಡೆಂಟ್‌  ಸತ್ಯೇಂದ್ರ ಕುಮಾರ್‌ ಅವರು ನೇಪಾಲ ಗಡಿ ಭಾಗದಲ್ಲಿರುವ ಕಪಿಲವಸ್ತು, ಮೋಹನ, ಶೊಹ್ರಾಗಢ ಮತ್ತು ದೇಬರುವಾ ಪೊಲೀಸ್‌ ಠಾಣೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ.

ಇದೇ ರೀತಿ ಮಹಾರಾಜಗಂಜ್‌, ಲಖೀಂಪುರ ಮತ್ತು ಬಹರೈಚ್‌ ಜಿಲ್ಲೆಗಳಲ್ಲಿ ಉತ್ತರ ಪ್ರದೇಶ ಕಟ್ಟೆಚ್ಚರ ವಹಿಸಿದ್ದಾರೆ. ಈ ಪ್ರದೇಶಗಳು ನೇಪಾಲ ಗಡಿಗೆ ತಾಗಿಕೊಂಡಿವೆ. 

Advertisement

ಕೆಲ ದಿನಗಳ ಹಿಂದೆ ಹರಿಯಾಣ ಪೊಲೀಸ್‌ ಅಧಿಕಾರಿಗಳು ಹನಿಪ್ರೀತ್‌ ಹುಡುಕಾಟದಲ್ಲಿ ಲಖೀಂಪುರ ಖೇರಿಗೆ ಬಂದಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next