Advertisement

Karnataka Election: ಅವರಾಡಿದ ಮಾತು ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದೆ: ದೇವೇಗೌಡ

09:25 PM May 03, 2023 | Team Udayavani |

ಮೈಸೂರು: ನಾನೇ ರಾಜಕೀಯವಾಗಿ ಮೇಲೆ ತಂದ ವ್ಯಕ್ತಿ, ನನ್ನ ಬಗ್ಗೆೆ ಲಘುವಾಗಿ ಮಾತನಾಡಿರುವುದು ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಬನ್ನೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನೆನ್ನೆೆ ಮಧುಗಿರಿ ಯಲ್ಲಿ ನನ್ನ ವಿರುದ್ಧ ಆ ವ್ಯಕ್ತಿ ಆಡಿದ ಮಾತುಗಳನ್ನು ನಾನು ನಿರೀಕ್ಷೆೆ ಮಾಡಿರಲಿಲ್ಲ. ಇದು ದುರಂತ. ಯಾವ ವ್ಯಕ್ತಿಯನ್ನು ನಾನು ರಾಜಕೀಯವಾಗಿ ಗುರುತಿಸಿದೆನೋ ಅದೇ ವ್ಯಕ್ತಿ ಮಧುಗಿರಿಗೆ ಹೋಗಿ ನನ್ನ ಬಗ್ಗೆೆ ಲಘುವಾಗಿ ಮಾತನಾಡಿ, ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದ್ದಾರೆ.

ನಾನು ವರುಣಕ್ಕೆೆ ಹೋಗಿಲ್ಲ. ಹೋಗುವ ಸನ್ನಿವೇಶ ಬರುತ್ತೋ ಏನೋ ಗೊತ್ತಿಲ್ಲ. ಯಾವ ವ್ಯಕ್ತಿ ಪಕ್ಷಕ್ಕೆೆ ನಿಷ್ಠೆೆ ಇಲ್ಲದೇ ಅಧಿಕಾರಕ್ಕಾಗಿ ಕೈಚಾಚುತ್ತಾನೋ ಅಂತ ವ್ಯಕ್ತಿಗೆ ಶ್ರೇಯಸ್ಸು ಇರಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next