Advertisement

ಮತ್ತೂಂದು ಪ್ಯಾನ್‌ ಇಂಡಿಯಾ ಸಿನಿಮಾದತ್ತ ಹೊಂಬಾಳೆ ಫಿಲಂಸ್‌

01:12 PM Dec 01, 2020 | Suhan S |

“ಕೆಜಿಎಫ್’, “ಕೆಜಿಎಫ್-2’ನಂತಹ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲಂಸ್‌ ಈಗ ಮತ್ತೂಂದು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದೆ. ಈ ವಿಷಯವನ್ನು ಸ್ವತಃ ಹೊಂಬಾಳೆ ಫಿಲಂಸ್‌ ಖಚಿತಪಡಿಸಿದ್ದು, ಹೊಸ ಚಿತ್ರದ ಬಗೆಗಿನ ಮಾಹಿತಿಯನ್ನು ಚಿತ್ರತಂಡ ಡಿಸೆಂಬರ್‌2 ರಂದು ಬಹಿರಂಗಪಡಿಸಲಿದೆ.

Advertisement

ಈ ಬಗ್ಗೆ ಹೇಳಿಕೊಂಡಿರುವ ಚಿತ್ರತಂಡ, “ಪ್ರಿಯ ಪ್ರೇಕ್ಷಕರೇ ನೀವು ಯಾವಾಗಲೂ ನಮ್ಮ ಸಿನಿಮಾವನ್ನು ನಮಗಿಂತ ಹೆಚ್ಚಿಗೆ ಪ್ರೀತಿಸುತ್ತಾ ಬಂದಿದ್ದೀರಿ. ಈ ಪ್ರೀತಿ ಹೀಗೆ ಮುಂದುವರೆಯಲಿ ಮತ್ತು ನಿಮ್ಮ ಪ್ರೀತಿಯನ್ನು ಮುಂದುವರೆಸಿಕೊಂಡು ಹೋಗಲು ನಾವೀಗ ನಮ್ಮ ಸಂಸ್ಥೆಯ ಮುಂದಿನ “ಇಂಡಿಯನ್‌ ಸಿನಿಮಾ’ಕ್ಕೆ ಸಿದ್ಧರಾಗುತ್ತಿದ್ದೇವೆ. ಚಿತ್ರದ ಬಗೆಗಿನ ಮಾಹಿತಿಯನ್ನು ಡಿಸೆಂಬರ್‌2 ರಂದು ನೀಡುತ್ತೇವೆ’ ಎಂದು ಹೊಂಬಾಳೆ ಫಿಲಂಸ್‌ ಟ್ವೀಟ್‌ ಮಾಡಿದೆ.

ಇದನ್ನೂ ಓದಿ :ಕೋವಿಡ್‌ ಔಷಧ ನಿಧಿಗಾಗಿ ಯುವಕರ ಬೈಕ್‌ ಯಾತ್ರೆ : 3 ಕೋಟಿ ರೂ. ಸಂಗ್ರಹದ ಗುರಿ

ಹೊಂಬಾಳೆ ಫಿಲಂಸ್‌ನಿಂದ ಈ ತರಹದ ಒಂದು ಅನೌನ್ಸ್‌ ಮೆಂಟ್‌ ಹೊರಬೀಳುತ್ತಿದ್ದಂತೆ ಸಿನಿಮಾ ಅಭಿಮಾನಿಗಳಲ್ಲಿಕುತೂಹಲ ಹೆಚ್ಚಿದೆ. ಸಿನಿಮಾದಲ್ಲಿ ಯಾರು ಹೀರೋ ಆಗಿರಬಹುದು, ನಿರ್ದೇಶನ ಯಾರದ್ದೀರಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಈ ನಡುವೆಯೇ ತೆಲುಗು ನಟ ಪ್ರಭಾಸ್‌ ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಹೆಸರು ಹರಿದಾಡುತ್ತಿದೆ.ಕೆಲ ದಿನಗಳ ಹಿಂದಷ್ಟೇ ಪ್ರಶಾಂತ್‌ ನೀಲ್‌, ಪ್ರಭಾಸ್‌ ಅವರನ್ನು ಭೇಟಿಯಾಗಿದ್ದರು. ಆದರೆ, ಚಿತ್ರತಂಡ ಮಾತ್ರ ಅಧಿಕೃತವಾಗಿ ಯಾವ ಮಾಹಿತಿಯನ್ನು ಬಿಟ್ಟಿಲ್ಲ. ವಿಜಯ್‌ ಕಿರಗಂದೂರು ಒಡೆತನದ “ಹೊಂಬಾಳೆ ಫಿಲಂಸ್‌’ ಪುನೀತ್‌ ರಾಜ್‌ ಕುಮಾರ್‌ ಅಭಿನಯದ “ನಿನ್ನಿಂದಲೇ’ ಸಿನಿಮಾ ಮೂಲಕ ನಿರ್ಮಾಣಕ್ಕಿಳಿದಿದ್ದು, ಆ ನಂತರ “ಮಾಸ್ಟರ್‌ ಪೀಸ್‌’, “ರಾಜಕುಮಾರ್‌’, “ಕೆಜಿಎಫ್’ “ಕೆಜಿಎಫ್-2′, “ಯುವರತ್ನ’ ಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಈ ಸಂಸ್ಥೆ ಈಗ ಮತ್ತೂಂದು ಬಿಗ್‌ ಬಜೆಟ್‌ ಹಾಗೂ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಸದ್ಯ “ಕೆಜಿಎಫ್-2′ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಸಂಜಯ್‌ ದತ್‌ ಕೂಡಾ ಈ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next