Advertisement

Himachal Pradesh; ಕಾಂಗ್ರೆಸ್‌ನ 6 ಅನರ್ಹ ಶಾಸಕರಿಗೆ ಬಿಜೆಪಿ ಉಪ ಚುನಾವಣೆ ಟಿಕೆಟ್‌

12:01 AM Mar 27, 2024 | Team Udayavani |

ಶಿಮ್ಲಾ/ಹೊಸದಿಲ್ಲಿ: ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಅನರ್ಹಗೊಂಡ ಕಾಂಗ್ರೆಸ್‌ನ 6 ಮಾಜಿ ಶಾಸಕರಿಗೆ ಬಿಜೆಪಿ ಮಂಗಳವಾರ ಉಪಚುನಾವಣೆಯ ಟಿಕೆಟ್‌ ಘೋಷಿಸಿದೆ.

Advertisement

ಅನರ್ಹಗೊಳ್ಳುವ ಮುನ್ನ ಇವರೆಲ್ಲ ಯಾವ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದರೋ, ಅದೇ ಕ್ಷೇತ್ರಗಳಲ್ಲಿ ಇವರಿಗೆ ಉಪಚುನಾವಣೆಯ ಟಿಕೆಟ್‌ ಘೋಷಿಸಲಾಗಿದೆ. ಕಳೆದ ವಾರವಷ್ಟೇ ಇವರೆಲ್ಲರೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು.

ಬಿಜೆಪಿ 6ನೇ ಪಟ್ಟಿ ಪ್ರಕಟ: ಈ ನಡುವೆ, ಮಂಗಳವಾರ ಲೋಕ ಸಭೆ ಚುನಾವಣೆಗೆ ತನ್ನ 6ನೇ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಮಣಿಪುರದ 2 ಮತ್ತು ರಾಜಸ್ಥಾನದ 1 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ವಿಶೇಷವೆಂದರೆ ಕೇಂದ್ರ ಸಚಿವ ರಾಜ್‌ ಕುಮಾರ್‌ ರಂಜನ್‌ ಸಿಂಗ್‌ ಸೇರಿದಂತೆ, ಈ ಮೂರೂ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಕೊಕ್‌ ನೀಡಲಾಗಿದೆ. ರಾಜಸ್ಥಾನದ ದೌಸಾದಲ್ಲಿ ಕಾಂಗ್ರೆಸ್‌ನ ಮುರಾರಿ ಲಾಲ್‌ ಮೀನಾ ವಿರುದ್ಧ ಬಿಜೆಪಿ ನಾಯಕ ಕನ್ಹಯ್ಯ ಲಾಲ್‌ ಮೀನಾ ಕಣಕ್ಕಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next