Advertisement

335 ಕೋಟಿ ರೂ. ನೀಡಲು ಸಚಿವ ಸಂಪುಟ ಅನುಮೋದನೆ

07:34 PM Jul 03, 2022 | Team Udayavani |

ಹಿರೇಕೆರೂರ: ಹಿರೇಕೆರೂರ ಹಾಗೂರಟ್ಟಿàಹಳ್ಳಿ ತಾಲೂಕಿನ 93 ಗ್ರಾಮಗಳಿಗೆತುಂಗಭದ್ರಾ ನದಿಯಿಂದ ಬಹುಗ್ರಾಮಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆಗೆ 335ಕೋಟಿ ರೂ. ನೀಡಲುಸಚಿವ ಸಂಪುಟಅನುಮೋದನೆ ನೀಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

Advertisement

ಪಟ್ಟಣದ ತಮ್ಮನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆನಮ್ಮ ಕ್ಷೇತ್ರದ 36 ಹಳ್ಳಿಗಳಲ್ಲಿ ಬಹುಗ್ರಾಮಕುಡಿಯುವ ನೀರು ಯೋಜನೆಯಡಿನೀರು ಪೂರೈಕೆಯಾಗುತ್ತಿತ್ತು. ಅವುಗಳಲ್ಲಿಬೈರನಪಾದ ಯೋಜನೆಯಡಿ 23ಹಳ್ಳಿಗಳು, ಕಡೂರು ಯೋಜನೆಯಡಿ13 ಹಳ್ಳಿಗಳಿಗೆ ನದಿ ನೀರುಸರಬರಾಜಾಗುತ್ತಿತ್ತು.

ಇನ್ನು 93 ಹಳ್ಳಿಗಳು ನದಿ ನೀರಿನಿಂದವಂಚಿತವಾಗಿದ್ದವು. ನೀರಿನಲ್ಲಿಸಾಕಷ್ಟು ಪ್ರಮಾಣದ ಪೊÉàರೈಡ್‌ಅಂಶ ಇರುವುದರಿಂದ ಜನತೆಯಆರೋಗ್ಯದ ಮೇಲೆ ದುಷ್ಪರಿಣಾಮಬೀರುತ್ತಿತ್ತು.

ಈ ಕುರಿತು ಸರ್ಕಾರಕ್ಕೆಒತ್ತಾಯ ಮಾಡಲಾಗಿತ್ತು. ಸಚಿವಸಂಪುಟ ಸಭೆಯಲ್ಲಿ 93 ಗ್ರಾಮಗಳಿಗೆಬಹುಗ್ರಾಮ ಕುಡಿಯುವ ನೀರುಯೋಜನೆಗೆ 335 ಕೋಟಿ ರೂ.ನೀಡಲು ಆಡಳಿತಾತ್ಮಕ ಅನುಮೋದನೆನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next