Advertisement

ಉಡುಪಿಗೆ ದುಡಿಯಲು ಹೋಗಿದ್ದ ಆನೆಗೊಂದಿಯ 28 ಜನರಿಗೆ ಹೋಂ ಕ್ವಾರಂಟೈನ್

04:27 PM Apr 27, 2020 | keerthan |

ಗಂಗಾವತಿ; ಉಡುಪಿ ಜಿಲ್ಲೆಗೆ ದುಡಿಯಲು ಹೋಗಿದ್ದ ತಾಲೂಕಿನ ಆನೆಗೊಂದಿ ಗ್ರಾಮದ 28 ಜನ ಗುಳೆ ಕೂಲಿ ಕಾರ್ಮಿಕರನ್ನು ರಾಜ್ಯ ಸರ್ಕಾರ ವಾಪಸ್ ಊರಿಗೆ ಕರೆದುಕೊಂಡು ಬಂದಿದ್ದುಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

Advertisement

ಆನೆಗೊಂದಿಯ ಹೊರವಲಯದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಅವರನ್ನು ಅವರವರ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದು ಪ್ರತಿನಿತ್ಯ ಆಶಾ,ಅಂಗನವಾಡಿ ಆರೋಗ್ಯ ಕಾರ್ಯಕರ್ತರಿಗೆ ಆರೋಗ್ಯ ಕ್ಷೇತ್ರದ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಲಾಯಿತು.

ಗ್ರಾ.ಪ.ಅಧ್ಯಕ್ಷೆ ಅಂಜನಾದೇವಿ, ಪಿಡಿಒ ಕೆ.ಕೃಷ್ಣಪ್ಪ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊರೊನಾ ವೈರಸ್ ಹರಡುವ ಕುರಿತು ಗುಳೆ ಹೋಗಿ ವಾಪಸ್ ಆಗಮಿಸಿದವರಿಗೆ ಜಾಗೃತಿ ಮೂಡಿಸಿದರು

 

Advertisement

Udayavani is now on Telegram. Click here to join our channel and stay updated with the latest news.

Next