Advertisement

ಹೆಜ್ಜೇನು ದಾಳಿ; ಆರು ವ್ಯಾಪಾರಸ್ಥರಿಗೆ ಗಾಯ

12:47 PM Mar 31, 2022 | Team Udayavani |

ಚಿಂಚೋಳಿ: ಪಟ್ಟಣದಲ್ಲಿ ನಡೆಯುವ ಬುಧವಾರ ಸಂತೆಯಲ್ಲಿ ಮಾರಾಟ ಮಾಡಲು ಬಂದಿದ್ದ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರ ಮೇಲೆ ಹಜ್ಜೇನುಗಳು ದಾಳಿ ಮಾಡಿದ್ದರಿಂದ ಆರು ಜನರು ತೀವ್ರ ಅಸ್ವಸ್ಥರಾಗಿದ್ದು, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

ಈ ಹೆಜ್ಜೇನುಗಳು ಹಳೆ ಸರ್ಕಾರಿ ಆಸ್ಪತ್ರೆ ಪಕ್ಕದ ನೀರಿನ ಟ್ಯಾಂಕ್‌ಗೆ ಹತ್ತಿಕೊಂಡು ಕುಳಿತಿದ್ದವು. ಆಕಸ್ಮಿಕವಾಗಿ ಎಲ್ಲವೂ ಸಂತೆ ಮಾರುಕಟ್ಟೆ ಬಳಿ ಬಂದಿದ್ದರಿಂದ ಘಟನೆ ನಡೆದಿದೆ.

ಹೆಜ್ಜೇನುಗಳು ಕಚ್ಚಿದ್ದರಿಂದ ಆರು ಜನರ ಮೈಕೈ ಉಬ್ಬಿದ್ದು, ಸತತವಾಗಿ ವಾಂತಿ ಮಾಡಿಕೊಳ್ಳುತ್ತಿದ್ದರು. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಐವರನ್ನು ಬಿಡುಗಡೆ ಮಾಡಲಾಗಿದೆ. ಒಬ್ಬರ ರಕ್ತದೊತ್ತಡ ಕಡಿಮೆ ಆಗಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಾ| ಅನಿಲಕುಮಾರ, ಡಾ| ಸಂತೋಷ ಪಾಟೀಲ ತಿಳಿಸಿದ್ದಾರೆ.

ಆಸ್ಪತ್ರೆಗೆ ಸಾಗಿಸಲು ಸಹಾಯ

ಹೆಜ್ಜೇನು ಕಡಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದ ಆರು ಜನರನ್ನು ಜೆಡಿಎಸ್‌ ಮುಖಂಡ ಸಂಜೀವನ್‌ ಯಾಕಾಪುರ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಕಾರ್ಯಕರ್ತರಾದ ನಿಯಾಜ್‌ ಅಲಿ, ಸುರೇಂದ್ರಕುಮಾರ, ರಾಹುಲ್‌ ಯಾಕಾಪುರ, ಎಸ್‌.ಕೆ. ಮುಕ್ತಾರೋದ್ದಿನ್‌ ಆಂಬ್ಯುಲೆನ್ಸ್‌ನಲ್ಲಿ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next