Advertisement

ಕನ್ನಡ ಮಾಧ್ಯಮ ಶಾಲೆಯಲ್ಲಿ  ಓದಿದ ಮರ್ಡಿ ಹಿ.ಪ್ರ. ಡಿಜಿಪಿ

10:36 AM Jan 15, 2018 | |

ಉಡುಪಿ: ಹಿಮಾಚಲ ಪ್ರದೇಶ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ)ರಾಗಿ ಅಧಿಕಾರ ಸ್ವೀಕರಿಸಿರುವ ಹಿರಿಯ ಐಪಿಎಸ್‌ ಅಧಿಕಾರಿ ಚೇರ್ಕಾಡಿ ಮೂಲದ ಸೀತಾರಾಮ ಮರ್ಡಿ ಅವರು ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಕುಂಜಾಲು ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಚೇರ್ಕಾಡಿ ಶಾರದಾ ಪ್ರೌಢ ಶಾಲೆಯಲ್ಲಿ ಪ್ರೌಢಶಿಕ್ಷಣ, ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪದವಿ, ಮೈಸೂರು ವಿ.ವಿ.ಯಿಂದ ಎಂಎಸ್‌ಸಿ (ಸಂಖ್ಯಾಶಾಸ್ತ್ರ) ಚಿನ್ನದ ಪದಕ ಗಳಿಸಿದ ಮರ್ಡಿಯವರು ಹಿಮಾಚಲ ಪ್ರದೇಶ ಶ್ರೇಣಿಯ 1986ರ ಬ್ಯಾಚ್‌ ಐಪಿಎಸ್‌ ಅಧಿಕಾರಿ. ಅವರು ಈಗಲೂ ಚೇರ್ಕಾಡಿಯಲ್ಲಿರುವ ಮನೆಗೆ ಬಂದು ಹೋಗುತ್ತಿರುತ್ತಾರೆ. 

Advertisement

ದಕ್ಷತೆಗೆ ಹೆಸರಾದ ಮರ್ಡಿಯವರು ಶಿಮ್ಲಾ ಎಸ್‌ಪಿ, ಡಿಐಜಿ, ಐಜಿ, ಎಡಿಜಿ, ಡಿಜಿಪಿ (ಗೃಹರಕ್ಷಕ ಮತ್ತು ಬಂದೀಖಾನೆ) ಆಗಿ ಕಾರ್ಯನಿರ್ವಹಿಸಿದ್ದು, ಈಗ ಕಾನೂನು ಸುವ್ಯವಸ್ಥೆ ವಿಭಾಗದ ಡಿಜಿಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಚೇರ್ಕಾಡಿ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ಪದ್ಮನಾಭ ಮರ್ಡಿಯವರ ಪುತ್ರ. ಎಸ್‌.ಆರ್‌. ಮರ್ಡಿಯವರ ಪತ್ನಿ ಕುಂದಾಪುರದ ಪ್ರೊ| ಮುರಾರಿ ತೋಳ್ಪಾಡಿ ಅವರ ಪುತ್ರಿ ಡಾ| ಕವಿತಾ ಮರ್ಡಿ. ಇವರು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕಿ. ಪುತ್ರಿಯರಾದ ನೇಹಾ ಮತ್ತು ನಿಧಿ ಅಮೆರಿಕದಲ್ಲಿ ಶಿಕ್ಷಣ ಮತ್ತು ವೃತ್ತಿಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next