Advertisement

ಪೆರೋಲ್‌ ರಜೆ ಮೇಲೆ ತೆರಳಿ ತಲೆಮರೆಸಿಕೊಂಡ ಕೈದಿಗಳು

03:31 PM Aug 27, 2021 | Team Udayavani |

ಬೆಳಗಾವಿ: ಪೆರೋಲ್‌ ರಜೆ ಮೇಲೆ ತೆರಳಿದ್ದ ಇಲ್ಲಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಆರೋಪಿಗಳಾದ ರಮೇಶ ವೆಂಕಟರವಣಪ್ಪ ಕುರಿ ಹಾಗೂ ಈಶ್ವರ ಮಲ್ಲಪ್ಪ ವಗ್ಗರ ಕಾರಾಗೃಹಕ್ಕೆ ಮರಳಿ ಶರಣಾಗದೇ ತಲೆಮರೆಸಿಕೊಂಡಿದ್ದಾರೆ.

Advertisement

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳಿಹಟ್ಟಿ ಗ್ರಾಮದ ರಮೇಶನಿಗೆ ಬೆಳಗಾವಿ ಅನಗೋಳದ ಮುಸ್ಲಿಂ ಗಲ್ಲಿಯ ಅಯಾಜ್‌ ಮೆಹಬೂಬ ಅಲಿ ಶೇಖ ಜಾಮೀನಿನ ಮೇಲೆ ಹೋಗಲು ಜಾಮೀನುದಾರನಾಗಿದ್ದು, ಕೋವಿಡ್‌ -19 ನಿಮಿತ್ತ ಸರ್ಕಾರದ ಆದೇಶದಂತೆ ಆರೋಪಿ ರಮೇಶನು ಮೇ 15 ರಿಂದ ಆ. 16ರವರೆಗೆ 90 ದಿನಗಳ ಪೆರೋಲ್‌ ರಜೆಯ ಮೇಲೆ ಹೋಗಿದ್ದನು.ಆ. 17ರ ಸಂಜೆ 5:30ಕ್ಕೆ ಕಾರಾಗೃಹಕ್ಕೆ ಮರಳಿ ಶರಣಾಗಿಲ್ಲ. ರಮೇಶ ವೆಂಕಟರವಣಪ್ಪ ಕುರಿ(33) ಕಪ್ಪು ಮೈಬಣ್ಣ ಹೊಂದಿದ್ದಾನೆ. ಉದ್ದನೆಯ ಮುಖ ಹಾಗೂ ಸದೃಢ ಮೈಕಟ್ಟು ಹೊಂದಿದ್ದಾನೆ.

ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಈಶ್ವರ ಮಲ್ಲಪ್ಪ ವಗ್ಗರ(57) ಮೇ 15 ರಿಂದ ಆ. 14ರ ವರೆಗೆ ಸಿದ್ದಪ್ಪ ಮಾರುತಿ ಸಿದ್ದನ್ನವರ ನೀಡಿದ ಜಾಮೀನಿನ ಆಧಾರವಾಗಿ ಪೆರೋಲ್‌ ರಜೆಯ ಮೇಲೆ ಹೋಗಿದ್ದು, ಆ. 15ರಂದು ಮರಳಿ ಕಾರಾಗೃಹಕ್ಕೆ ಶರಣಾಗದೇ ತಲೆಮರೆಸಿಕೊಂಡಿದ್ದಾನೆ.

ಈ ಕುರಿತು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಾಬುದ್ದೀನ್‌ ಮಸಾಕಸಾಬ ಕಾಲೇಖಾನ ಅವರು ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರ‌ಣ ದಾಖಲಿಸಿದಾರೆ. ಆರೋಪಿತರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್‌ ಕಂಟ್ರೋಲ್‌ ರೂಂ. 0831-2405233 ಹಾಗೂ ಪಿ.ಐ. ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯ ಮೊ: 9480804031 ಅಥವಾ ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆ ದೂ:0831-2405252 ಸಂಪರ್ಕಿಸಬಹುದು ಎಂದು ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆ ಎಎಸ್‌ಐ ಎಚ್‌. ಎಚ್‌. ಪಮ್ಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next