Advertisement

ಸಿಎಂ ಮೆಟೀರಿಯಲ್ ಅಲ್ಲದ ನಿತೀಶ್ ಪಿಎಂ ಆಗುವುದು ಹೇಗೆ? : ಗಿರಿರಾಜ್ ಸಿಂಗ್

07:47 PM Aug 22, 2022 | Team Udayavani |

ಗೋಪಾಲಗಂಜ್: ನಿತೀಶ್ ಕುಮಾರ್ ಇಷ್ಟು ವರ್ಷಗಳ ಕಾಲ ಸಿಎಂ ಆಗಿದ್ದರು, ದೇಶದಲ್ಲಿ 8 ಬಾರಿ ಸಿಎಂ ಪ್ರಮಾಣ ವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ಅವರಾದರೂ ಒಮ್ಮೆಯೂ ಸ್ವಂತ ಬಲದಲ್ಲಿ ಸರಕಾರ ರಚಿಸಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

Advertisement

ನಿತೀಶ್ ಕುಮಾರ್ ಅವರಲ್ಲಿ ಯಾವುದೇ ವ್ಯತ್ಯಾಸವಿಲ್ಲ,ಅವರು ಹೊರಟುಹೋದರು. ಬಿಜೆಪಿ ನೀತಿ ಆರ್‌ಜೆಡಿ ಜೊತೆ ಎಂದಿಗೂ ಹೋಗುವುದಿಲ್ಲ.. ನಿತೀಶ್ ಜಿ ಇಡೀ ದೇಶದ ಮೊದಲ ಮುಖ್ಯಮಂತ್ರಿ, ಅವರು 8 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಒಮ್ಮೆಯೂ ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ, ಅವರು ಮುಖ್ಯಮಂತ್ರಿ ಮೆಟೀರಿಯಲ್ ಅಲ್ಲ, ಇನ್ನು ಅವರು ಪ್ರಧಾನಿ ಮೆಟೀರಿಯಲ್ ಆಗುವುದು ಹೇಗೆ ಎಂದು ಲೇವಡಿ ಮಾಡಿದ್ದಾರೆ.

ಅವರ ಅನೇಕ ಸಚಿವರು ನಿತೀಶ್ ಕುಮಾರ್ ಅವರನ್ನು ಪ್ರಧಾನಿಯಾಗಲು ಪೂಜಿಸುತ್ತಿಲ್ಲ. ತೇಜಸ್ವಿ ಯಾದವ್ ಸಿಎಂ ಆಗಲಿ ಎಂದು ಈ ಪೂಜೆ ಮಾಡಲಾಗುತ್ತಿದೆ. ನಿತೀಶ್ ಕುಮಾರ್ ಬಲಿಪಶು ಆಗುತ್ತಾರೆ. ಅವರು ಇಲ್ಲಿಂದ ದಿಲ್ಲಿಗೆ ಬರುವುದಿಲ್ಲ ಎಂದು ಎರಡು ದಿನಗಳ ಭೇಟಿಗಾಗಿ ಗೋಪಾಲಗಂಜ್‌ಗೆ ಆಗಮಿಸಿದ ಕೇಂದ್ರ ಸಚಿವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಮಹಾಮೈತ್ರಿಕೂಟ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next