Advertisement

ಮೆಲ್ಬೋರ್ನ್: ದೇಗುಲದ ಮೇಲೆ ಖಲಿಸ್ಥಾನ ಬೆಂಬಲಿಗರ ದಾಳಿ

11:31 PM Jan 12, 2023 | Team Udayavani |

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಇರುವ ಬಿಎಪಿಎಸ್‌ ಸ್ವಾಮಿ ನಾರಾಯಣ ಮಂದಿರದ ಮೇಲೆ  ಖಲಿಸ್ಥಾನ ಬೆಂಬಲಿಗರು ದಾಳಿ ನಡೆಸಿದ್ದಾರೆ.

Advertisement

ಜತೆಗೆ ಗೋಡೆಯ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದಿದ್ದಾರೆ. ಜತೆಗೆ ಉಗ್ರಗಾಮಿ ಬಿದ್ರನ್‌ವಾಲೆಯನ್ನು ಶ್ಲಾ ಸಿ ಬರೆಯಲಾಗಿದೆ.  ಘಟನೆಯ ಬಗ್ಗೆ ದೇಗುಲದ ಆಡಳಿತ ಮಂಡಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ದೇಗುಲದ ಮೇಲೆ ನಡೆಸಲಾಗಿರುವ ದಾಳಿ ಮತ್ತು ಭಾರತ ವಿರೋಧಿ ಬರಹಗಳಿಂದ ನಾವು ಆಘಾತಗೊಂಡಿದ್ದೇವೆ. ಜಗತ್ತಿನ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದು ಅದು ಹೇಳಿದೆ.

ಲಿಬರಲ್‌ ಪಕ್ಷದ ಸಂಸದ ಇವಾನ್‌ ಮುಲ್ಹೋರ್ಡ್‌ ಪ್ರತಿಕ್ರಿಯೆ ನೀಡಿ “ವಿಕ್ಟೋರಿ ಯಾದಲ್ಲಿ ಶಾಂತಿಯಿಂದ ಇರುವ ಹಿಂದೂ ಸಮುದಾಯದ ಮೇಲೆ ನಡೆಸಲಾಗಿರುವ ಕೃತ್ಯ ಖಂಡನೀಯ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next