Advertisement

ರೇಸ್‌ ಬಗ್ಗೆ ಸರ್ಕಾರದ ಅಭಿಪ್ರಾಯ ಕೇಳಿದ ಹೈ

04:34 PM Dec 05, 2017 | Team Udayavani |

ಬೆಂಗಳೂರು: ವಿಶೇಷ ಮೇಲುಸ್ತುವಾರಿ ಸಮಿತಿ ನಿಗಾದಲ್ಲಿ ಟರ್ಫ್ ಕ್ಲಬ್‌ ಚಳಿಗಾಲದ ಸೀಸನ್‌ಲ್ಲಿ ಕೆಲ ದಿನಗಳ ಕಾಲ ರೇಸ್‌ ಆಯೋಜಿಸಲು ಅನುಮತಿ ನೀಡುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

Advertisement

ಟರ್ಪ್‌ಕ್ಲಬ್‌ ಪರವಾನಗಿ ನವೀಕರಣಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಬಿಟಿಸಿ, ಟರ್ಫ್ ಕ್ಲಬ್‌ ಸಿಬ್ಬಂದಿ, ರೇಸ್‌ ಕುದುರೆಗಳ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ಎ.ಎಸ್‌ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ನಿರ್ದೇಶನ ನೀಡಿತು.

“ಕ್ಲಬ್‌ಗ ಸಂಬಂಧಿಸಿದಂತೆ ಪ್ರಕರಣವೊಂದರ ತನಿಖೆಯನ್ನು ಸಿಐಡಿ ಇನ್ನೂ ಪೂರ್ಣಗೊಳಿಸಿ ವರದಿ ನೀಡಿಲ್ಲ. ನಿಯಮಗಳನ್ನು ಉಲ್ಲಂ ಸಿ ರೇಸ್‌ ಆಯೋಜಿಸುವುದರಿಂದ, ಹಲವರು ಬಾಜಿ ಕಟ್ಟಿ ಹಣ ಕಳೆದುಕೊಳ್ಳುತ್ತಾರೆ. ಆಡಳಿತ ಮಂಡಳಿ ವಿರುದ್ಧವೂ ಹಲವು ಆರೋಪಗಳಿವೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ರೇಸ್‌ನ ಚಟುವಟಿಕೆಗಳನ್ನು  ನೋಡಿಕೊಳ್ಳಲು ಸರ್ಕಾರವೇ ವಿಶೇಷ ಮೇಲುಸ್ತುವಾರಿ ಸಮತಿಯೊಂದನ್ನು ರಚಿಸಿ, ಈ ಸೀಸನ್‌ಲ್ಲಿ ಕೆಲದಿನಗಳ ಕಾಲ ರೇಸ್‌  ನಡೆಸಲು ಅನುಮತಿ ನೀಡುವ ಕುರಿತ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವ ಬಗ್ಗೆ ಮುಂದಿನ ವಿಚಾರಣೆ ವರದಿ ಸಲ್ಲಿಸುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸಿ  ನೀಡಿ ಡಿಸೆಂಬರ್‌ 12ಕ್ಕೆ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next