Advertisement

ಅರಣ್ಯ ಉಳಿಯಲು ಎಲ್ಲರ ಸಹಕಾರ ಅಗತ್ಯ: ಶ್ರೀಹರ್ಷ

05:44 PM Jan 10, 2020 | Naveen |

ಹಿರಿಯೂರು: ತಾಲೂಕಿನ ವಾಣಿ ವಿಲಾಸ ಜಲಾಶಯ ಪ್ರದೇಶದಲ್ಲಿ 11 ಸಾವಿರ ಹೆಕ್ಟೇರ್‌ ಸೇರಿದಂತೆ ಒಟ್ಟು 16 ಸಾವಿರ ಹೆಕ್ಟೇರ್‌ ಅರಣ್ಯವಿದೆ ಎಂಬುದಾಗಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ವಲಯಾ ಧಿಕಾರಿ ಡಿ.ಎಲ್‌. ಶ್ರೀಹರ್ಷ ಹೇಳಿದರು.

Advertisement

ನಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಜತೆ ಇಲಾಖೆ ಸೌಲಭ್ಯಗಳ
ಕುರಿತ ಮಾಹಿತಿ ನೀಡುವ ಸಭೆಯಲ್ಲಿ ಅವರು ಮಾತನಾಡಿದರು.
ಲಕ್ಕೇನಹಳ್ಳಿ, ಚಳಮಡು, ಅರಿಶಿಣಗುಂಡಿ, ಯಲ್ಲದಕೆರೆ ಮೊದಲಾದ ಗ್ರಾಮಗಳಲ್ಲಿ ಬಹಳ ಹಿಂದೆ 1142 ಹೆಕ್ಟೇರ್‌ ಅರಣ್ಯ ಭೂಮಿಯನ್ನು ರೈತರಿಗೆ ನೋಟಿಫಿಕೇಶನ್‌ ಮಾಡಿಕೊಡಲಾಗಿದೆ. ಪ್ರಸ್ತುತ ಅರಣ್ಯ ಕಾಯ್ದೆ ಕಠಿಣ ಆಗಿರುವುದರಿಂದ ಒತ್ತುವರಿ ಕಡಿಮೆಯಾಗಿದೆ. ಒತ್ತುವರಿ ಮಾಡಿದರೂ ಫಲಾನುಭವಿಗಳಿಗೆ ಹಸ್ತಾಂತರ ಆಗುವುದಿಲ್ಲ. ಬೇಸಿಗೆ ಸಮಯದಲ್ಲಿ ಅರಣ್ಯದಲ್ಲಿನ ಒಣ ಹುಲ್ಲಿಗೆ ಬೆಂಕಿ ಹಚ್ಚುವ ಕೆಲಸವನ್ನು ಕೆಲವು ಪಶುಪಾಲಕರು ಮಾಡುತ್ತಿದ್ದು, ಇದರಿಂದ ಮರ-ಗಿಡಗಳಿಗೆ ಹಾನಿಯಾಗುತ್ತಿದೆ. ರೈತ ಸಂಘದವರು ಜನರಿಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಇಲಾಖೆ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಉದ್ಯಾನವನ ಅಭಿವೃದ್ಧಿಗೆ 2.50 ಕೋಟಿ: ವಾಣಿ ವಿಲಾಸಪುರದಲ್ಲಿರುವ ಉದ್ಯಾನವನ ಹಾಳಾಗಿದ್ದು, 2.50 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು 2.50
ಕೋಟಿ ರೂ. ವೆಚ್ಚದ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಶ್ರೀಹರ್ಷ ರೈತರ ಪ್ರಶ್ನೆಗೆ ಉತ್ತರಿಸಿದರು.

“ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಒಂದು ಹೆಕ್ಟೇರ್‌ನಲ್ಲಿ ನೆಟ್ಟಿರುವ ಗರಿಷ್ಠ 400 ಗಿಡಗಳಿಗೆ ಮೂರು ಹಂತದಲ್ಲಿ 100 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಇಲ್ಲಿ ನೀಲಗಿರಿ, ಅಕೇಷಿಯಾ, ಸಿಲ್ವರ್‌ ಓಕ್‌, ರಬ್ಬರ್‌, ಸುಬಾಬುಲ್‌, ತೆಂಗು, ಅಡಿಕೆ, ಕಿತ್ತಳೆ ಇಂತಹ ಗಿಡಗಳು ಸದರಿ ಯೋಜನೆಗೆ ಅರ್ಹವಲ್ಲ. ನಮ್ಮ ಇಲಾಖೆಯಿಂದ ಪ್ರಸ್ತುತ ವರ್ಷ ಬೇಲ, ತೇಗ, ಶ್ರೀಗಂಧ, ಬೀಟೆ, ಸಂಪಿಗೆ, ಮುತ್ತುಗ, ಹೆಬ್ಬೇವು ಸೇರಿ 30 ಬಗೆಯ 15 ಸಾವಿರ ಸಸಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮರಪಟ್ಟ ಯೋಜನೆಯಡಿ ರೈತರು ಮನೆ ಹಾಗೂ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಮರ ಬೆಳೆಸಬಹುದು. ಮರದಿಂದ ಬರುವ ಆದಾಯ ರೈತರಿಗೆ ಸೇರುತ್ತದೆ ಎಂದರು.

ಶ್ರೀಗಂಧ, ತೇಗ, ಬೀಟೆ, ಹೊನ್ನೆ ಮರಗಳಿಗೆ ಮಾರುಕಟ್ಟೆಯಲ್ಲಿ ತುಂಬ ಬೇಡಿಕೆ ಇದೆ. ಶ್ರೀಗಂಧವನ್ನು ಬೈಬ್ಯಾಕ್‌ ಯೋಜನೆಯಡಿ ಬೆಳೆಯಬಹುದಾಗಿದೆ. ಪ್ರಸ್ತುತ ಪ್ರತಿ ಕೆಜಿಗೆ 12,000 ರೂಪಾಯಿ ದರವಿದೆ. ಕನಿಷ್ಠ 15 ವರ್ಷ ಬೆಳೆಸಬೇಕು. 20-25 ವರ್ಷಕ್ಕೆ ಉತ್ತಮ ಮರ ಕೈಗೆ ಬರುತ್ತದೆ. ಮೈಸೂರು ಸ್ಯಾಂಡಲ್‌ ನಂತಹ ಕಂಪನಿಗಳು ಪ್ರತಿ ಮರಕ್ಕೆ 81 ಸಾವಿರ ರೂಪಾಯಿ ಕೊಡುವುದುಂಟು.
ಬೈಬ್ಯಾಕ್‌ ಒಪ್ಪಂದ ಮಾಡಿಕೊಂಡಲ್ಲಿ ಇನ್ನೂ ಲಾಭದಾಯಕ. ಶ್ರೀಗಂಧ ಮತ್ತು ತೇಗ ಈ ಭಾಗದಲ್ಲಿ ಉತ್ಕೃಷ್ಟವಾಗಿ ಬರುತ್ತದೆ. ಫಸಲು ಬರುವವರೆಗೆ ಕಾಯುವ ತಾಳ್ಮೆಬೇಕು ಎಂದರು.

Advertisement

ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಆಗಿಂದಾಗ್ಗೆ ರೈತರ ಜತೆ ಸಭೆ ನಡೆಸುವ ಮೂಲಕ ಇಲಾಖೆ ಸೌಲಭ್ಯಗಳ ಬಗ್ಗೆ ರೈತರಿಗೆ ತಿಳಿಸಬೇಕು ಎಂದರು. ಸಭೆಯಲ್ಲಿ ರೈತ ಮುಖಂಡರಾದ ಆಲೂರು ಸಿದ್ದರಾಮಣ್ಣ, ಬಿ.ಒ. ಶಿವಕುಮಾರ್‌, ದಸ್ತಗೀರ್‌ ಸಾಬ್‌, ತಿಮ್ಮಾರೆಡ್ಡಿ, ವಿ.ಕಲ್ಪನಾ, ಹೊರಕೇರಪ್ಪ, ಎಂ.ಆರ್‌. ಪುಟ್ಟಸ್ವಾಮಿ, ಎಚ್‌.ಕೆ. ಓಬಣ್ಣ, ಲಕ್ಷ್ಮೀಕಾಂತ್‌,
ಸಿದ್ದಪ್ಪ, ಅರಳೀಕೆರೆ ತಿಪ್ಪೇಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next