Advertisement

ಕೆಪಿಕೆಬಿಗೆ ನೂತನ ಸಿಇಒ ಆಗಿ ರಂಜನ್‌ ಕುಮಾರ್‌ ನೇಮಕ

08:57 PM Jun 04, 2020 | Sriram |

ನವದೆಹಲಿ: ಕೇಂದ್ರೀಯ ಪೊಲೀಸ್‌ ಕಲ್ಯಾಣ ಭಂಡಾರದ (ಕೆಪಿಕೆಬಿ) ನೂತನ ಸಿಇಒ ಆಗಿ ಡಿಐಜಿ ರಂಜನ್‌ ಕುಮಾರ್‌ ಅವರನ್ನು ನೇಮಿಸಿ, ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

Advertisement

ಈ ಹಿಂದೆ ಕೆಪಿಕೆಬಿಗೆ ಸಿಇಒ ಆಗಿ ಡಿಐಜಿ ಆರ್‌.ಎಂ. ಮೀನಾ ಇದ್ದರು. ಪ್ರಧಾನಿ ಮೋದಿ ಅವರು ಆತ್ಮನಿರ್ಭರ ಭಾರತ ಪರಿಕಲ್ಪನೆ ಮುಂದಿಡುತ್ತಿದ್ದಂತೆಯೇ ಗೃಹ ಸಚಿವ ಅಮಿತ್‌ ಶಾ, ಪ್ಯಾರಾಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಜೂನ್‌ 1ರಿಂದ ಸ್ವದೇಶಿ ವಸ್ತುಗಳ ಮಾರಾಟದ ಕುರಿತು ಸರಣಿ ಟ್ವೀಟ್‌ ಮಾಡಿದ್ದರು. ಎರಡು ದಿನಗಳ ಹಿಂದಷ್ಟೇ 1 ಸಾವಿರ ವಿದೇಶಿ ಉತ್ಪನ್ನಗಳ ನಿಷೇಧದ ಪಟ್ಟಿಯನ್ನು ಕೆಪಿಕೆಬಿ ಬಿಡುಗಡೆ ಮಾಡಿ, ಕೂಡಲೇ ಹಿಂಪಡೆದಿತ್ತು. ಸ್ವದೇಶಿ ವಸ್ತು ಮಾರಾಟ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫ‌ಲರಾದ ಕಾರಣಕ್ಕಾಗಿ ಸಿಇಒ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ.

“ಕೇಂದ್ರ ಸರ್ಕಾರದ ಕಡೆಯಿಂದ ನಮಗೆ ಇನ್ನೂ ನಿಷೇಧಿತ ವಿದೇಶಿ ಉತ್ಪನ್ನಗಳ ಪಟ್ಟಿ ಬಂದಿಲ್ಲ’ ಎಂದು ಕೆಪಿಕೆಬಿ ಸ್ಪಷ್ಟಪಡಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next