Advertisement
ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಶಿವಸೇನಾ ಶಾಸಕರು ಬಂಡೆದ್ದು, ಸರಕಾರ ಪತನದ ಅಂಚಿಗೆ ಬಂದು ನಿಂತ ವೇಳೆ, ಉದ್ಧವ್ ಠಾಕ್ರೆ ಬುಧವಾರ ಸಂಜೆ ಫೇಸ್ಬುಕ್ ಲೈವ್ನಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಏಕನಾಥ್ ಶಿಂಧೆ ಅವರೊಂದಿಗೆ ತೆರಳಿರುವ ಶಾಸಕರಿಂದ ಕರೆಗಳು ಬರುತ್ತಿವೆ, ತಮ್ಮನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ . ಇದು ಸಂಖ್ಯೆಗಳ ಬಗ್ಗೆ ಅಲ್ಲ ಆದರೆ ನನ್ನ ವಿರುದ್ಧ ಎಷ್ಟು ಮಂದಿ ಇದ್ದಾರೆ. ಒಬ್ಬ ವ್ಯಕ್ತಿ ಅಥವಾ ಶಾಸಕ ನನ್ನ ವಿರುದ್ಧ ಇದ್ದರೆ ನಾನು ಸಿಎಂ ಸ್ಥಾನ ಬಿಡುತ್ತೇನೆ ಎಂದರು.
Related Articles
Advertisement
ಇದನ್ನೂ ಓದಿ : ಶಿವಸೇನಾ ಶಾಸಕರ ಬಂಡಾಯ: ಠಾಕ್ರೆ ರಾಜೀನಾಮೆ, ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸಾಧ್ಯತೆ?
ಶಾಸಕರಿಗೆ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ, ಅವರು ಇಲ್ಲಿಗೆ ಬಂದು ನನ್ನ ರಾಜೀನಾಮೆಯನ್ನು ರಾಜಭವನಕ್ಕೆ ತೆಗೆದುಕೊಂಡು ಹೋಗಬೇಕು. ನಾನು ಶಿವಸೇನೆ ಪಕ್ಷದ ಮುಖ್ಯಸ್ಥನ ಸ್ಥಾನವನ್ನು ತೊರೆಯಲೂ ಸಿದ್ಧನಿದ್ದೇನೆ, ಆದರೆ ಇತರರ ಮಾತಿನಿಂದಲ್ಲ, ಆದರೆ ನನ್ನ ಕಾರ್ಯಕರ್ತರು ಹೇಳಬೇಕು ಎಂದರು.
ಯಾವುದೇ ಶಾಸಕರು ನಾನು ಸಿಎಂ ಆಗಿ ಮುಂದುವರಿಯಬಾರದು ಎಂದು ಬಯಸಿದರೆ, ಸಿಎಂ ಅಧಿಕೃತ ನಿವಾಸ ವರ್ಷಾ ಬಂಗಲೆಯಿಂದ ಮಾತೋಶ್ರೀಗೆ ನನ್ನ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಾನು ಸಿದ್ಧನಿದ್ದೇನೆ ಎಂದರು.